ನಮ್ಮಲ್ಲಿ ಒಂದು ಮಾತಿದೆ ಕಾಲ ಯಾರಿಗೂ ಕಾಯೋದಿಲ್ಲ.!
ಆ ಸಮಯಕ್ಕೆ ಏನು ಆಗಬೇಕು ಅಂತ ಇರುತ್ತೋ ಅದೇ ಆಗುತ್ತದೆ.
ಯಾವುದನ್ನು ಯಾರೂ ತಪ್ಪಿಸೋಕೆ ಆಗೋದಿಲ್ಲ.
ನೋಡಿ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದ ಘಟನೆ ಇದಕ್ಕೊಂದು ಉದಾಹರಣೆ.
ಏಪ್ರಿಲ್ ಇಪ್ಪತ್ತೆರಡ ರಂದು ಮದುವೆ ನಡೆಯೋದಿತ್ತು.ಮಲ್ಕಾಪುರ ಪಾಂಗ್ರಾ ಗ್ರಾಮದಲ್ಲಿ ಭರ್ಜರಿ ಚಪ್ಪರ,ಶಾಮಿಯಾನ,ವಾದ್ಯಮೇಳ
ರುಚಿರುಚಿಯಾದ ತಿಂಡಿ ನಂತರ ಭೂರಿ ಭೋಜನ ಏರ್ಪಾಡಾಗಿತ್ತು.
ಅಪರಾಹ್ನ ನಾಕು ಗಂಟೆಗೆ ಮುಹೂರ್ತ. ವಧು ಸಿಂಗಾರ ಮಾಡಿಕೊಂಡು ರೆಡಿ!.
ಆದರೆ ವರ ಬಂದೇ ಇಲ್ಲ! ಹುಡುಕಾಡಿದರು. ಎಲ್ಲಿ ಹುಡುಕಿದರೂ ಇಲ್ಲ.ನಾಪತ್ತೆ !
ಕನ್ಯಾಪಿತೃಗಳ ಗೋಳು ಹೇಳತೀರದು. ಸುಮಾರು ಹೊತ್ತು ಕಾದರು. ವರನ ಬಂಧುಗಳ ಬಳಿಯೂ ವರನ ಮಾಹಿತಿಯಿಲ್ಲ!.
ಕೊನೆಗೆ ಬೇಸತ್ತ ಹೆಣ್ಷಿನ ತಂದೆ.
ಮದುವೆಗೆ ಬಂದಿದ್ದ ಬಂಧುಗಳಲ್ಲಿ ಎಲಿಜಿಬಲ್ ಬ್ಯಾಚಲರ್ ನನ್ನ ಆರಿಸಿದರು. ಮಗಳಿಗೆ ಸಮಾಧಾನ ಹೇಳಿ ಒಪ್ಪಿಸಿದರು.
ಅಕಸ್ಮಿಕ ಆಮಂತ್ರಣದಿಂದ ವರನ ಪಟ್ಟ ಪಡೆದ ಯುವಕ ತಾಳಿ ಕಟ್ಠೇ ಬಿಟ್ಟ. ಮದುವೆ ನಡೆದೇ ಹೋಯಿತು. ಎಲ್ಲರೂ ಸಿಹಿ ಊಟಮಾಡಿ ಸಂತೋಷಪಟ್ಟರು.
ರಾತ್ರಿ ಎಂಟುಗಂಟೆಗೆ ಒಂದು ಗುಂಪು ಮದುವೆ ಮಂಟಪದೊಳಕ್ಕೆ ನುಗ್ಗಿತು.
ಆ ಗುಂಪಿನಲ್ಲಿ ಒರಿಜಿನಲ್ ವರ ಇದ್ದ. ಆದರೆ ಅವನಾಗಲೇ ಮದ್ಯಹೀರಿ ಅಮಲಿನಲ್ಲಿ ಓಲಾಡುತ್ತಿದ್ದ.
ಮುಹೂರ್ತಕ್ಕೆ ಬರಬೇಕಾದವನು.ಗೆಳೆಯರೊಂದಿಗೆ ಬಾರಿನಲ್ಲಿ ಕುಣಿದುಕುಪ್ಪಳಿಸಿ ಮದುವೆಗೆ ಬರುವುದನ್ನೇ ಮರೆತಿದ್ದ.
ವಿಷಯ ಗೊತ್ತಾಯಿತು.
ಸಮಯಕ್ಕೆ ಸರಿಯಾಗಿ ಬಂದಿದ್ರೆ
ಗೃಹಸ್ಥನಾಗುತ್ತಿದ್ದೆ ಎಂದು ಅಮಲು
ಇಳಿದ ಮೇಲೆ ಜ್ಞಾನೋದಯವಾಯಿತು.ಕಾಲ ಮೀರಿತ್ತು. ಗೊತಗತಾಗಿದ್ದ ಸುಂದರಿ ಕೈತಪ್ಪಿದ್ದಕ್ಕೆ ವಿಲವಿಲ ಒದ್ದಾಡಿದ.
ಮತ್ತೆ ವರ ನಾಗೇ ಉಳಿದ.
ಟೈಮಿಗೆ ಬೆಲೆ ಕೊಟ್ರೆ
ಅದೂ ನಮಗೆ ಬೆಲೆ ಕೊಡತ್ತೆ ಅಲ್ವೆ?