Friday, October 4, 2024
Friday, October 4, 2024

ರಸ್ತೆಯಲ್ಲಿ ಕಾದಿದ್ದಾನೆ ಯಮರಾಜ

Date:

ಭೂಮಿಯ ಮೇಲೆ ಹುಟ್ಟಿದ ನಂತರ ಸಾವು ನಿಶ್ಚಿತ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಪ್ರಪಂಚದಾದ್ಯಂತ ದಿನನಿತ್ಯ ಸಾವಿರಾರು ಜನರು ತಮ್ಮ ಪ್ರಾಣವನ್ನು ಬಿಡುತ್ತಾರೆ. ಸಾವು ಯಾವ ರೂಪದಲ್ಲಾದರೂ ನಮ್ಮ ಮುಂದೆ ಬಂದು ನಿಲ್ಲಬಹುದು.

ವಯೋಸಹಜ ಸಾವು, ಅನಾರೋಗ್ಯದಿಂದ ಸಾವು, ಹಾರ್ಟ್ ಅಟ್ಯಾಕ್, ಇವೆಲ್ಲವನ್ನೂ ಕೂಡ ನಾವು ಎಷ್ಟೇ ಪ್ರಯತ್ನ ಪಟ್ಟರೂ ಸಹ ನಮ್ಮಿಂದ ತಪ್ಪಿಸಲು ಸಾಧ್ಯವಿಲ್ಲ.
ಆದರೆ, ಆಕ್ಸಿಡೆಂಟ್ ಗಳನ್ನು ತಪ್ಪಿಸಬಹುದು.

ಭಾರತದಲ್ಲಿ ಪ್ರತಿವರ್ಷ ಸರಿ ಸುಮಾರು 450000ಕ್ಕೂ ಹೆಚ್ಚು ರೋಡ್ ಆಕ್ಸಿಡೆಂಟ್ ಆಗುತ್ತವೆ. ಅದರಲ್ಲಿ ಅಂದಾಜು 1,50,000 ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ.
ಕೇವಲ ರಸ್ತೆ ಅಪಘಾತದಿಂದಲೇ ಸಾಯುವವರ ಸಂಖ್ಯೆ ವಯೋಸಹಜ ಸಾವು, ಅನಾರೋಗ್ಯದಿಂದ ಸಾವು, ಆತ್ಮಹತ್ಯೆಯಿಂದ ಸಾವು ಇವೆಲ್ಲವುಗಳನ್ನು ಮೀರಿ ಹೆಚ್ಚಿನ ಸಂಖ್ಯೆಯಲ್ಲಿವೆ.

ವಾಹನಗಳಲ್ಲಿ ಚಲಿಸುವಾಗ, ಹೆಲ್ಮೆಟ್ ಧರಿಸದೆ, ಅಗತ್ಯ ಕ್ರಮಗಳನ್ನು ಅನುಸರಿಸದೆ, ಕಾರ್ ನಲ್ಲೋ,ಅಥವಾ ವ್ಯಾನ್ ನಲ್ಲಿ ಸಂಚರಿಸುವಾಗ ಸೀಟ್ ಬೆಲ್ಟ್ ಧರಿಸದೇ, ತಮ್ಮ ನಿರ್ಲಕ್ಷದಿಂದ ಸಾಯುವವರ ಸಂಖ್ಯೆಯೇನು ಕಡಿಮೆ ಇಲ್ಲ.

ಇದರೊಂದಿಗೆ ಘಾಟ್ ರಸ್ತೆಗಳಲ್ಲಿ ಸಂಚರಿಸುವಾಗ ಸೂಚನಾ ಫಲಕಗಳನ್ನು ನಿರ್ಲಕ್ಷಿಸುವವರೂ ಜಾಸ್ತಿ ಇದ್ದಾರೆ. ರಾತ್ರಿಯ ಅಪವೇಳೆಯಲ್ಲಿ ರಸ್ತೆ ಡಿವೈಡರ್ ಗಳಿಗೆ ವಾಹನ ಡಿಕ್ಕಿಸಿ ,ಪ್ರಾಣಾಪಾಯ ತಂದು ಕೊಳ್ಳುವವರೂ ಇದ್ದಾರೆ.

ಕಾಲೇಜು ಯುವಕರೂ ಸಹ ಮೋಜಿಗಾಗಿ ಅಗತ್ಯ ಸ್ಪೀಡ್ ಗಿಂತಲೂ ಹೆಚ್ಚಿನ ವೇಗದಲ್ಲಿ ಗಾಡಿಗಳನ್ನು ಓಡಿಸಿ ತಮ್ಮ ಪ್ರಾಣವನ್ನು ಬಿಡುತ್ತಾರೆ.

