Monday, December 15, 2025
Monday, December 15, 2025

ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಸದಾ ಸಿದ್ಧ- ಮಾಯಣ್ಣಗೌಡ

Date:

ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಸದಾಕಾಲ ಸಿದ್ಧರಿರುವುದಾಗಿ ಮಹಾನಗರಪಾಲಿಕೆ ಆಯುಕ್ತ ಕೆ. ಮಾಯಣ್ಣ ಗೌಡ ಅವರು ಭರವಸೆ ನೀಡಿದರು.

ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ನಗರದ ಮೂಲಭೂತ ಸೌಕರ್ಯಗಳು ಹಾಗೂ ಕುಂದು ಕೊರತೆಗಳ ಕುರಿತು ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗೋಪಿನಾಥ್ ಗಿರಿಮಾಜಿಯವರ ಕಾಮಗಾರಿಗಳ ಪರಿಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ
ಸಾಗರ ರಸ್ತೆ ಕೈಗಾರಿಕಾ ವಲಯದ ಅಧ್ಯಕ್ಷ ಉಮೇಶ್ ಕೇಳಿದ ಪ್ರಶ್ನೆಗಳಿಗೆ ಸಾಗರ ರಸ್ತೆ ಕೈಗಾರಿಕಾ ವಲಯದ ಮೂಲಭೂತ ಸೌಕರ್ಯ ಕುಂದುಕೊರತೆಗಳ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ . ಕಸವಿಲೇವಾರಿಗೆ ವಾಹನಗಳ ಕೊರತೆಯಿದ್ದು , ಕಸ ವಿಲೇವಾರಿ ಬಗ್ಗೆ ಈಗಾಗಲೇ ಕ್ರಮ ವಹಿಸುವುದಾಗಿ ಭೂಮಿ ತೆರಿಗೆ ವಿಚಾರವಾಗಿ ಸದ್ಯದಲ್ಲೇ ಸರ್ಕಾರಿ ಆದೇಶ ಗೆಜೆಟ್ ನಲ್ಲಿ ಪ್ರಕಟವಾಗಲಿದೆ ಎಂದರು.

ಸಣ್ಣ ಕೈಗಾರಿಕಾ ನಿಯಮದ ಉಪಾಧ್ಯಕ್ಷ ದತ್ತಾತ್ರಿ ಎಲ್ಲೋ ಕೈಗಾರಿಕಾ ಪ್ರದೇಶಗಳನ್ನು ಒಂದು ಪ್ರತ್ಯೇಕ ವಾರ್ಡ್ ಆಗಿ ಪರಿಗಣಿಸಿದಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಲು ಅನುಕೂಲವಾಗುತ್ತದೆ ಎಂದು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಲವಾರು ದೂರುಗಳು ಬಂದಿದ್ದು, ಇದು ಪ್ರತೀಕವಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದ್ದು, ಅದು ಅವೈಜ್ಞಾನಿಕವಾಗಿರುವುದಾಗಿ ದೂರುಗಳು ಬಂದಿದ್ದು, ಸದರಿ ಇಲಾಖೆಯಿಂದ ಸಾರ್ವಜನಿಕ ಪ್ರಕಟಣೆ ಸದ್ಯದಲ್ಲೇ ಹೊರೆ ಬೀಳಲಿದೆ ಎಂದರು.ರಾಜೇಂದ್ರ ಪ್ರಸಾದ್ ನಗರದಲ್ಲಿ ವಿಮಾನಯಾನ ಆರಂಭದ ಬಳಿಕ ಶಿವಮೊಗ್ಗ ನಗರ ಬಿ ದರ್ಜೆಯ ಸಿಟಿ ಯಾಗುತ್ತಿರುವುದರಿಂದ ತೆರಿಗೆಗಳು ಹೆಚ್ಚಿನ ವಾಗುತ್ತವೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇದರಿಂದ ಯಾವುದೇ ಅಧಿಕವಾದ ಮೌಲ್ಯವರ್ಧಿತ ತೆರಿಗೆಗಳ ಹೆಚ್ಚಳವಾಗುವುದಿಲ್ಲ. ಆದರೆ ನೌಕರರ ಪ್ರಯಾಣ ಭತ್ಯೆ, ತುಟ್ಟಿ ಭತ್ಯೆಗಳು ಹೆಚ್ಚಾಗುವುದಾಗಿ ತಿಳಿಸಿದರು.

ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಅವರು ಮಾತನಾಡಿ, ಆಯುಕ್ತರು ಅನೇಕ ದೇಶಗಳನ್ನು ಸುತ್ತಾಡಿ ಜ್ಞಾನವನ್ನು ಪಡೆದುಕೊಂಡ ಸಂಪನ್ಮೂಲ ವ್ಯಕ್ತಿಗಳಾಗಿದ್ದಾರೆ. ಈ ಮೂಲಕ ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಹೊರೆಯಾಗದೆ ತೊಂದರೆಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಶಿವಮೊಗ್ಗವನ್ನು ಸುಂದರ ಸ್ವಚ್ಛ ನಗರವನ್ನಾಗಿಸುವ ಮನಸ್ಸನ್ನು ಹೊಂದಿದ್ದಾರೆ ಎಂದರು..

ಕಾರ್ಯಕ್ರಮದಲ್ಲಿ ಸಹಕಾರ್ಯದರ್ಶಿ ಜಿ. ವಿಜಯ್ ಕುಮಾರ್, ಬಿ.ಆರ್. ಸಂತೋಷ್, ಕಾರ್ಯದರ್ಶಿ ವಸಂತ, ನಿಕಟಪೂರ್ವ ಅಧ್ಯಕ್ಷ ಜೆ.ಆರ್. ವಾಸುದೇವ, ಮೂಲಭೂತ ಸೌಕರ್ಯ ಹಾಗೂ ಕುಂದುಕೊರತೆಗಳ ಸಮಿತಿಯ ಚೇರ್ಮನ್ ಕೆ.ಎಸ್. ಸುಕುಮಾರ್, ಹಾಗೂ ಸಂಯೋಜಿತ ಸಂಘಗಳ ಪದಾಧಿಕಾರಿಗಳು, ಮಹಾನಗರ ಪಾಲಿಕೆಯ ಇಂಜಿನಿಯರ್ ಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...