Manasadhara Trust ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ವಿಶೇಷ ಶಾಲೆ(ರಿ) ಮತ್ತು ಕಲಿಕಾ ಕೇಂದ್ರ ಹಾಗೂ ನಮ್ಮ ಹಳ್ಳಿ ಥಿಯೇಟರ್(ರಿ) ರವರ ಸಹಯೋಗದೊಂದಿಗೆ 6 ರಿಂದ 9 ನೇ ತರಗತಿಯ ಸರ್ಕಾರಿ ಶಾಲೆ ಮಕ್ಕಳಿಗಾಗಿ “ಮನಃಸ್ಫೂರ್ತಿ ಶಿಬಿರ – 2026” ಅನ್ನು ಆಯೋಜಿಸಲಾಗಿದ್ದು, ಈ ಶಿಬಿರವು ದಿನಾಂಕ : 13/04/2026 ರಿಂದ 25/04/2026 ರವರೆಗೆ ಪ್ರತಿ ದಿನ ಬೆಳಿಗ್ಗೆ 9:30 ರಿಂದ ಸಂಜೆ 4:00 ರವರೆಗೆ ಇರುತ್ತದೆ.
ಶಿಬಿರದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಮೌಲ್ಯಯುತ ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಡುಗಾರಿಕೆ, ಹಾಸ್ಯ ಕಥೆ, ನಾಟಕ, ಚಿತ್ರಕಲೆ, ನೃತ್ಯ, ಜಾದು, ಮೇಕಪ್, ಯೋಗ, ಧ್ಯಾನ, ಅರಿವು, ಸಿನಿಮಾ ವೀಕ್ಷಣೆ, ಕ್ಲೇ ಮಾಡೆಲ್, ಪ್ರವಾಸ, ತೊಗಲು ಗೊಂಬೆ, ಯಕ್ಷಗಾನ, ಓರಿಗಾಮಿ, ಚಿತ್ರಕಲೆ, ಮೂಕಾಭಿನಯ, ಆರೋಗ್ಯ, ಸಾಮಾನ್ಯ ಜ್ಞಾನ ಮತ್ತು ಮಕ್ಕಳ ಹಕ್ಕುಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು. ಶಿಬಿರವು ಸಂಪೂರ್ಣವಾಗಿ ಉಚಿತವಾಗಿದ್ದು, 6 ರಿಂದ 9 ನೇ ತರಗತಿಯ 60 ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. Manasadhara Trust ಆಸಕ್ತ ಮಕ್ಕಳ ಪೋಷಕರು ಏಪ್ರಿಲ್ 4 ರೊಳಗೆ ಶಿವಮೊಗ್ಗದ ಜೆ ಪಿ ಎನ್ ರಸ್ತೆಯ ಮಾನಸ ನರ್ಸಿಂಗ್ ಹೋಂ ಬಳಿಯ ಮನಃಸ್ಫೂರ್ತಿ ಕಲಿಕಾ ಕೇಂದ್ರದಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮನಃಸ್ಫೂರ್ತಿ ಕಛೇರಿ 8867540973 / ಶಿಬಿರದ ಸಂಚಾಲಕರಾದ ಶ್ರೀ ಯುತ ಮಂಜುನಾಥ್ ಸ್ವಾಮಿ 9845014229 / ಶ್ರೀಮತಿ ರಂಗನಾಯಕಿ 9663645373 ಇವರನ್ನು ಸಂಪರ್ಕಿಸಬೇಕಾಗಿ ಮನಃಸ್ಫೂರ್ತಿಯ ಶೈಕ್ಷಣಿಕ ನಿರ್ದೇಶಕರಾದ ಡಾ.ಪ್ರೀತಿ.ವಿ.ಶಾನ್ ಭಾಗ್ ಪ್ರಕಟಣೆಯಲ್ಲಿ ಕೋರಿದ್ದಾರೆ.
