ಮಹಾನಗರ ಪಾಲಿಕೆಯ ಆಯುಕ್ತರಾದ ಸನ್ಮಾನ್ಯ ಮಾಯಣ್ಣ ಗೌಡರು, ಕರವೇ, ಜನ ಮನ ರಾಜ್ಯ ಸಂಘಟನೆಯ ಮನವಿಗೆ ಸ್ಪಂದಿಸಿ ರಾಗಿಗುಡ್ಡ ಭಾಗದ ಸಮಸ್ಯೆಯನ್ನು ಪರಿ ಹರಿಸಿರುತ್ತಾರೆ. ಅವರಿಗೆ ನಮ್ಮ ಸಂಘಟನೆಯ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿ ಮಾತನಾಡಿದ ಜನ ಮನ ಸಂಘಟನೆಯ ರಾಜ್ಯಧ್ಯಕ್ಷರಾದ ಕೆ ಜನಾರ್ಧನ್ ಸಾಲಿಯನ್ ರವರು ಆಯುಕ್ತರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮಾಯಣ್ಣ ಗೌಡರ ಸೇವೆಯ ಅಗತ್ಯತೆ ನಮ್ಮ ಶಿವಮೊಗ್ಗ ನಗರಕ್ಕೆ ತುಂಬಾ ಅವಶ್ಯವಾಗಿದ್ದು, ಇದೇ ರೀತಿಯ ಸೇವಾ ಸಹಕಾರವನ್ನು ನಮಗೆ ನೀಡಲಿ ಎಂದರು. ಇವರೊಂದಿಗೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ಮಾಲತೇಶ್, ಮತ್ತು ಪದಾಧಿಕಾರಿಗಳಾದ ರಾಮವಿ, ರಾಮಣ್ಣ ರಾಗಿಗುಡ್ಡ,ಮತ್ತಿತರರು ಭಾಗವಹಿಸಿದ್ದರು.
ರಾಗಿಗುಡ್ಡ ಪ್ರದೇಶ ಜನತೆಯ ಸಮಸ್ಯೆ ನಿವಾರಿಸಿದ ಪಾಲಿಕೆ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿದ ಕರವೆ ಜನಮನ ಸಂಘಟನೆ
Date:
