Wednesday, March 12, 2025
Wednesday, March 12, 2025

ಫೇಸ್ಬುಕ್ ಅಸಲಿ v/s ನಕಲಿ

Date:

ಭಾರತದಲ್ಲಿ ದ್ವೇಷ ಭಾಷಣ, ಸುಳ್ಳು ಸುದ್ದಿಗಳು ಮತ್ತು ಹಿಂಸಾಚಾರವನ್ನು ಫೇಸ್ಬುಕ್ನ ನಿಯಮಗಳಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ಫೇಸ್ಬುಕ್ ಆಂತರಿಕ ವರದಿಯಲ್ಲಿ ವಿವರಿಸಲಾಗಿದೆ.
‘ಫೇಸ್ಬುಕ್ ನ ಉದ್ಯೋಗಿಯೊಬ್ಬರು, ತಾವು ಕೇರಳದವರು ಎಂದು ಬಿಂಬಿಸಿಕೊಳ್ಳುವ ಅಂತಹ ನಕಲಿ ಖಾತೆಯನ್ನು 2019ರ ಪೆಬ್ರವರಿಯಲ್ಲಿ ಆರಂಭಿಸಿದ್ದರು. ಆ ಖಾತೆಗೆ ಬರುವ ಸ್ನೇಹ ಸಲಹೆಗಳು, ಸ್ನೆಹ ವಿನಂತಿಗಳು. ವಿಡಿಯೋ ಮತ್ತು ಪೋಸ್ಟ್ ಸಲಹೆಗಳನ್ನು ಫೇಸ್ಬುಕ್ ನಿಯಮಕ್ಕೆ ಅನುಗುಣವಾಗಿ ಅಂಗೀಕರಿಸುತ್ತಾ ಹೋಗುವುದು ಈ ಅಧ್ಯಯನದ ಭಾಗವಾಗಿತ್ತು. ಖಾತೆ ಆರಂಭಿಸಿ ಮೂರು ವಾರಗಳ ಅವಧಿಯಲ್ಲಿ ದ್ವೇಷ ಭಾಷಣ, ಸುಳ್ಳು ಸುದ್ದಿ ಮತ್ತು ಹಿಂಸಾಚಾರವನ್ನು ಉದ್ದೀಪಿಸುವ ಫೇಸ್ಬುಕ್ ಗುಂಪುಗಳ, ಖಾತೆಗಳ, ಪೋಸ್ಟ್ ಗಳ ಸಲಹೆಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದವು. ಇದಕ್ಕೆ ಸಂಬಂಧಿಸಿದ ವರದಿಯನ್ನು ನಂತರದ ಒಂದು ತಿಂಗಳಲ್ಲಿ ಫೇಸ್ಬುಕ್ ಆಂತರಿಕವಾಗಿ ಪ್ರಕಟಿಸಿತ್ತು’ ಎಂಬ ಮಾಹಿತಿ ತಿಳಿದು ಬಂದಿದೆ.
2019ರ ಚುನಾವಣೆ ಸಂದರ್ಭದಲ್ಲಿ ಫೇಸ್ಬುಕ್ ಕೇಂದ್ರ ಕಚೇರಿಯ ಸಂಶೋಧಕರು ಭಾರತಕ್ಕೆ ಭೇಟಿ ನೀಡಿ ಅಲ್ಲಿನ ಉದ್ಯೋಗಿಗಳ ಜತೆ ಮಾತುಕತೆ ನಡೆಸಿದ್ದರು. ಭಾರತದಲ್ಲಿ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಕಠಿಣವಾದ ನಿಯಮಗಳ ಅಗತ್ಯವಿದೆ. ಅವುಗಳನ್ನು ಕಾರ್ಯರೂಪಕ್ಕೆ ತರಬೇಕು ಎಂಬುದು ಅಲ್ಲಿನ ಉದ್ಯೋಗಗಳ ಅಭಿಪ್ರಾಯವಾಗಿತ್ತು ಎಂಬುದನ್ನು ‘ಇಂಡಿಯನ್ ಎಲೆಕ್ಷನ್ “ಕೇಸ್ ಸ್ಟಡಿ” ವರದಿಯಲ್ಲಿ ಫೇಸ್ ಬುಕ್ ದಾಖಲಿಸಿದೆ.
ಕೆಲವು ಗುಂಪುಗಳು ಅದರಲ್ಲೂ ಪ್ರಧಾನವಾಗಿ ಬಹಳಷ್ಟು ಗ್ರೂಪ್ ಗಳು ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್ ಗಳನ್ನು ಮಾಡುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಕಲಿ ಗ್ರೂಪ್ ಗಳನ್ನ ಸೃಷ್ಟಿಸಿ ಸಾಮಾಜಿಕರ ಭಾವನೆ ಕೆರಳುವಂಥ ಪೋಸ್ಟ್ ಗಳನ್ನ ಹಾಕುವ ಪ್ರಯತ್ನಗಳ ಬಗ್ಗೆಯೂ ಈ ವರದಿ
ಅಧ್ಯಯನ ಮಾಡಿದೆ.
ಈ ವರದಿಯನ್ನ ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಅಸಲಿ ಅಥವಾ ನಕಲಿ ಗ್ರೂಪ್ ಯಾವುದು ಎಂದು
ಜಾಲಗಾರರಿಗೆ ಗೊಂದಲವಾಗುವುದಂತೂ ಖಂಡಿತ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ...