ಬೆಳೆಗಳಲ್ಲಿ ಕುಲಾಂತರಿ ಪದ್ಧತಿ ಬಂಡವಾಳಶಾಹಿಗಳಿಗೆ ಮಣೆ ಹಾಕಿದಂತೆ. ಈ ಕುಲಾಂತರಿ ಪದ್ಧತಿ ಆಹಾರ ಮಾಲಿನ್ಯ, ಪರಿಸರ ಮಾಲಿನ್ಯದ ಜೊತೆಗೆ ರೈತರ ಮೂಲ ಬೇಸಾಯ ಪದ್ಧತಿ ಕಸಿದುಕೊಂಡಂತಾಗುತ್ತದೆ ಎಂದು ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ. ಹಲವು ದೇಶಗಳು ಕುಲಾಂತರಿ ಬೆಳೆಯನ್ನು ನಿಷೇಧಿಸಿವೆ. ಆದರೆ, ಭಾರತ ಮಾತ್ರ ಇದನ್ನು ಸ್ವೀಕರಿಸುತ್ತಿರುವುದು ದುಃಖದ ಸಂಗತಿಯಾಗಿದೆ. ಈ ತಂತ್ರಜ್ಞಾನದಿಂದ ಕೇವಲ ಪರಿಸರ ಮಾತ್ರ ನಾಶವಲ್ಲ. ಮನುಕುಲಕ್ಕೂ ತೊಂದರೆಯಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕುಲಾಂತರಿ ಪ್ರಯೋಗ ಅನಿವಾರ್ಯವಲ್ಲ. ಯುರೋಪ್ ನ 28ಕ್ಕೂ ಹೆಚ್ಚು ದೇಶಗಳು ಇದನ್ನು ಒಪ್ಪಿಲ್ಲ. ಒರಿಸ್ಸಾ, ಕೇರಳ, ಛತ್ತಿಸ್ ಗಢ್, ಬಿಹಾರ್, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಕೂಡ ಇದನ್ನು ವಿರೋಧಿಸುತ್ತಿವೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕುಲಾಂತರಿ ಪ್ರಯೋಗಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ವೀರೇಶ್, ಎಚ್.ಪಿ. ಹಿರಣ್ಣಯ್ಯ, ಸಣ್ಣ ರಂಗಪ್ಪ, ಮೋಹನ್, ಜಗದೀಶ್ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕುಲಾಂತರಿ ತಳಿ : ಕೃಷಿಗೆ ಧಕ್ಕೆ
Date: