Sunday, March 8, 2026
Sunday, March 8, 2026

Rotary Club Shimoga Midtown ರೋಟರಿರಕ್ತ ನಿಧಿ ವತಿಯಿಂದ ರಕ್ತದಾನ ಶಿಬಿರ

Date:

Rotary Club Shimoga Midtown ಎಂಡಿಎಫ್ (ರಿ.) ಸಾಗರ, ಸುಮುಖ ಸಹಾಯ ಹಸ್ತ ಸಾಗರ, ರೋಟರಿ ರಕ್ತನಿಧಿ ಸಾಗರ, ಮಲೆನಾಡು ಔಷಧ ಮಾರಾಟಗಾರರ ಸಂಘ ಸಾಗರ, ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಜಿ ಎ ನಾರಿಬೊಲಿ ಶಿಕ್ಷಣ ಮಹಾವಿದ್ಯಾಲಯದ
ಬಿಎಡ್ ಪ್ರಶಿಕ್ಷಣಾರ್ಥಿಗಳ ಆರೋಗ್ಯ ಮತ್ತು ರಕ್ತತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು.

ಸಮಯದ ಮಿತಿಯಲ್ಲಿ 100 ಜನರು ಇದರ ಸದುಪಯೋಗ ಪಡೆದುಕೊಂಡರು. ಇನ್ನೊಂದು ದಿನ ಉಳಿದವರಿಗೆ ಮಾಡಲಾಗುವುದು.

ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸಾಗರದ ಪ್ರಸಿದ್ಧ ಸುಮುಖ ಆಸ್ಪತ್ರೆಯ ಮಧುಮೇಹಿ ಕಾಯಿಲೆಯ ಚಿಕಿತ್ಸೆಯಲ್ಲಿ ತಜ್ಞರಾದ ಡಾ. ಸೌಮ್ಯ ಎ ಯು ರವರು ದೈಹಿಕ ಕ್ಷಮತೆಯನ್ನು ಕಾಪಾಡುವ ಬಗ್ಗೆ ಉದಾಹರಣೆ, ನಿದರ್ಶನಗಳ ಮೂಲಕ ಮಾಹಿತಿ ನೀಡಿದರು. ನಾವು ಸೇವಿಸುವ ಆಹಾರದಲ್ಲಿ ಪೋಷಕಾಂಶಗಳ ಪ್ರಮಾಣ, ಗೋಲ್ಡನ್ ಪ್ಲೇಟ್ ರೂಲ್ ಬಗ್ಗೆ ತಿಳಿಸಿದರು.
ನಂತರ ಮಾಸಿಕ ಋತುಸ್ರಾವ, ಆ ಸಮಯದಲ್ಲಿನ ಆರೋಗ್ಯ ಸಮಸ್ಯೆಗಳ ನಿಯಂತ್ರಣ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

Rotary Club Shimoga Midtown ರೋಟರಿ ರಕ್ತನಿಧಿಯ ವೈದ್ಯರಾದ ಡಾ. ಸಚಿನ್ ರವರು ಹೃದಯಾಘಾತ, ಹೃದಯಸ್ತಂಭನದ ಕಾರಣಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಹಾಗೂ ಪ್ರಥಮ ಚಿಕಿತ್ಸೆಯನ್ನು ನೀಡುವ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಎಂಡಿಎಫ್ (ರಿ.) ನ ಪ್ರಧಾನ ಕಾರ್ಯದರ್ಶಿಗಳಾದ ಡಾ ಹೆಚ್ ಎಂ ಶಿವಕುಮಾರ್ ರವರು ಸಂಪನ್ಮೂಲ ವ್ಯಕ್ತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಸ್ಥೆ ಹಾಗೂ ಕಾಲೇಜು ಪ್ರಶಿಕ್ಷಣಾರ್ಥಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ, ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಡಿಎಫ್ (ರಿ.) ನ ಅದ್ಯಕ್ಷರಾದ ಶ್ರೀ ಬಿ ಆರ್ ಜಯಂತ್ ರವರು ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೆಡ್ಲಿ ಫಾರ್ಮಾಸಿಕಲ್ಸ್ ನ ಮುಖ್ಯಸ್ಥರು, ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು.
ಸಿಂಚನಾ ವಿನುತಾರವರು ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಕನ್ನಡಿಗರಿಗೆ ಮಧು ಬಂಗಾರಪ್ಪನವರಿಂದ ಶುಭ ಹಾರೈಕೆ

Madhu Bangarappa ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದು...

D. K. Shivakumar ಜಲ ಕ್ರಾಂತಿಯತ್ತ ಕರುನಾಡು – ನೀರಾವರಿ ಯೋಜನೆಗಳಿಗೆ ಬಜೆಟ್’ನಲ್ಲಿ ಭರ್ಜರಿ ಅನುದಾನ

D. K. Shivakumar ಕರ್ನಾಟಕದ ಜಲಸಂಪನ್ಮೂಲವನ್ನು ಸಂರಕ್ಷಿಸಿ, ಪ್ರತಿಯೊಬ್ಬ ರೈತನ ಜಮೀನಿಗೂ...

International Women’s Day ಮಹಿಳಾ ದಿನಾಚರಣೆಗೆ ಮುಖ್ಯಮಂತ್ರಿಗಳಿಂದ ಶುಭ ಹಾರೈಕೆ

International Women's Day ನನ್ನ ಎಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ, ತಾಯಂದಿರಿಗೆ...

B. R. Ambedkar ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಅರ್ಜಿ ಆಹ್ವಾನ ವಿಸ್ತರಣೆ

B. R. Ambedkar ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಏಪ್ರಿಲ್ 5...