Thursday, December 18, 2025
Thursday, December 18, 2025

ಜಾತಿ ಧರ್ಮ ಮೀರಿದ ಸ್ನೇಹದ ಮಾದರಿ ಇಲ್ಲಿದೆ

Date:

ಪ್ರಸ್ತುತ ದಿನಗಳಲ್ಲಿ ಕೋಮುಗಲಭೆ ಎಲ್ಲೆಡೆ ವ್ಯಾಪಕವಾಗಿದೆ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಕೇರಳದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ.

ಸ್ನೇಹ ಎಲ್ಲ ಸಂಬಂಧಗಳನ್ನು ಮೀರಿಸಿದ ಬಂಧ ಎಂಬ ಮಾತನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಇದಕ್ಕೆ ಉತ್ತಮ ಉದಾಹರಣೆ ಈ ಸ್ಟೋರಿ ಯಾಗಿದೆ. ಕೇರಳದ ಮುಸ್ಲಿಂ ವಿಕಲಚೇತನ ಯುವಕ ಅಲಿಫ್ ಅಹಮದ್ ಎಂಬಾತ ಹುಟ್ಟಿನಿಂದಲೂ ತನ್ನ ಎರಡು ಕಾಲುಗಳು ಕೂಡ ಸ್ವಾಧೀನ ಕಳೆದುಕೊಂಡಿದ್ದಾನೆ. ಆತ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ಥಳಾಂತರ ವಾಗಬೇಕಾದರೆ ಯಾರನ್ನಾದರೂ ಅವಲಂಬಿಸಲೇಬೇಕಾಗಿದೆ. ಇಂತಹ ಸಂದರ್ಭದಲ್ಲಿ ಆತನ ನೆರವಿಗೆ ಅಲಿಫ್ ಸ್ನೇಹಿತೆಯರು ಆತನನ್ನು ಮನೆಯಿಂದ ಕರೆದುಕೊಂಡು ಕಾಲೇಜಿಗೆ ಬರುವುದು. ಹಾಗೂ ಕಾಲೇಜಿನಿಂದ ಮನೆಗೆ ಕರೆದುಕೊಂಡು ಹೋಗುವ ಕಾರ್ಯವನ್ನು ಮಾಡುತ್ತಿದ್ದಾರೆ.

ಅಲಿಫ್ ಅಹಮದ್ ಆತನ ಸ್ನೇಹಿತರು ಅರ್ಚನ ಹಾಗೂ ಆರ್ಯ. ಇವರು ಅಲಿಫ್ ನ
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಬರಲು ಆತನ ಹೆಗಲಿಗೆ ಹೆಗಲು ಕೊಟ್ಟು ಕರೆದುಕೊಂಡು ಬರುತ್ತಾರೆ.

ಆರ್ಯ ಹಾಗೂ ಅರ್ಚನಾ ಅವರು ತಮ್ಮ ಹೆಗಲಿಗೇ ಅಲಿಫ್ ಹೆಗಲನ್ನು ಕೊಟ್ಟು ಕರೆದುಕೊಂಡು ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿದ್ಯಾರ್ಥಿಗಳು ಕೇರಳದ ಕೊಲ್ಲಂ ಜಿಲ್ಲೆಯ ಸ್ತಾಸ್ತಾಂಕೊಟ್ಟ ಡಿಬಿ ಕಾಲೇಜಿನಲ್ಲಿ ಬಿಕಾಂ ಪದವಿಯ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಾಗಿದ್ದಾರೆ. ಅಲಿಫ್ ಅವರು ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಲಿಫ್ ನ ತಂದೆ-ತಾಯಿಯರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಈ ವಿಡಿಯೋವನ್ನು ನೋಡಿ ಅವರಿಬ್ಬರು ಸಂತೋಷಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಧರ್ಮದ ಹೆಸರಿನಲ್ಲಿ ಅನೇಕ ಕೃತಿಗಳು ನಡೆದ ಸಂದರ್ಭದಲ್ಲಿ ಸ್ನೇಹ ಬಾಂಧವ್ಯ, ಸಹಾಯ ಗುಣ ಎಲ್ಲರ ಗಮನವನ್ನು ಸೆಳೆದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ‌ ನ್ಯಾಯದೇವತೆಯೆದುರು ಸೋತಿದೆ- ಸಿದ್ಧರಾಮಯ್ಯ

CM Siddharamaih ಬಿಜೆಪಿಯವರ ದ್ವೇಷ ರಾಜಕಾರಣ ನ್ಯಾಯ ದೇವತೆಯ ಎದುರು ಸೋತಿದೆ....

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...