Friday, February 6, 2026
Friday, February 6, 2026

ರೈಲ್ವೆ ಸಂಚಾರದಲ್ಲಿ ಕೆಲವು ಭಾಗಶಃ ರದ್ದುಮತ್ತು ನಿಯಂತ್ರಣ ಮಾಹಿತಿ

Date:

ದೇವನೂರು ಮತ್ತು ಬಾಣಾವರ ರೈಲ್ವೇ ಯಾರ್ಡ್‍ಗಳಲ್ಲಿ ಥಿಕ್ ವೆಬ್‍ಸ್ವಿಚ್ ಅಳವಡಿಸುವ ಕಾರ್ಯದ ಪ್ರಯುಕ್ತ ಲೈನ್ ಅಡಚಣೆಯಾಗಿರುವುದರಿಂದ ಕೆಳಕಂಡ ರೈಲುಗಳನ್ನು ರದ್ದು/ಭಾಗಶಃ ರದ್ದು/ನಿಯಂತ್ರಣಗೊಳಿಸಲಾಗುವುದು.

ರದ್ದು: ರೈಲು ಸಂಖ್ಯೆ 06591 ತುಮಕೂರು-ಶಿವಮೊಗ್ಗ ಪಟ್ಟಣ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ: 10-05-2022, 17-05-2022, 22-05-2022, 27-05-2022 ರಂದು ರದ್ದುಪಡಿಸಲಾಗಿದೆ. ಹಾಗೂ ರೈಲು ಸಂಖ್ಯೆ 06592 ಶಿವಮೊಗ್ಗ ಪಟ್ಟಣ-ತುಮಕೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್

ರೈಲನ್ನು ದಿನಾಂಕ: 11-05-2022, 18-05-2022, 23-05-2022 ಮತ್ತು 28-05-22 ರಂದು ರದ್ದುಪಡಿಸಲಾಗಿದೆ.

ಭಾಗಶಃ ರದ್ದು : ರೈಲು ಸಂಖ್ಯೆ 07368 ಎಸ್‍ಎಸ್‍ಎಸ್ ಹುಬ್ಬಳ್ಳಿಯಿಂದ ಹೊರಡುವ ಎಸ್‍ಎಸ್‍ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ 10-05-2022, 17-05-2022, 27-05-2022 ರಂದು ಬೀರೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ಬೀರೂರು ಸ್ಟೇಷನ್‍ನಲ್ಲಿ ಸಮಾಪ್ತಿಗೊಳಿಸಲಾಗುವುದು.
ಅರಸೀಕೆರೆಯಿಂದ ಹೊರಡುವ ರೈಲು ಸಂಖ್ಯೆ 07367 ಅರಸೀಕೆರೆ –ಎಸ್‍ಎಸ್‍ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ರೈಲನ್ನು ದಿನಾಂಕ: 10.05.2022, 17.05.2022, 22.05.2022 & 27.05.2022 ರಂದು ಅರಸೀಕೆರೆ ಮತ್ತು ಶಿವಮೊಗ್ಗ ಪಟ್ಟಣದ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ಅರಸೀಕೆರೆ ಸ್ಟೇಷನ್‍ನಲ್ಲಿ ಸಮಾಪ್ತಿಗೊಳಿಸಲಾಗುವುದು.

ಶಿವಮೊಗ್ಗ ಪಟ್ಟಣದಿಂದ ಹೊರಡುವ ರೈಲು ಸಂಖ್ಯೆ 12090 ಶಿವಮೊಗ್ಗ ಪಟ್ಟಣ-ಕೆಎಸ್‍ಆರ್ ಬೆಂಗಳೂರು ಜನಶತಾಬ್ದಿ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 11.05.2022, 18.05.2022, 23.05.2022 & 28.05.2022 ರಂದು ಶಿವಮೊಗ್ಗ ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು ಹಾಗೂ ನಿಗದಿತ ವೇಳಾಪಟ್ಟಿಯಂತೆ ಈ ರೈಲು ಶಿವಮೊಗ್ಗದ ಬದಲಾಗಿ ಅರಸೀಕೆರೆಯಿಂದ ಪ್ರಾರಂಭಿಸಲಾಗುವುದು.

ನಿಯಂತ್ರಣ : ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16535 ಮೈಸೂರು-ಸೋಲಾಪುರ್ ಗೋಲ್‍ಗುಂಬಜ್ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 10.05.2022, 17.05.2022, 22.05.2022 & 27.05.2022 ರಂದು ಸ್ಟೇಷನ್ ಮಾರ್ಗದಲ್ಲಿ 70 ನಿಮಿಷಗಳ ಕಾಲ ನಿಯಂತ್ರಣದಲ್ಲಿಡಲಾಗುವುದು(regulated).
ಮಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಜೆಎನ್-ವಿಜಯಪುರ ಡೈಲಿ ಎಕ್ಸ್‍ಪ್ರೆಸ್ ಸ್ಪೆಷಲ್ ರೈಲನ್ನು 10.05.2022, 17.05.2022, 22.05.2022 & 27.05.2022 ರಂದು ಸ್ಟೇಷನ್ ಮಾರ್ಗದಲ್ಲಿ 70 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಡೈಲಿ ಎಕ್ಸ್‍ಪ್ರೆಸ್ ರೈಲನ್ನು 10.05.2022, 17.05.2022, 22.05.2022 & 27.05.2022ಸ್ಟೇಷನ್ ಮಾರ್ಗದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...