ಮಲೆನಾಡು ಇತಿಹಾಸ ಮತ್ತು ಅಧ್ಯಯನ ವೇದಿಕೆಯ ಸರ್ವ ಸದಸ್ಯರ ಸಭೆ ಭಾನುವಾರ ಮಥುರಾ ಪ್ಯಾರಾಡೈಸ್ ಹೋಟೆಲ್ ನಲ್ಲಿ ನಡೆಯಿತು. ವೇದಿಕೆಯ ಅಧ್ಯಕ್ಷರಾದ ಡಾ. ಎಸ್. ಜಿ. ಸಾಮಕ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ಇತಿಹಾಸ ಸಂಶೋಧಕರೂ, ಪುರಾತತ್ವ ಇಲಾಖೆಯ ನಿರ್ದೇಶಕರೂ ಆಗಿದ್ದ ಶ್ರೀಯುತ ಟಿ.ಎಮ್. ಕೇಶವ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಳೆದ ವರ್ಷದಲ್ಲಿ ನಡೆದ ವೇದಿಕೆಯ ಚಟುವಟಿಕೆಗಳನ್ನು ಕುರಿತು ಚರ್ಚಿಸಲಾಯಿತು. ತಾಳಗುಂದ ಉತ್ಖನನ, ಅಲ್ಲಿ ದೊರೆತಿದ್ದ ಸಿಂಹ ಕತಾಂಜನ ಶಾಸನ ಕುರಿತು ಪುರಾತತ್ವ ಇಲಾಖೆ ಸೂಚನಾ ಫಲಕ ಹಾಕಲು ಈ ಹಿಂದೆ ಎಂ. ಪಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅದ ತೀರ್ಮಾನವನ್ನು ಮತ್ತೊಮ್ಮೆ ಜ್ಞಾಪಿಸಲು ತೀರ್ಮಾನಿಸಲಾಯಿತು. ಅದೇ ರೀತಿ ಪುರಂದರ ದಾಸರ ಜನ್ಮ ನೆಲೆಯಂದು ಬಿಂಬಿತವಾಗಿರುವ ಆರಗ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿಸ್ತೃತ ಅಧ್ಯಯನ ಕೈಗೊಳ್ಳಬೇಕು ಬೇಕೆಂದು ನಿರ್ಣಯಿಸಲಾಯಿತು.
ಹಾಗೆಯೆ ಕಳೆದ ಸಾಲಿನಲ್ಲಿ ಮತ್ತು ಇದೇ 2026 ರಲ್ಲಿ ನಡೆದ ಹಂಪಿ ಉತ್ಸವದಲ್ಲಿ ಪ್ರಭಂಧ ಮಂಡಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಲಾಯಿತು.
ಕಾರ್ಯದರ್ಶಿ ದಿಲೀಪ್ ನಾಡಿಗ್ ಕಳೆದ ಸಾಲಿನ ಆಯ- ವ್ಯಯ ಮಂಡಿಸಿದರು. ಆದಿತ್ಯ ನಂಜವಳ್ಳಿ ವಂದನಾರ್ಪಣೆ ನೆರವೇರಿಸಿದರು.
ಮಲೆನಾಡು ಇತಿಹಾಸ ಮತ್ತು ಅಧ್ಯಯನ ವೇದಿಕೆಯ ಸರ್ವ ಸದಸ್ಯರ ಸಭೆ ಯಶಸ್ವಿ
Date:
