Wednesday, October 2, 2024
Wednesday, October 2, 2024

ಸತತ ಐದು ಸೋಲುಗಳ ನಂತರ ಗೆದ್ದ ಕಲ್ಕತ್ತಾ ತಂಡ

Date:

ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 15ನೇ ಆವೃತ್ತಿಯ 47ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್ ಗಳಿಂದ ಜಯ ಸಾಧಿಸಿತು.
ಈ ಮೂಲಕ ಸತತ ಐದು ಸೋಲುಗಳ ನಿರಾಸೆಯಿಂದ ಹೊರಬಂತು. ಅದ್ಯಾಗೋ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ ನಾಲ್ಕನೆ ಜಯ ಸಾಧಿಸಿದ್ದು 18 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಮಾಡಿದ ರಾಜಸ್ಥಾನ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಕಲ್ಕತ್ತಾ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 158 ರನ್ ಬಾರಿಸಿ ಗೆಲುವು ಸಾಧಿಸಿತು.
ಉತ್ತಮ ಜೊತೆಯಾಟ ಆಡಿದ ನಿತೀಶ್ ರಾಣ (48) ಹಾಗೂ ರಿಂಕು ಸಿಂಗ್ (42) ಗೆಲುವಿನ ರೂವಾರಿ ಎನಿಸಿಕೊಂಡರು.
ಪ್ಲೇಆಫ್ ಸನಿಹ ಗೊಳ್ಳುತ್ತಿರುವ ಕಾರಣ ಅಂಕಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿ ಕಣಕ್ಕಿಳಿದ ರಾಯಲ್ಸ್ ಪರ ಇನಿಂಗ್ಸ್ ಆರಂಭಿಸಿದ ದೇವದತ್ ಪಡಿಕ್ಕಲ್ ಹಾಗೂ ಬಟ್ಲರ್ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲಗೊಂಡರು.
ಆರ್ಸಿಬಿ ಮತ್ತು ಮುಂಬೈ ವಿರುದ್ಧ ನಿರಾಸೆ ಮೂಡಿಸಿದ್ದ ಪಡಿಕಲ್, ಈ ಪಂದ್ಯದಲ್ಲಿ ಅಬ್ಬರಿಸಿ ಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕೇವಲ ಎರಡು ರನ್ ಗಳಿಗೆ ಉಮೇಶ್ ಯಾದವ್ ಗೆ ಟಿಕೆಟ್ ಕೊಟ್ಟು ಪೆವಿಲಿಯನ್ ಗೆ ಮರಳಿದರು. ಇಂದಿನ ಆವೃತ್ತಿಯಲ್ಲಿ ಮಿಂಚಿದ್ದ ಪಡಿಕಲ್, ತಮ್ಮ ಎಂದಿನ ಲಯಕ್ಕೆ ಮರಳಲು ಸಾಧ್ಯವಾಗಲಿಲ್ಲ. ಅತ್ತ ತಲಾ ಎರಡು ಶತಕ ಮತ್ತು ಅರ್ಧಶತಕ ಗಳಿಸಿರುವ ಇಂಗ್ಲೆಂಡ್ ಬ್ಯಾಟರ್ ಬಟ್ಲರ್, ಎಚ್ಚರಿಕೆ ಆಟವಾಡಿದರು 22 ರನ್ ಗಳಿಗೆ ಸೀಮಿತಗೊಂಡಿದ್ದು , ರೈಮ್ಸ್ ಗೇಮ್ ಆರಂಭಿಕ ಹಿನ್ನಡೆಯಾದರೆ , ಕೊಲ್ಕತ್ತಾಗೆ ಮೇಲುಗೈ ತಂದುಕೊಟ್ಟಿತು.
ಎರಡನೇ ವಿಕೆಟ್ಗೆ ಬಟ್ಲರ್ ಜೊತೆ 48 ಜೊತೆಯಾಟದಲ್ಲಿ ಭಾಗಿಯಾದ ಸಂಜು ಸಮ್ಸನ್, ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ಆದರೆ ಹಾಲಿ ಟೂರ್ನಮೆಂಟ್ ನಲ್ಲಿ ಮೂರನೇ ಪಂದ್ಯವಾಡಿದ ಕರ್ನಾಟಕದ ಕರುಣ್ ನಾಯರ್ ಎದುರಾಳಿ ಬೌಲರ್ ಗಳ ಬಿಗು ದಾಳಿಗೆ ರನ್ ಗಳಿಸಲು ತಡಕಾಡಿದರು. ಅಂತಿಮವಾಗಿ 13 ರನ್ ಗಳಿಗೆ ಅನುಕೂಲ್ ರಾಯ್ ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಶಾಂತಚಿತ್ತರಾಗಿ ಬ್ಯಾಟಿಂಗ್ ನಡೆಸಿದ ಸಂಜು ಸಮ್ಸನ್, ಮತ್ತೆಂಟು ಎಸೆತದಲ್ಲಿ ಅರ್ಧ ಶತಕ ಪೂರೈಸಿ ಸಂಭ್ರಮಿಸಿದರು. ಇದು ಪ್ರಸಕ್ತ ಸಾಲಿನಲ್ಲಿ ಸಂಜು ಸಾಮ್ಸಂಗ್ ಗಳಿಸಿದ ಎರಡನೇ ಅರ್ಧಶತಕ.
14 ಓವರ್ ಗಳಲ್ಲಿ ಮೂರಂಕಿ ಮೊತ್ತ ಮುಟ್ಟಿದ ರಾಜಸ್ಥಾನ ಬಿರುಸಿನ ಆಟದೊಂದಿಗೆ ರನ್ ಗಳಿಸುವ ಲೆಕ್ಕಾಚಾರದಲ್ಲಿತ್ತು. ಆದರೆ 15ನೇ ಓವರ್ ಎಸೆದ ಉಮೇಶ್ ಯಾದವ್ ಕೇವಲ 5 ರನ್ ನೀಡಿ ವೇಗಕ್ಕೆ ಇನ್ನಷ್ಟು ಕಡಿವಾಣ ಹಾಕಿದರು. ಸುನಿಲ್ ನರೈನ್ ಎಸೆದ ಮರು ಓವರ್ ನಲ್ಲಿಯೂ ರನ್ ಗಳಿಸಲು ತಿಣುಕಾಡಿದ ರಾಯಲ್ಸ್ ಬ್ಯಾಟ್ಸ್ ಮ್ಯಾನ್ ಗಳು ಕೇವಲ ಮೂರು ರನ್ ಗೆ ಸೀಮಿತ ಗೊಂಡರು. ಹೀಗೆ ನಿರೀಕ್ಷಿತ ಮೊತ್ತಕ್ಕೆ ಕತ್ತರಿ ಬಿದ್ದಿತ್ತು. ಈ ಮಧ್ಯೆ, ಉತ್ತಮವಾಗಿ ಆಡುತ್ತಿದ್ದ ರಿಯನ್ ಪರಾಗ್ (19) ಮತ್ತು ಸಂಜು ಸಮ್ಸನ್ ವಿಕೆಟ್ ಒಪ್ಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...