ಮಹಾಶಿವರಾತ್ರಿಯ ಪೂಜೆ , ಭಜನೆ, ಉಪವಾಸ, ಅರ್ಚನೆಯ ಪರಂಪರಾಗತ ಆಚರಣೆಗಳು ಒಂದೆಡೆಯಾದರೇ….. ಪರಿಸರವೇ ಪರಮೇಶ್ವರನೆಂಬ ಜಾಗೃತಿಯ ಪರ್ವ ಒಂದೆಡೆ!!! ಶಿವಮೊಗ್ಗದಲ್ಲಿ ತಮ್ಮ ಕನಸಿನ ಈಶ್ವರವನದಲ್ಲಿ ನವ್ಯಶ್ರೀ ನಾಗೇಶ್ ಅವರ ಪರಿಸರ ಶಿವರಾತ್ರಿಯ ಸಂಭ್ರಮ ಮುಗಿಲು ಮುಟ್ಟಿದೆ .
ಪ್ರಕೃತಿಯಲ್ಲಿ ಪರಶಿವನನ್ನು ಕಾಣುವ ಒಳನೋಟಕ್ಕೊಂದು ಸಂಸ್ಕಾರ ಬೇಕು. ನಮ್ಮ ಸಾಗರದ ಪ್ರಶಾಂತ್ ಇಂಥಹ ಸೂಕ್ಷ್ಮಮತಿಯುಳ್ಳ ಕಿರುಚಿತ್ರ ನಿರ್ದೇಶಕ . ಇವರು ತಪ್ಪಸ್ಸಿನಂತೆ ತಾಳ್ಮೆಯಿಂದ ನಿರ್ಮಿಸಿದ ಕಿರುಚಿತ್ರ “ಕೌತುಕ” ಇಂದು ಸಂಜೆ 6.30 ಗೆ ಅಬ್ಬಲಗೆರೆ ಬಳಿ ಇರುವ ಈಶ್ವರವನದ ಹಸಿರು ಸಮುಚ್ಛಯದಲ್ಲಿ ಪ್ರದರ್ಶನವಾಗಲಿದೆ .