ಎಲ್ಲಾದರೂ ಆಕ್ಸಿಡೆಂಟ್ ಆಗಿ ಬಿಟ್ಟರೆ ಅವರಿಗೆ ಸಹಾಯ ಮಾಡುವ ಬದಲಿಗೆ, ಜನರು ಫೋಟೋ ಕ್ಲಿಕ್ಕಿಸಲು, ವಿಡಿಯೋ ಮಾಡಲು ಮುಂದಾಗುತ್ತಾರೆ. ಇನ್ನೂ ಕೆಲವು ಮಂದಿ ಸಹಾಯ ಮಾಡಲು ಬಯಸಿದರೂ ಕೋರ್ಟ್ ಕಚೇರಿಯ ಅಲೆದಾಟ ನಮಗೇಕೆ ಎಂದು ಕಂಡರೂ ಕಾಣದಂತೆ ಸುಮ್ಮನೆ ಹೋಗಿ ಬಿಡುತ್ತಾರೆ. ಆಧುನಿಕತೆ ಬೆಳೆದಂತೆ ಮಾನವನ ಮಾನವೀಯ ಗುಣಗಳು ಸಹ ಗೌಣವಾಗುತ್ತಾ ಸಾಗಿವೆ…

ಈ ಎಲ್ಲಾ ರೀತಿಯ ಅಪಘಾತಗಳನ್ನು ತಡೆಯಲು ಪ್ರತಿ ವರ್ಷವೂ ಸಹ ಸರ್ಕಾರ ಹಲವಾರು ಅಗತ್ಯ ಕ್ರಮಗಳನ್ನು , ನಿಯಮಗಳನ್ನು ಜಾರಿಗೊಳಿಸುತ್ತಲೇ ಇದೆ.

ಇದೀಗ ರಸ್ತೆ ಅಪಘಾತಗಳ ಪ್ರಕರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್ ಮಹತ್ತರವಾದ ನಿರ್ಣಯವನ್ನು ತೆಗೆದುಕೊಂಡಿದೆ.
ಏಪ್ರಿಲ್ 1 ರ ನಂತರದಿಂದ ಸಂಭವಿಸುವ ರಸ್ತೆ ಅಪಘಾತ ಪ್ರಕರಣಗಳ ತನಿಖೆಯನ್ನು ಪೊಲೀಸರು ನಡೆಸಬೇಕೆಂದು ಕಡ್ಡಾಯಗೊಳಿಸಲಾಗಿದೆ.
ಇದರೊಂದಿಗೆ ಅಪಘಾತಗಳ ಬಗ್ಗೆ ಪೊಲೀಸರು 48 ಗಂಟೆಗಳ ಒಳಗೆ ಮೋಟಾರು ಅಪಘಾತ ಕ್ಲೈಮ್ ಟ್ರಿಬ್ಯೂನಲ್‌ಗಳು ಮತ್ತು ವಿಮಾ ಸಂಸ್ಥೆಗಳಿಗೆ ತಿಳಿಸಬೇಕು ಎಂದು ದೆಹಲಿ ಹೈಕೋರ್ಟ್ ಆದೇಶವನ್ನು ನೀಡಿದೆ.

ರಸ್ತೆ ಸಾರಿಗೆ ಸಚಿವಾಲಯವು ವಿಮಾ ಪ್ರಮಾಣಪತ್ರದಲ್ಲಿ ಮೌಲ್ಯೀಕರಿಸಿದ ಮೊಬೈಲ್ ಸಂಖ್ಯೆಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.
ರಸ್ತೆ ಸಾರಿಗೆ ಸಚಿವಾಲಯವು ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ಪರಿಹಾರಗಳನ್ನು ತ್ವರಿತವಾಗಿ ವಿತರಿಸುವ ಗುರಿಯನ್ನು ಹೊಂದಿದ್ದು, ರಸ್ತೆ ಅಪಘಾತಗಳ ತನಿಖೆ, ವಿವರವಾದ ಅಪಘಾತ ವರದಿಗಳ ತಯಾರಿ ಮತ್ತು ವಿಮಾ ಕ್ಲೈಮ್‌ಗಳ ಇತ್ಯರ್ಥಕ್ಕಾಗಿ ವಿವಿಧ ಮಧ್ಯಸ್ಥಗಾರರಿಗೆ ಸಮಯವನ್ನು ನಿಗದಿಪಡಿಸುವ ಕಡ್ಡಾಯ ಕಾರ್ಯವಿಧಾನವನ್ನು ನಿಗದಿಪಡಿಸಲಾಗಿದೆ.

ಹೈಕೋರ್ಟ್ ನ ಅಧಿಸೂಚನೆಯ ಪ್ರಕಾರ, ಪೊಲೀಸರು ಅಪಘಾತದ ಸ್ಥಳಗಳಿಗೆ ಭೇಟಿ ನೀಡಬೇಕು. ಸಾಕ್ಷ್ಯಗಳನ್ನು ಸಂಗ್ರಹಿಸಬೇಕು ಮತ್ತು ಅಪಘಾತಗಳ ಬಗ್ಗೆ ಮೋಟಾರು ಅಪಘಾತ ಕ್ಲೈಮ್ ಟ್ರಿಬ್ಯೂನಲ್‌ಗಳಿಗೆ ನಿಕಟವಾಗಿ ಪ್ರಕ್ರಿಯೆಯು ಪ್ರಾರಂಭವಾಗಬೇಕು. ತನಿಖಾ ಅಧಿಕಾರಿಯು ಅವರ ಹಕ್ಕುಗಳು ಮತ್ತು ಹಕ್ಕುಗಳ ಬಗ್ಗೆ ಅವರ ಕಾನೂನು ಪ್ರತಿನಿಧಿಗಳ ಸಂತ್ರಸ್ತರಿಗೆ ತಿಳಿಸಲು ಕರ್ತವ್ಯ ಬದ್ಧನಾಗಿರಬೇಕು. ದೆಹಲಿಯಲ್ಲಿ ಯಶಸ್ವಿಯಾಗಿ ಮಾಡಲಾದ ಈ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.

