Friday, April 17, 2026
Friday, April 17, 2026

ಕ್ರಿಕೆಟ್ ನಲ್ಲಿ ಕಣ್ಬಿಟ್ಟ ಹಸುಳೆ: ನಮೀಬಿಯ

Date:

ಟಿ – 20 ಟೂರ್ನಿಯ ಎ ಗುಂಪಿನ ಪಂದ್ಯಾವಳಿಯಲ್ಲಿ ಐರ್ಲೆಂಡ್ ಮತ್ತು ನಮಿಬಿಯಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐರ್ಲೆಂಡ್ ತಂಡದ ವಿರುದ್ಧ ನಮಿಬಿಯಾ ತಂಡವು ಭರ್ಜರಿ ಜಯಗಳಿಸಿದೆ. ಶಾರ್ಜಾ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ನಮಿಬಿಯಾ ತಂಡವು ಆಲ್-ರೌಂಡರ್ ಪ್ರದರ್ಶನದೊಂದಿಗೆ ಆಟವಾಡಿ ಇದೇ ಮೊದಲ ಬಾರಿಗೆ ‘ಎ ‘ ಗುಂಪಿನ ತಂಡವಾಗಿ 12 ರ ಹಂತಕ್ಕೆ ಕಾಲಿಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ಗೆ 125 ರನ್ ಗಳಿಸಿತು. 125 ರನ್ ಗಳ ಗುರಿಯನ್ನು ಬೆನ್ನತ್ತಿ ಆಟವಾಡಿದ ನಮಿಬಿಯಾ ತಂಡವು 18.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿದೆ. ಐರ್ಲೆಂಡ್ ತಂಡ ಗಳಿಸಿದ ರನ್ ಗಳನ್ನ ಬೆನ್ನತ್ತಿದ ನಮಿಬಿಯಾ ಆರಂಭಿಕ ಜೋಡಿಯು 25 ರನ್ ಗಳಿಸಿತು. 6 ಓವರ್ ಐರ್ಲೆಂಡ್ ನ ಕರ್ಟಿಸ್ ಕ್ಯಾಂಪರ್ ರವರು ವಿಕೆಟ್ ಪಡೆಯುವ ಮೂಲಕ ಈ ಜೊತೆಯಾಟವನ್ನು ಮುರಿದರು.ಐರ್ಲೆಂಡ್ ತಂಡದ ನಾಯಕ ಗೆರಾರ್ಡ್ ಯರಸ್ಮಸ್ ಅವರು 49 ಎಸೆತಕ್ಕೆ ಅಜೇಯ 53 ರನ್ ಗಳ ಮೂಲಕ ಅರ್ಧಶತಕ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಯರಸ್ಮಸ್ ಮತ್ತು ಗ್ರೀನ್ ಜೊತೆಗೂಡಿ 48 ರನ್ ಕಲೆ ಹಾಕಿದರು ಗ್ರೀನ್ ಔಟಾದ ಬಳಿಕ ಫೀಲ್ಡಿಗೆ ಬಂದ ವೀಸ್ ಬ್ಯಾಟಿಂಗ್ ನಲ್ಲಿ ಮಿಂಚಿದರು. ಒಟ್ಟಾರೆ ಕ್ರಿಕೆಟ್ ಶಿಶುವಾದ ನಮಿಬಿಯಾ ತಂಡವು ರೋಚಕ ಗೆಲುವಿನೊಂದಿಗೆ ಇತಿಹಾಸ ಸೃಷ್ಟಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Shivamogga ಗುಡ್ ಲಕ್ ಆರೈಕೆ ಕೇಂದ್ರದಲ್ಲಿನ ಅನಾಥ ಮಹಿಳೆಯರಿಗೆ ಭಾವನಾ ಜೆಸಿಐನಿಂದ ಉಡುಪು ವಿತರಣೆ

JCI Shivamogga ಶಿವಮೊಗ್ಗ ನಗರದ ಜೆಸಿಐ ಶಿವಮೊಗ್ಗ ಭಾವನದಿಂದ ಗುಡ್...

Brahmakumari Ishwariya University ಆಧ್ಯಾತ್ಮ , ಧ್ಯಾನ ಮತ್ತು ಯೋಗ ಮನುಷ್ಯನ ನೈಜ ಸಂಪತ್ತು-ಬ್ರಹ್ಮಕುಮಾರಿ ಸ್ವಾತಿ

Brahmakumari Ishwariya University ಒತ್ತಡ ಮತ್ತು ಅಶಾಂತಿಯ ಜೀವನಶೈಲಿಯಲ್ಲಿ ಬದುಕುತ್ತಿರುವ ಜನರಿಗೆ...

Dr. B.R. Ambedkar ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ 19 ಜನಕ್ಕೆ ಜೀವ ವಿಮಾ ಬಾಂಡ್ ವಿತರಣೆ

Dr. B.R. Ambedkar ಶಿವಮೊಗ್ಗ ಜಿಲ್ಲೆಯ ಹೊಳೆ ಬೆನವಲ್ಲಿ ಗ್ರಾಮದಲ್ಲಿ ಸಂವಿಧಾನ...

VISL ಡಾ.ಅಂಬೇಡ್ಕರ್ ಮತ್ತು ವಿಶ್ವೇಶ್ವರಯ್ಯನವರ ಜೀವನದ ವಿಚಾರಗಳು ಮಕ್ಕಳಿಗೆ ಅಗತ್ಯ- ಬಿ.ವಿಶ್ವನಾಥ್

VISL ವಿಐಎಸ್‌ಎಲ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ದ ಆಯೋಜಿಸಲಾಗಿತ್ತು. ಈ...