Wednesday, December 17, 2025
Wednesday, December 17, 2025

ಸನ್ ರೈಸರ್ಸ್ ವಿರುದ್ಧ ಟೈಟನ್ಸ್ ಜಯಭೇರಿ

Date:

ಗುಜರಾತ್ ವಿರುದ್ಧ ಹೈದರಾಬಾದ್ ಗೆ ಐದು ವಿಕೆಟ್ ಗಳ ಸೋಲು. ಸನ್ ರೈಸರ್ಸ್ ಓಟಕ್ಕೆ ಬ್ರೇಕ್ ಹಾಕಿದ ಟೈಟನ್ಸ್ ಪಡೆಕೊನೆ ಓವರ್ ನಲ್ಲಿ ಗೆಲ್ಲಲು ಗುಜರಾತ್ ಟೈಟನ್ಸ್ ಗೆ 22 ರನ್ ಗಳ ಅವಶ್ಯಕತೆ ಇತ್ತು. ಆದರೆ ನಾಲ್ಕು ಸಿಕ್ಸರ್ ಸಮೇತ 25ರಂದು ಬಾರಿಸಿ, ಸನ್ ರೈಸಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಪಡೆಯಿತು. ಈ ಮೂಲಕ ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಹೇಳು ಗೆಲುವು ದಾಖಲಿಸಿ ಒಟ್ಟಾರೆ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನ ಪಡೆಯಿತು.


ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 15ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದ್ರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡ 20 ಅವರುಗಳು ಮುಕ್ತಾಯಗೊಂಡಾಗ 5 ವಿಕೆಟ್ ನಷ್ಟಕ್ಕೆ 199 ಬಾರಿಸಿ ಜಯಶಾಲಿಯಾಯಿತು. ರಾಹುಲ್ ತೆವತಿಯಾ( 40 ರನ್, 21 ಎಸೆತ, 4 ಫೋರ್, ಎರಡು ಸಿಕ್ಸರ್) ಹಾಗೂ ರಶೀದ್ ಖಾನ್ (31ರನ್, 11 ಎಸೆತ, 4 ಸಿಕ್ಸರ್) ಕೊನೆ 24 ಎಸೆತಗಳಲ್ಲಿ 59 ರನ್ ಬಾರಿಸುವ ಮೂಲಕ ಗೆಲುವಿನ ರೂವಾರಿ ಯಾದರು. ಅದಕ್ಕೂ ಮೊದಲು ವೃದ್ಧಿಮಾನ್ ಸಹ 68 ರನ್ ಬಾರಿಸಿ ಹೋರಾಟಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.

ಮತ್ತೊಮ್ಮೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, 25 ರನ್ ಗಳಿಗೆ 5 ವಿಕೆಟ್ ಕಬಳಿಸಿದ ಎಸ್ ಆರ್ ಎಚ್ ನ ಅಮ್ರನ್ ಮಲಿಕ್ ಹೋರಾಟ ವ್ಯರ್ಥವಾಯಿತು. ಇದರೊಂದಿಗೆ ಎಸ್ ಆರ್ ಎಚ್ ನ ಸತತ 5 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿತ್ತು.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ವೇನೋ ದೊರೆಯಲಿಲ್ಲ. ನಾಯಕ ಕೇನ್ ವಿಲಿಯಮ್ಸನ್ 5 ರನ್ ಗಳಿಸಿ ಟೈಟನ್ಸ್ ವೇಗಿ ಮೊಹಮ್ಮದ್ ಶಮಿ ಎಸೆತಕ್ಕೆ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಗೆ ತೆರಳುವ ಮೂಲಕ ನಿರಾಸೆ ಕಂಡರು.

ಬಳಿಕ ಕ್ರೀಸ ಗೆ ಬಂದ ರಾಹುಲ್ ತ್ರಿಪಾಠಿ ಆರ್ಭಟಿಸುವ ಸುಳಿವು ನೀಡಿದ್ದೇನೆ ನಿಜ, ಆದರೆ, 10 ಎಸೆತಗಳಲ್ಲಿ 16 ರನ್ ಬಾರಿಸಿ ಮೊಹಮ್ಮದ್ ಶಮಿಯ ಎಸೆತಕ್ಕೆ ಎಲ್ಬಿಡಬ್ಲ್ಯು ಆಗಿ ಮರಳಿದರು. 44 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡ ಹೈದರಾಬಾದ್ ತಂಡ ಬಾರಿ ಕುಸಿತದ ಆತಂಕ ಕಾಡತೊಡಗಿತು. ಆದರೆ ಕ್ರೀಸ್ ನ ಮತ್ತೊಂದು ಬದಿಯಲ್ಲಿ ಅಭಿಷೇಕ್ ಶರ್ಮಾ ರನ್ ಗಳಿಕೆ ಗೆ ಒತ್ತುಕೊಟ್ಟರು. ಅವರಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಮಕ್ರಮ್ ರಿಂದ ಉತ್ತಮ ಸಾಥ್ ದೊರೆಯಿತು. ಈ ಜೋಡಿ 4ನೇ ವಿಕೆಟ್ ಗೆ 96 ರನ್ ಗಳ ಜೊತೆಯಾಟ ಆಡಿ ತಂಡಗಳಿಗೆ ವೇಗ ಕಡಿಮೆಯಾಗದಂತೆ ನೋಡಿಕೊಂಡರು. ಆದರೆ, ಅಷ್ಟರಲ್ಲಿ ಜೋಸೆಫ್ ಎಸೆತದಲ್ಲಿ ಅಭಿಷೇಕ್ ಶರ್ಮಾ ಬೌಲ್ಡ್ ಆದರೆ, ಯಶ್ ದಯಾಳ್ ಎಸೆತದಲ್ಲಿ ಮಿಲ್ಲರ್ ಗೆ ಕ್ಯಾಚ್ ಕೊಟ್ಟು ಮಾರ್ಕಮ್ ವಾಪಸಾದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...