ಈ ಮೂಲಕ ಇನ್ನು ಮುಂದೆ ಪೊಲೀಸರು ತಮ್ಮ ಕರ್ತವ್ಯದ ಜೊತೆ ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಲಿದ್ದಾರೆ.

ಮೊದಲಾದರೆ, ಅಪಘಾತ ನಡೆದ ಸ್ಥಳಕ್ಕೆ ಅಂಬುಲೆನ್ಸ್ ಬಂದು ಅಪಘಾತಕ್ಕೆ ಒಳಗಾದವರು ಆಸ್ಪತ್ರೆಗೆ ಸೇರಿಸಿ ನಂತರ ವಿಚಾರಣೆ ನಡೆಯುತ್ತಿತ್ತು.
ಅಪಘಾತದಲ್ಲಿ ಹಾನಿಗೊಳಗಾಗಿರುವ ವಾಹನ ಹಾಗೂ ವ್ಯಕ್ತಿಗೆ ಪರಿಹಾರವನ್ನು ದೊರಕಿಸಿಕೊಡುವುದು ಬಹಳ ಕಷ್ಟಕರವಾಗಿತ್ತು.
ಆದರೆ ಇನ್ನು ಮುಂದೆ ಅಪಘಾತ ನಡೆದಲ್ಲಿ ಪೊಲೀಸರು ಖುದ್ದಾಗಿ ಬಂದು ವಿಚಾರಣೆ ನಡೆಸಲಿದ್ದಾರೆ. ಈ ಮೂಲಕ ಅಪಘಾತದಿಂದ ಹಾನಿಗೊಳಗಾದವರು ಪರಿಹಾರವನ್ನು ಪಡೆಯುವ ಅವಧಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

ಅಪಘಾತಕ್ಕೆ ಒಳಗಾದ ವ್ಯಕ್ತಿಯ ವೈದ್ಯಕೀಯ ಕಾನೂನು ಮತ್ತು ಮರಣೋತ್ತರ ವರದಿಗಳನ್ನು ನೀಡುವ ಜವಾಬ್ದಾರಿಯೂ ಸಹ ಪೋಲಿಸರ ಹೆಗಲಿಗೇರಿದೆ.

ಇಂತಹ ಪ್ರಕರಣಗಳನ್ನ ಇತ್ಯರ್ಥಪಡಿಸುವಲ್ಲಿ ದೆಹಲಿ ಸರ್ಕಾರ ನೂತನ ವಿಚಾರಣಾ ಕಾನೂನನ್ನು ಕೈಗೆತ್ತಿಕೊಂಡಿದೆ. ನಮ್ಮ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಿಯಾಶೀಲವಾದರೆ ಚೆನ್ನ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Jawahar Navodaya Vidyalaya ಗಾಜನೂರಿನ ನವೋದಯ ಶಾಲಾ ಪ್ರವೇಶಾತಿ 2025-26 ಪರೀಕ್ಷೆಗೆ ಆನ್ ಲೈನ್ ಅರ್ಜಿ ಆಹ್ವಾನ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯವು 2025-26ನೇ ಸಾಲಿಗೆ 9...

Department of Parliamentary Affairs and Legislation ಅಕ್ಟೋಬರ್ 5 ರಂದು ನಡೆಯುವ “ಯುವ ಸಂಸತ್” ಸ್ಥಳ‌ ಬದಲಾವಣೆ ಗಮನಿಸಿ

Department of Parliamentary Affairs and Legislation ಸಂಸದೀಯ ಮತ್ತು ವ್ಯವಹಾರಗಳು...

MESCOM ಅ.4 ರಿಂದ7 ವರೆಗೆ ಮೆಸ್ಕಾಂ ಆನ್ ಲೈನ್ ಸೇವೆ ತಾತ್ಕಾಲಿಕ ಅಲಭ್ಯ

MESCOM ಅ.04ರಿಂದ 07 ರ ವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ...

Shivamogga Dasara ಶಿವಮೊಗ್ಗ ಚಲನಚಿತ್ರ ದಸರಾ ಚಾಲನೆಗೆ ಹಿರಿಯ ನಟಿ ಉಮಾಶ್ರೀ ಆಗಮನ

Shivamogga Dasara ಶಿವಮೊಗ್ಗ ಮಹಾ ನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ...