ಜೀವನೋತ್ಸಾಹ ಹಾಗೂ ಹಿರಿಯರಲ್ಲಿ ಪ್ರೀತಿ ವಾತ್ಸಲ್ಯ ಹೇಗಿರಬೇಕು ಎಂಬುದಕ್ಕೆ ಇದೊಂದು ಹೃದಯಸ್ಪರ್ಶಿ ನಿದರ್ಶನ.
ನಿನ್ನೆ (23-03-2026) ದಾವಣಗೆರೆಯ ಚೌಕಿಪೇಟೆಯಲ್ಲಿ ನೆರವೇರಿದ ಶ್ರೀ ಬಕ್ಕೇಶ್ವರರ ಮಹಾರಥೋತ್ಸವ ವೀಕ್ಷಿಸಲು ಇಷ್ಟಪಟ್ಟ ಅತ್ಯಂತ ವಯೋವೃದ್ಧೆ (ಬಹುಷಃ ತಾಯಿ ಇರಬೇಕು)ಯನ್ನು ವಯಸ್ಸಾದ ಪುರುಷನೋರ್ವ ಜಾತ್ರೆಯ ಜನಜಂಗುಳಿಯಲ್ಲೂ ಗಾಲಿ ಕುರ್ಚಿಯ ಮೇಲೆ ಕರೆದುಕೊಂಡು ಬಂದು ರಥೋತ್ಸವ ಹಾಗೂ ಮೆರವಣಿಗೆ ದೃಶ್ಯಗಳನ್ನು ತೋರಿಸಿದ್ದು ಹಾಗೂ ವಯೋವೃದ್ದೆಯವರು ಆಸಕ್ತಿಯಿಂದ ನೋಡಿದ್ದು ನಿಜವಾಗಿಯೂ ಹೃದಯಸ್ಪರ್ಶಿಯೂ, ಹೃದಯಂಗಮವೂ ಆಗಿತ್ತು. ಅಭಿನವ ಶ್ರವಣಕುಮಾರನಂತಹ ಈ ವ್ಯಕ್ತಿಯ ನಡೆ ಹಾಗೂ ವಯೋವೃದ್ಧೆಯವರ ಜೀವನೋತ್ಸಾಹ, ಬತ್ತದ ಆಸಕ್ತಿ ನಿಜಕ್ಕೂ ಅನುಕರಣೀಯ.
ಇಂತಹ ದೃಶ್ಯಗಳು ಹೆಚ್ಚು ಜನರಿಗೆ ಮುಟ್ಟುವುದು ಆರೋಗ್ಯಕರ ಸಮಾಜಕ್ಕೆ ಪ್ರೇರಕ, ಹಂಚಿಕೊಳ್ಳಿ.
ಮುಪ್ಪಿನ ಮಾತಾಪಿತರನ್ನು ವೃದ್ಧಾಶ್ರಮಕ್ಕೆ ಸೇರಿಸುವವರು ಇದನ್ನು ನೋಡಿ ಪರಿವರ್ತನೆಗೊಳ್ಳಬೇಕು.
-ಡಾ ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತ, ದಾವಣಗೆರೆ-
ತೇರಿನ ನಡುವೆ ಮೆರೆದ ಹೆತ್ತ ತಾಯಿಯ ಮೇಲಿನ ಮಮತೆ.ಲೇ: ಡಾ.ಹೆಚ್.ಬಿ.ಮಂಜುನಾಥ್.
Date:
