Saturday, March 21, 2026
Saturday, March 21, 2026

Ugadi ಸೊರಬದಿಂದ ಚಂದ್ರಗುತ್ತಿವರೆಗೆ ವಕೀಲರ ಬಳಗದಿಂದ ಪಾದಯಾತ್ರೆ.

Date:

Ugadi ಯುಗಾದಿ ಹಬ್ಬದ ಅಂಗವಾಗಿ ತಾಲೂಕಿನ ವಕೀಲರ ಬಳಗದ ವತಿಯಿಂದ ಪಟ್ಟಣದ ಪುರ ದೈವ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿAದ ಶಕ್ತಿ ಪೀಠ ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ದೇವಿ ಸನ್ನಿಧಿವರೆಗೆ ಎರಡನೇ ವರ್ಷದ ಪಾದಯಾತ್ರೆ ನಡೆಸಲಾಯಿತು.
ಶ್ರೀ ದೇವಿಗೆ ಪೂಜೆ ಸಲ್ಲಿಸಿ, ದರ್ಶನಾಶೀರ್ವಾದ ಪಡೆಯುವ ಜೊತೆಗೆ ಉತ್ತಮ ಮಳೆ ಬೆಳೆಯಾಗಲಿ, ರೈತಾಪಿ ಸಮೂಹ ಸಮೃದ್ಧಿಯಾಗಿರಲಿ, ನಾಡಿನಲ್ಲಿ ಸುಖ-ಶಾಂತಿ ನೆಲೆಸಿರಲಿ ಎಂದು ವಕೀಲರ ಬಳಗದಿಂದ ಪ್ರಾರ್ಥಿಸಲಾಯಿತು. ಪಾದಯಾತ್ರೆಯಲ್ಲಿ ವಕೀಲರ ಮಕ್ಕಳು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಕೆ.ಎಚ್. ಚಂದ್ರಶೇಖರ್, ಮಾಜಿ ಅಧ್ಯಕ್ಷ ಸಿ.ವೈ. ಅಶೋಕ್, ಮಾಜಿ ಕಾರ್ಯದರ್ಶಿ ಎಸ್. ಅರುಣ್, ವಕೀಲರಾದ ಎಚ್. ಆನಂದ್, ಕೆ.ಪಿ. ಮಾರುತಿ, ಕೆ.ಎಸ್. ಪರಶುರಾಮ, ಎಚ್.ಇ. ಸತ್ಯನಾರಾಯಣ, ಶರತ್ ಯಂಕೇನ್, ಆಶೀಕ್ ನಾಗಪ್ಪ, ಯು.ಕೆ. ಗುರುಮೂರ್ತಿ, ಟಿ.ಜಿ. ಸೋಮಶೇಖರ, ಪ್ರಮುಖರಾದ ಹೂವಪ್ಪ ಯಂಕೇನ್, ಏಕಾಂತ ಮತ್ತಿತರರಿದ್ದರು.
Ugadi ೨೦ ಸೊರಬ ೦೧: ಸೊರಬ ಪಟ್ಟಣದಲ್ಲಿ ವಕೀಲರ ಬಳಗದಿಂದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿAದ ಚಂದ್ರಗುತ್ತಿಯ ಶಕ್ತಿಪೀಠ ಶ್ರೀ ರೇಣುಕಾಂಬ ಸನ್ನಿಧಿವರೆಗೆ ಯುಗಾದಿ ಹಬ್ಬದ ನಿಮಿತ್ತ ಪಾದಯಾತ್ರೆ ನಡೆಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ripponpet News ಪೆಟ್ರೋಲ್ ಕೊರತೆ ಎಂಬ ಸುದ್ದಿ ನಂಬಿ ರಿಪ್ಪನ್ ಪೇಟೆಯ ‘ಬಂಕ್’ ಗಳಿಗೆ ಮುಗಿಬಿದ್ದ ಜನ.

Ripponpet News ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್...

Yakshagana ಶಿವಮೊಗ್ಗದ ವರದಾ ಐತಾಳ್ ಅವರಿಗೆ ಶಿವರಾಮ ಕಾರಂತ ಪ್ರತಿಷ್ಠಾನದಿಂದ “ಸಾಧಕಿ ಪ್ರಶಸ್ತಿ” ಪುರಸ್ಕಾರ.

Yakshagana ತಾll 15.03.2026 ರಂದು ಯಕ್ಷಗಾನ ದಲ್ಲಿ ಹೊಸಸಾಧ್ಯತೆಯ ಅನಾವರಣಕ್ಕಾಗಿ ಡಾllಶಿವರಾಮ...

Ramadan ಸಮಾಜದಲ್ಲಿ ಶಾಂತಿ – ಸೌಹಾರ್ದದಿಂದ ಬಾಳಬೇಕು- ಮೌಲಾನಾ ಮುಫ್ತಿ ತಪ್ಜಿಲ್ ಆಲಂ ಖಾಸ್ಮಿ

Ramadan ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಮುಸ್ಲಿಂ ಬಾಂಧವರು...

Chess ಮಾರ್ಚ್ 25 ರಿಂದ ಶಿವಮೊಗ್ಗದಲ್ಲಿ ಬೇಸಿಗೆ ರಜೆ ನಿಮಿತ್ತ ಚೆಸ್ ತರಬೇತಿ ಶಿಬಿರ.

Chess ಶಿವಮೊಗ್ಗ ನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಈ...