Monday, April 6, 2026
Monday, April 6, 2026

ಶಿವಮೊಗ್ಗ 35 ನೇ ವಾರ್ಡಿನಲ್ಲಿ ಮಳ ನೀರುನುಗ್ಗಿ ಅವಾಂತರ. ಪಾಲಿಕೆ ಪರಿಹಾರ ಕ್ರಮಕೈಗೊಳ್ಳಲು ಯುವ ಕಾಂಗ್ರೆಸ್ ಒತ್ತಾಯ

Date:

ಶಿವಮೊಗ್ಗ ನಗರದ 35 ವಾರ್ಡ್ ಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜಕಾಲುವೆ ಮತ್ತು ಚರಂಡಿಗಳ ಹೂಳು ತೆಗೆಯದ ಕಾರಣ ಮೊನ್ನೆ ರಾತ್ರಿ ಬಂದ ಮಳೆಗೆ ಮನೆಗಳಿಗೆ ನೀರು ನುಗ್ಗಿ ಎಲ್ಲ ವಾರ್ಡ್ಗಳಲ್ಲಿ ರಸ್ತೆ ಮೇಲೆ ಹರಿಯುತ್ತಿದ್ದು ಹಲವಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಆಹಾರ ವಸ್ತುಗಳು ಹಾಗೂ ಲಕ್ಷಾಂತರ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿ ಜನ ಸಂಕಷ್ಟ ಎದುರಿಸಿದ್ದಾರೆ, ಇದರಿಂದ ಜನ ಮಹಾನಗರ ಪಾಲಿಕೆಗೆ ಆಡಳಿತ ವರ್ಗಕ್ಕೆ ಇಡಿ ಶಾಪವನ್ನು ಹಾಕುತ್ತಿದ್ದು. ಒಂದು ಮಳೆಗೆ ಹೀಗಾದರೆ ಮುಂಬರುವ ಮಳೆಗಾಲದಲ್ಲಿ ಯಾವ ಸ್ಥಿತಿಯೆಂದು ಯೋಚಿಸುತ್ತಿದ್ದಾರೆ.

ಈಗಾಗಲೇ ಜನಪ್ರತಿನಿಧಿಗಳು ನೀರು ನುಗ್ಗಿದ ಮನೆಗಳಿಗೆ ಆಗಮಿಸಿ ಪರಿಹಾರದ ಭರವಸೆಯನ್ನು ನೀಡಿದ್ದಾರೆ ಆದರೆ ಪರಿಹಾರ ಭರವಸೆಯಾಗಿ ಉಳಿಯದೆ, ಕೂಡಲೆ ತಾಲೂಕು ಆಡಳಿತ,ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ನೀರು ನುಗ್ಗಿದ ಮನೆಗಳ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕು, ರಾಜ ಕಾಲುವೆಯ ಹೂಳು ತೆಗೆಸಿ ಜೊತೆಗೆ ನಗರದಲ್ಲಿ ಹಲವು ವಾರ್ಡ್ ಗಳಲ್ಲಿ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಚರಂಡಿಗಳು ನಿರ್ಮಾಣವಾದ ದಿನದಿಂದ ಹೂಳು ತೆಗೆಯದೆ ಸಣ್ಣ ಮಳೆಯಲ್ಲೂ ಅವಾಂತರ ಸೃಷ್ಟಿಸುತ್ತಿದ್ದು. ಹಾಗೂ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡದ ಹಲವು ವಾರ್ಡುಗಳಲ್ಲಿ ಚರಂಡಿಗಳು, ಡೆಕ್ ಸ್ಲಾಬ್ ಗಳು ಶಿಥಿಲಗೊಂಡಿದ್ದು. ಇಂತಹ ಶಿಥಿಲಗೊಂಡ ಚರಂಡಿಗಳನ್ನು ಮರು ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಹೆಚ್.ಪಿ. ಗಿರೀಶ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N.Channabasappa ಸಮಾಜದ ಪ್ರತಿಯೊಬ್ಬರಿಗೂ ತರಬೇತಿ ಕೇಂದ್ರದ ಪ್ರಯೋಜನ ಸಿಗಲಿ- ಎಸ್.ಎನ್.ಚನ್ನಬಸಪ್ಪ

S.N.Channabasappa ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ, ಶಿವಮೊಗ್ಗ ಇವರ...

Kuvempu University ಮಾಧ್ಯಮ ಕ್ಷೇತ್ರದಲ್ಲಿ ನಿರೂಪಕರಿಗೆ ಹೆಚ್ಚಿನ ಬೇಡಿಕೆ: ಭಾಷಾ ಪ್ರೌಢಿಮೆ, ವಿಷಯಗಳ ಸಮಗ್ರ ಅರಿವು ಮುಖ್ಯ- ಹೊನ್ನಾಳಿ ಚಂದ್ರಶೇಖರ್

Kuvempu University ಪತ್ರಕರ್ತರಾಗಬೇಕಾದರೆ ಆಳವಾದ ಜ್ಞಾನವನ್ನು ಹೊಂದಿರಬೇಕು ಮತ್ತು ನಿರಂತರ ಓದುತ್ತಾ...