Thursday, October 3, 2024
Thursday, October 3, 2024

ಸನ್ ರೈಸರ್ಸ್ ವಿರುದ್ಧ ಟೈಟನ್ಸ್ ಜಯಭೇರಿ

Date:

ಗುಜರಾತ್ ವಿರುದ್ಧ ಹೈದರಾಬಾದ್ ಗೆ ಐದು ವಿಕೆಟ್ ಗಳ ಸೋಲು. ಸನ್ ರೈಸರ್ಸ್ ಓಟಕ್ಕೆ ಬ್ರೇಕ್ ಹಾಕಿದ ಟೈಟನ್ಸ್ ಪಡೆಕೊನೆ ಓವರ್ ನಲ್ಲಿ ಗೆಲ್ಲಲು ಗುಜರಾತ್ ಟೈಟನ್ಸ್ ಗೆ 22 ರನ್ ಗಳ ಅವಶ್ಯಕತೆ ಇತ್ತು. ಆದರೆ ನಾಲ್ಕು ಸಿಕ್ಸರ್ ಸಮೇತ 25ರಂದು ಬಾರಿಸಿ, ಸನ್ ರೈಸಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಪಡೆಯಿತು. ಈ ಮೂಲಕ ಇದುವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ ಹೇಳು ಗೆಲುವು ದಾಖಲಿಸಿ ಒಟ್ಟಾರೆ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನ ಪಡೆಯಿತು.


ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ 15ನೇ ಆವೃತ್ತಿಯ 40ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದ್ರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ತಂಡ 20 ಅವರುಗಳು ಮುಕ್ತಾಯಗೊಂಡಾಗ 5 ವಿಕೆಟ್ ನಷ್ಟಕ್ಕೆ 199 ಬಾರಿಸಿ ಜಯಶಾಲಿಯಾಯಿತು. ರಾಹುಲ್ ತೆವತಿಯಾ( 40 ರನ್, 21 ಎಸೆತ, 4 ಫೋರ್, ಎರಡು ಸಿಕ್ಸರ್) ಹಾಗೂ ರಶೀದ್ ಖಾನ್ (31ರನ್, 11 ಎಸೆತ, 4 ಸಿಕ್ಸರ್) ಕೊನೆ 24 ಎಸೆತಗಳಲ್ಲಿ 59 ರನ್ ಬಾರಿಸುವ ಮೂಲಕ ಗೆಲುವಿನ ರೂವಾರಿ ಯಾದರು. ಅದಕ್ಕೂ ಮೊದಲು ವೃದ್ಧಿಮಾನ್ ಸಹ 68 ರನ್ ಬಾರಿಸಿ ಹೋರಾಟಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು.

ಮತ್ತೊಮ್ಮೆ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, 25 ರನ್ ಗಳಿಗೆ 5 ವಿಕೆಟ್ ಕಬಳಿಸಿದ ಎಸ್ ಆರ್ ಎಚ್ ನ ಅಮ್ರನ್ ಮಲಿಕ್ ಹೋರಾಟ ವ್ಯರ್ಥವಾಯಿತು. ಇದರೊಂದಿಗೆ ಎಸ್ ಆರ್ ಎಚ್ ನ ಸತತ 5 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿತ್ತು.
ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ವೇನೋ ದೊರೆಯಲಿಲ್ಲ. ನಾಯಕ ಕೇನ್ ವಿಲಿಯಮ್ಸನ್ 5 ರನ್ ಗಳಿಸಿ ಟೈಟನ್ಸ್ ವೇಗಿ ಮೊಹಮ್ಮದ್ ಶಮಿ ಎಸೆತಕ್ಕೆ ಕ್ಲೀನ್ ಬೋಲ್ಡ್ ಆಗಿ ಪೆವಿಲಿಯನ್ ಗೆ ತೆರಳುವ ಮೂಲಕ ನಿರಾಸೆ ಕಂಡರು.

ಬಳಿಕ ಕ್ರೀಸ ಗೆ ಬಂದ ರಾಹುಲ್ ತ್ರಿಪಾಠಿ ಆರ್ಭಟಿಸುವ ಸುಳಿವು ನೀಡಿದ್ದೇನೆ ನಿಜ, ಆದರೆ, 10 ಎಸೆತಗಳಲ್ಲಿ 16 ರನ್ ಬಾರಿಸಿ ಮೊಹಮ್ಮದ್ ಶಮಿಯ ಎಸೆತಕ್ಕೆ ಎಲ್ಬಿಡಬ್ಲ್ಯು ಆಗಿ ಮರಳಿದರು. 44 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡ ಹೈದರಾಬಾದ್ ತಂಡ ಬಾರಿ ಕುಸಿತದ ಆತಂಕ ಕಾಡತೊಡಗಿತು. ಆದರೆ ಕ್ರೀಸ್ ನ ಮತ್ತೊಂದು ಬದಿಯಲ್ಲಿ ಅಭಿಷೇಕ್ ಶರ್ಮಾ ರನ್ ಗಳಿಕೆ ಗೆ ಒತ್ತುಕೊಟ್ಟರು. ಅವರಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಮಕ್ರಮ್ ರಿಂದ ಉತ್ತಮ ಸಾಥ್ ದೊರೆಯಿತು. ಈ ಜೋಡಿ 4ನೇ ವಿಕೆಟ್ ಗೆ 96 ರನ್ ಗಳ ಜೊತೆಯಾಟ ಆಡಿ ತಂಡಗಳಿಗೆ ವೇಗ ಕಡಿಮೆಯಾಗದಂತೆ ನೋಡಿಕೊಂಡರು. ಆದರೆ, ಅಷ್ಟರಲ್ಲಿ ಜೋಸೆಫ್ ಎಸೆತದಲ್ಲಿ ಅಭಿಷೇಕ್ ಶರ್ಮಾ ಬೌಲ್ಡ್ ಆದರೆ, ಯಶ್ ದಯಾಳ್ ಎಸೆತದಲ್ಲಿ ಮಿಲ್ಲರ್ ಗೆ ಕ್ಯಾಚ್ ಕೊಟ್ಟು ಮಾರ್ಕಮ್ ವಾಪಸಾದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...