Wednesday, December 17, 2025
Wednesday, December 17, 2025

ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾ ವಿದೇಶೀ ಸಾಲ ತೀರಿಸಲೂ ಅಸಮರ್ಥ

Date:

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾವು, 5,100 ಕೋಟಿ ಅಮೆರಿಕನ್ ಡಾಲರ್ (ಸುಮಾರು ₹3.87 ಲಕ್ಷ ಕೋಟಿ) ಮೊತ್ತದಷ್ಟು ವಿದೇಶಿ ಸಾಲ ಮರುಪಾವತಿ ಸಾಧ್ಯವಿಲ್ಲ ಎಂದು ಘೋಷಿಸಿದೆ.

ವಿದೇಶಿ ಸಾಲವನ್ನು ಮಾರುಪಾವತಿ ಮಾಡುವ ಸಾಮರ್ಥ್ಯವನ್ನು ನಾವು ಕಳೆದುಕೊಂಡಿದ್ದೇವೆ. ಇದನ್ನು ನಾವು ಸಾಲದಾತರಿಗೆ ತಿಳಿಸಿದ್ದೇವೆ. ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಶೋಚನೀಯವಾಗುವುದನ್ನು ತಡೆಯುವ ಅತ್ಯಂತ ಕೊನೆಯ ಯತ್ನವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಶ್ರೀಲಂಕಾ ಕೇಂದ್ರೀಯ ಬ್ಯಾಂಕ್‌ನ ಗವರ್ನರ್ ನಂದಲಾಲ್‌ ವೀರಸಿಂಘೆ ಅವರು ತಿಳಿಸಿದ್ದಾರೆ.

ವಿದೇಶಗಳಿಂದ ಇಂಧನ, ಆಹಾರ ಪದಾರ್ಥಗಳನ್ನು ಖರೀದಿಸಲು ಸಾಧ್ಯವಿಲ್ಲದೇ ಇರುವಷ್ಟು ಕನಿಷ್ಠಮಟ್ಟಕ್ಕೆ ಶ್ರೀಲಂಕಾದ ವಿದೇಶಿ ವಿನಿಮಯ ನಿಧಿ ಕುಸಿದಿದೆ.
ಮುಂದಿನ ದಿನಗಳಲ್ಲಿ ಸಾಲದ ಕಂತು ಪಾವತಿಸಬೇಕಾಗಿತ್ತು.

ಆದರೆ ಸಾಲ ತೀರಿಸಲು ಅಗತ್ಯವಿರುವಷ್ಟು ವಿದೇಶಿ ವಿನಿಮಯ ನಿಧಿ ಇಲ್ಲದೇ ಇರುವ ಕಾರಣಕ್ಕೆ, ವಿದೇಶಿ ಸಾಲ ಮರುಪಾವತಿ ಸಾಧ್ಯವಿಲ್ಲ ಎಂದು ಶ್ರೀಲಂಕಾ ಹೇಳಿದೆ.

ಶ್ರೀಲಂಕಾದಲ್ಲಿ ಹಲವು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು 2005ರಿಂದ ಚೀನಾ ಸಾಲ ನೀಡುತ್ತಾ ಬಂದಿದೆ. ದೇಶದ ಒಟ್ಟು ಸಾಲದಲ್ಲಿ ಚೀನಾದ ಪಾಲು ಶೇ 10ರಷ್ಟನ್ನು ಮೀರುತ್ತದೆ. ಸಾಲ ಮರುಪಾವತಿ ಸಾಧ್ಯವಿಲ್ಲ ಎಂದು ಘೋಷಿಸಿದ್ದರೂ, ಶ್ರೀಲಂಕಾಗೆ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದು ಚೀನಾ ಘೋಷಿಸಿದೆ.

ಸಾಲ ಮರುಪಾವತಿ ಸಾಧ್ಯವಿಲ್ಲ ಎಂಬುದು ಈ ಮೊದಲೇ ಗೊತ್ತಾಗಿತ್ತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಚೀನಾ ನಂತರ ಶ್ರೀಲಂಕಾಗೆ ಹೆಚ್ಚು ಸಾಲ ನೀಡಿದ ದೇಶಗಳ ಸಾಲಿನಲ್ಲಿ ಜಪಾನ್‌ ಮತ್ತು ಭಾರತ ಇವೆ. ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದ ಕಾರಣ ಸಾಲ ಮರುಪಾವತಿ ವಿಧಾನವನ್ನು ಬದಲಿಸುವಂತೆ ಶ್ರೀಲಂಕಾವು ಚೀನಾ ಮತ್ತು ಭಾರತಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ ಎರಡೂ ದೇಶಗಳು ಈ ಬೇಡಿಕೆಯನ್ನು ತಿರಸ್ಕರಿಸಿದ್ದವು. ಬದಲಿಗೆ, ಕಡಿಮೆ ಬಡ್ಡಿ ದರದಲ್ಲಿ ಮತ್ತಷ್ಟು ಸಾಲ ನೀಡಿದ್ದವು.
ವಿದೇಶಿ ವಿನಿಮಯ ನಿಧಿಯ ಬಹುಪಾಲನ್ನು ಸಾಲ ಮರುಪಾವತಿಸಲು ಸರ್ಕಾರ ಬಳಸಿದೆ. ಕೊನೆಯ ಕ್ಷಣದವರೆಗೂ ಸಾಲ ಮರುಪಾವತಿಗೆ ಸರ್ಕಾರ ಸಿದ್ಧವಿತ್ತು. ಜನರ ಹಿತಾಸಕ್ತಿಯನ್ನು ಬಲಿಕೊಟ್ಟು, ಸಾಲ ಮರುಪಾವತಿಸಲು ಸರ್ಕಾರ ಮುಂದಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...