ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ 8ವರ್ಷದ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನದ ಅಂಗವಾಗಿ ಇಂದು ಶಿವಮೊಗ್ಗ ದ ಯುವ ಮೋರ್ಚಾ ಬಿಜೆಪಿ ಅವರ ವತಿಯಿಂದ ವಿಕಾಸ ತೀರ್ಥ ಜಾಥಾ ನಡೆಯಿತು.
ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ವಿನೋಬಾ ನಗರದ ಪೊಲೀಸ್ ಚೌಕಿ ವರೆಗೆ ಬುಲೆಟ್ ಬೈಕ್ ಮುಖಾಂತರ ಜಾಥಾ ನಡೆಯಿತು.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರದ ಯುವ ಮೋರ್ಚಾ ಅಧ್ಯಕ್ಷರಾದ ದರ್ಶನ್ ಆರ್.ವಿ, ಜಿಲ್ಲಾ ಖಜಾಂಚಿ ರಾಮಣ್ಣ, ನಗರದ ಉಪಾಧ್ಯಕ್ಷರಾದ ಮಹೇಶ್ , ಮೆಸ್ಕಾಂ ನಿರ್ದೇಶಕರು ದಿನೇಶ್, ಪ್ರಧಾನ ಕಾರ್ಯದರ್ಶಿ ಜಗ್ಗಣ್ಣ ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.