Tuesday, December 16, 2025
Tuesday, December 16, 2025

ಭಾರತದಲ್ಲಿ ಧರ್ಮಕ್ಕೆ ಕೊರತೆಯಿಲ್ಲ- ಸೂಲಿಬೆಲೆ

Date:

ದಿವ್ಯತ್ರಯರ ಸಂದೇಶಗಳನ್ನು ಹಾಗೂ ಭಾರತೀಯ ಸನಾತನ ಪರಂಪರೆಯನ್ನು ಪ್ರತಿಪಾದಿಸಿದ ಮಹಾನ್ ವ್ಯಕ್ತಿಗಳ ಮೌಲ್ಯಗಳನ್ನು ಸಮಾಜದಲ್ಲಿರುವ ಜನತೆಗೆ ತಲುಪಿಸುವ ಸದುದ್ದೇಶದಿಂದ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಈ ಪರಿಷತ್ತಿನ ಏಳನೇ ವಾರ್ಷಿಕ ಸಮಾವೇಶವನ್ನು ಏಪ್ರಿಲ್ 8 ಹಾಗೂ 9ನೇ ತಾರೀಕಿನಂದು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಸಲಾಗುತ್ತಿದೆ.

ಈ ಕಾರ್ಯಕ್ರಮಕ್ಕೆ ಭಾರತದಾದ್ಯಂತ ಶ್ರೀಕೃಷ್ಣ ಪರಂಪರೆಯ ಯತಿಗಳು, ಮಾತಾಜಿ ಗಳು, ಹಾಗೂ ಖ್ಯಾತ ಚಿಂತಕರು, ಕರ್ನಾಟಕದ ಹಲವು ಮಠಾಧೀಶರು ಭಾಗವಹಿಸಿದ್ದರು.

ಪೂಜ್ಯ ಶ್ರೀ ಸ್ವಾಮಿ ರಘುವೀರ ನಂದ ಜಿ ಮಹಾರಾಜ್ ಹಾಗೂ ಯತಿ ಸಮೂಹ ಅವರಿಂದ ಭಜನಾ ಕಾರ್ಯಕ್ರಮ ನೆರವೇರಿತು.

ವಿವೇಕಾನಂದರ ಚಿಂತನಾಧಾರೆ ಪ್ರಥಮ ಗೋಷ್ಠಿಯಲ್ಲಿ ಉಪನ್ಯಾಸವನ್ನು ಖ್ಯಾತ ಚಿಂತಕರಾದ ಹಾಗೂ ಮಾರ್ಗದರ್ಶಕರಾದ ಯುವ ಬ್ರಿಗೇಡ್ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ನೀಡಿದರು ನೀಡಿದರು.

ಸ್ವಾಮಿ ವಿವೇಕಾನಂದರು ತನ್ನ ದೇಶವನ್ನು ಕುರಿತು ಅಮೆರಿಕದಲ್ಲಿ ಭಾಷಣ ಮಾಡುವಾಗ ಹೇಳುತ್ತಾರೆ, ನನ್ನ ದೇಶಕ್ಕೆ ಕೊರತೆ ಇರುವುದು ಅನ್ನಕ್ಕಾಗಿ, ಜನರು ಹಸಿವಿನಿಂದ ಸಾಯುತ್ತಿದ್ದಾರೆ. ನಿಮಗೆ ನಿಜವಾಗಲೂ ಜಗತ್ತಿಗೆ ಒಳಿತು ಮಾಡಬೇಕೆಂಬ ಕ್ರಿಸ್ತನ ಮನೋಭಾವನೆ ನಿಮ್ಮೊಳಗಿನ ಇದ್ದರೇ, ನೀವು ಭಾರತದ ಜನರಿಗೆ ಅನ್ನವನ್ನು ಕೊಡಬೇಕೆ ಹೊರತು, ನಿಮ್ಮ ಧರ್ಮ ಗಳನ್ನಲ್ಲ. ಭಾರತದಲ್ಲಿ ಧರ್ಮಗಳ ಕೊರತೆಯಿಲ್ಲ. ಭಾರತದಲ್ಲಿ ಅನೇಕ ಧರ್ಮಗಳಿವೆ. ನಮಗೆ ಅನ್ನವನ್ನ ಕೊಟ್ಟು ನಮ್ಮ ಧರ್ಮಗಳನ್ನು ಇಲ್ಲಿಗೆ ಬಂದು ಹಂಚಿ ಎಂದು ಸ್ವಾಮಿ ವಿವೇಕಾನಂದರು ಅಮೆರಿಕದ ಜನರಿಗೆ ಹೇಳಿದ್ದರು.
ಎಂದು ಶ್ರೀ ಚಕ್ರವರ್ತಿ ಸೂಲಿಬೆಲೆಯವರು ಭಾರತಕ್ಕೆ ಸ್ವಾಮಿ ವಿವೇಕಾನಂದರ ಕೊಡುಗೆಯನ್ನು ವಿವರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪೂಜಶ್ರೀ ಸ್ವಾಮಿತ್ಯಾಗಿ ಶ್ವರಾ ನಂದಜಿ ರಾಜ್ ಕಾರ್ಯದರ್ಶಿ ಗಳು ರಾಮಕೃಷ್ಣ ಮಿಷನ್ ದಾವಣಗೆರೆ, ಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ, ಇನ್ನು ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...