Bharat Scouts and Guides ಹೃದಯ ಮತ್ತು ಉಸಿರಾಟ ನಿಲ್ಲಿಸಿದಾಗ ತಕ್ಷಣ ನೀಡುವ ತುರ್ತು ಚಿಕಿತ್ಸೆ ಕಾರ್ಡಿಯೋಪಲ್ಮನರಿ ರಿಸಸ್ಸಿಟೇಶನ್ ( ಸಿಪಿಆರ್ ) ಆಗಿದೆ. ಇದು ವ್ಯಕ್ತಿಯ ಜೀವ ಉಳಿಸಲು ಸಹಾಯ ಮಾಡುತ್ತದೆ ಎಂದು ಸಿಮ್ಸ್ ಶಿವಮೊಗ್ಗ ಅರಿವಳಿಕೆ ವಿಭಾಗ ಮುಖ್ಯಸ್ಥೆ, ಪ್ರಾಧ್ಯಾಪಕಿ ಡಾ. ಬಿ.ವಿ.ಚಂಪಾ ಹೇಳಿದರು.
ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿ ಪ್ರತಿಕ್ರಿಯಿಸದಿದ್ದರೆ, ಉಸಿರಾಟ ಇಲ್ಲದಿದ್ದರೆ, ಹೃದಯ ಬಡಿತ ಕಾಣದಿದ್ದರೆ ಸಿಪಿಆರ್ ಮಾಡಬೇಕು. ಮೊದಲು ವ್ಯಕ್ತಿಯನ್ನು ಸಮತಟ್ಟಾದ ಸ್ಥಳದಲ್ಲಿ ಮಲಗಿಸಬೇಕು. ಎದೆ ಮಧ್ಯದಲ್ಲಿ ಕೈಗಳನ್ನು ಇಟ್ಟು ಒತ್ತಡ ನೀಡಬೇಕು. ನಿಮಿಷಕ್ಕೆ 100–120 ಬಾರಿ ಒತ್ತಡ ಹಾಕಬೇಕು. ಒತ್ತಡದ ಆಳ 5–6 ಸೆಂ.ಮೀ ಇರಬೇಕು. 30 ಚೆಸ್ಟ್ ಕಂಪ್ರೆಸನ್, 2 ಬಾರಿ ರೆಸ್ಕೂö್ಯ ಬ್ರಿಥ್ ಟೇಕ್ ಮಾಡಬೇಕು. ಆಂಬುಲೆನ್ಸ್ ಬರುವವರೆಗೆ ಮುಂದುವರಿಸಬೇಕು. ತಕ್ಷಣ ಸಿಪಿಆರ್ ಪ್ರಾರಂಭಿಸಿದರೆ ಜೀವ ಉಳಿಯುವ ಸಾಧ್ಯತೆ ಹೆಚ್ಚು. ಎಂದು ತಿಳಿಸಿದರು.
ಸಹ ಪ್ರಾಧ್ಯಾಪಕಿ ಡಾ ಯಶೋಧ ವಿ, ಶಿಕಾರಿಪುರ ತಾಲೂಕು ಅರಿವಳಿಕೆ ತಜ್ಞ ಡಾ ವಿನಯ್, ಡಾ ತೇಜಸ್, ಡಾ ಅಭಿಷೇಕ್, ಶುಶ್ರೂಷಾಧಿಕಾರಿ ಗಣೇಶ್ , ಸಿಬ್ಬಂದಿ ವರ್ಗ, ದರ್ಶನ್ ಹಾಗೂ ಸಚಿನ್ ಹಾಜರಿದ್ದರು
Bharat Scouts and Guides ಸಂಯೋಜಕ ರಾಜೇಶ್ ವಿ ಅವಲಕ್ಕಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ.ಚಂದ್ರಶೇಖರಯ್ಯ ವಂದಿಸಿದರು. ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್, ಸಹಾಯಕ ಜಿಲ್ಲಾ ಆಯುಕ್ತ ಮಲ್ಲಿಕಾರ್ಜುನ ಕಾನೂರ್, ಸಹಾಯಕ ರಾಜ್ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಹಿರಿಯ ಗೈಡರ್ ಶಾಂತಮ್ಮ, ಹಿರಿಯ ಸ್ಕೌಟರ್ ರುದ್ರಪ್ಪ ಚೀಲೂರ್, ಎನ್. ಡಿ. ಆರ್. ಎಫ್. ತಂಡದ ಮುಖ್ಯಸ್ಥ ವಿವೇಕ್ ಮತ್ತು ಇತರೆ ಸದಸ್ಯರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ 162 ವಿದ್ಯಾರ್ಥಿಗಳು ಭಾಗವಹಿಸಿದ್ದರು.
