Rotary Club Shimoga Midtown ಎಂಡಿಎಫ್ (ರಿ.) ಸಾಗರ, ಸುಮುಖ ಸಹಾಯ ಹಸ್ತ ಸಾಗರ, ರೋಟರಿ ರಕ್ತನಿಧಿ ಸಾಗರ, ಮಲೆನಾಡು ಔಷಧ ಮಾರಾಟಗಾರರ ಸಂಘ ಸಾಗರ, ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಜಿ ಎ ನಾರಿಬೊಲಿ ಶಿಕ್ಷಣ ಮಹಾವಿದ್ಯಾಲಯದ
ಬಿಎಡ್ ಪ್ರಶಿಕ್ಷಣಾರ್ಥಿಗಳ ಆರೋಗ್ಯ ಮತ್ತು ರಕ್ತತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು.
ಸಮಯದ ಮಿತಿಯಲ್ಲಿ 100 ಜನರು ಇದರ ಸದುಪಯೋಗ ಪಡೆದುಕೊಂಡರು. ಇನ್ನೊಂದು ದಿನ ಉಳಿದವರಿಗೆ ಮಾಡಲಾಗುವುದು.
ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸಾಗರದ ಪ್ರಸಿದ್ಧ ಸುಮುಖ ಆಸ್ಪತ್ರೆಯ ಮಧುಮೇಹಿ ಕಾಯಿಲೆಯ ಚಿಕಿತ್ಸೆಯಲ್ಲಿ ತಜ್ಞರಾದ ಡಾ. ಸೌಮ್ಯ ಎ ಯು ರವರು ದೈಹಿಕ ಕ್ಷಮತೆಯನ್ನು ಕಾಪಾಡುವ ಬಗ್ಗೆ ಉದಾಹರಣೆ, ನಿದರ್ಶನಗಳ ಮೂಲಕ ಮಾಹಿತಿ ನೀಡಿದರು. ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶಗಳ ಪ್ರಮಾಣ, ಗೋಲ್ಡನ್ ಪ್ಲೇಟ್ ರೂಲ್ ಬಗ್ಗೆ ತಿಳಿಸಿದರು.
ನಂತರ ಮಾಸಿಕ ಋತುಸ್ರಾವ, ಆ ಸಮಯದಲ್ಲಿನ ಆರೋಗ್ಯ ಸಮಸ್ಯೆಗಳ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.
Rotary Club Shimoga Midtown ರೋಟರಿ ರಕ್ತನಿಧಿಯ ವೈದ್ಯರಾದ ಡಾ. ಸಚಿನ್ ರವರು ಹೃದಯಾಘಾತ, ಹೃದಯಸ್ತಂಭನದ ಕಾರಣಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಹಾಗೂ ಪ್ರಥಮ ಚಿಕಿತ್ಸೆಯನ್ನು ನೀಡುವ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಎಂಡಿಎಫ್ (ರಿ.) ನ ಪ್ರಧಾನ ಕಾರ್ಯದರ್ಶಿಗಳಾದ ಡಾ ಹೆಚ್ ಎಂ ಶಿವಕುಮಾರ್ ರವರು ಸಂಪನ್ಮೂಲ ವ್ಯಕ್ತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಸ್ಥೆ ಹಾಗೂ ಕಾಲೇಜು ಪ್ರಶಿಕ್ಷಣಾರ್ಥಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ, ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಡಿಎಫ್ (ರಿ.) ನ ಅದ್ಯಕ್ಷರಾದ ಶ್ರೀ ಬಿ ಆರ್ ಜಯಂತ್ ರವರು ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೆಡ್ಲಿ ಫಾರ್ಮಾಸಿಕಲ್ಸ್ ನ ಮುಖ್ಯಸ್ಥರು, ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು.
ಸಿಂಚನಾ ವಿನುತಾರವರು ನಿರೂಪಿಸಿದರು.
