Klive Special Article ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾಗಿದೆ. ಈ ಹಬ್ಬದ ವೈಶಿಷ್ಟ್ಯವೆಂದರೆ
ಇಡೀದಿನ ಉಪವಾಸ,ಜಾಗರಣೆಗಳನ್ನು ಮಾಡಿ,
ನಾಲ್ಕು ಯಾಮಗಳಲ್ಲಿಯೂ ಶಿವಪೂಜೆಯನ್ನು ಮಾಡುವುದರ ಮೂಲಕ ಆಚರಿಸಲಾಗುತ್ತದೆ.ಇಡೀ
ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಆಚರಿಸುವ ಹಬ್ಬ ಇದಾಗಿದೆ.
ಶಿವಭಕ್ತರ ಪಾಲಿಗೆ ಮಂಗಳಕರರಾತ್ರಿ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು
ಹೊತ್ತು ಪೂಜೆ ನಡೆಯುತ್ತದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ದಯಪಾಲಿಸು ಎಂದು ಶಿವನನ್ನು ಪ್ರಾರ್ಥಿಸುವ ಶುಭ ದಿನವೇ ಶಿವ
ರಾತ್ರಿ. ಅಜ್ಞಾನವೆಂಬೊ ಅಂಧಕಾರ ತುಂಬಿರುವಲ್ಲಿ ಶಿವನು ತನ್ನ ಕಟಾಕ್ಷದಿಂದ ಅಜ್ಞಾನವನ್ನು ಪರಿಹರಿಸಿ
ಜ್ಞಾನದ ಬೆಳಕನ್ನು ನೀಡುತ್ತಾನೆ ಎಂಬ ದೃಢವಾದ ನಂಬಿಕೆ ಇದೆ.
ಶಿವಪುರಾಣದಲ್ಲಿ ಹೇಳಿರುವ ಪ್ರಕಾರ ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿಅನುಗ್ರಹಮಾಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ತಿಳಿಸಿದ್ದಾನೆ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡೀ ಶಿವನ ಕುರಿತು ಜಪ ಮಾಡುತ್ತಾ,ತಪಸ್ಸು ಮಾಡಿ ಶಿವನ ಮೆಚ್ಚಿಕೆಗೆ ಪಾತ್ರಳಾಗಿ ವಿವಾಹವಾದಳೆಂಬುದು ಪ್ರತೀತಿ. ಶಿವರುದ್ರ ತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ ಅದನ್ನು ಶಿವ ಕುಡಿದ.ವಿಷವನ್ನು ಗಂಟಲೊಳಗಿಂದ ಇಳಿಯದಂತೆ ಪಾರ್ವತೀ ಇಡೀ ರಾತ್ರಿತಡೆದಳು ಎಂದು ತಿಳಿಸುತ್ತದೆ ಶಿವಪುರಾಣ.
ವಿಷಕುಡಿದಪರಿಣಾಮವಾಗಿಶಿವನಕಂಠ(ಗಂಟಲು)ನೀಲಿ ಬಣ್ಣಕ್ಕೆತಿರುಗುತ್ತದೆ. ಆದ್ದರಿಂದಲೇ ಶಿವನನ್ನು “ನೀಲಕಂಠ”ಎಂದು ಕರೆಯುತ್ತಾರೆ. ವಿಷ್ಣುಅಲಂಕಾರ ಪ್ರಿಯನಾದರೆ,ಶಿವ ಅಭಿಷೇಕ ಪ್ರಿಯ,ಸತತ ಜಲಾ
ಭಿಷೇಕ ಪ್ರಿಯನು.
Klive Special Article ಶಿವನು ಭೋಲೇನಾಥ ಅಂದರೆ ಮುಗ್ಧನು. ಬೇಡಿದ್ದ
ನ್ನು ನೀಡುವ ದಯಾಳು.ಲಂಕಾಧೀಶ ರಾವಣನಿಗೆ ಅವನಭಕ್ತಿಗೆ ಮೆಚ್ಚಿ ಆತ್ಮಲಿಂಗವನ್ನೇ ಕೊಡುತ್ತಾನೆ. ಶಿವಭಕ್ತ ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ ಅವನನ್ನು ಚಿರಂಜೀವಿಯನ್ನಾಗಿ ಮಾಡುತ್ತಾನೆ. ಶಿವಭಕ್ತಸಿರಿಯಾಳನಿಗೂ ಒಲಿದ ಶಿವ. ಕರುಣಾಮಯಿಯಾದ ಶಿವನು ಭಕ್ತಿಗೆ ಒಲಿಯುವನು.
ಶಿವನ ದೇವಾಲಯಗಳಲ್ಲಿ ರಾತ್ರಿಯಿಡೀ ಪೂಜಾದಿಗಳು,ಶಿವನಸ್ತೋತ್ರ ಪಾರಾಯಣ ಎಲ್ಲವೂ ನಡೆಯುವವು. ಶಿವರಾತ್ರಿಯ ಮಾರನೆಯ ದಿನ ಪಾರಣೆಯನ್ನು ಮಾಡಿ ಶಿವರಾತ್ರಿ ಹಬ್ಬವನ್ನು ಆಚರಿಸುವರು.
ಶಿವರಾತ್ರಿ ಹಬ್ಬದಂದು ಭಕ್ತರು ಶಿವನ ದೇವಾಲಯ
ಗಳಿಗೆ ಹೋಗಿ ಶಿವನ ದರ್ಶನ ಮಾಡಿ ಧನ್ಯರಾಗುವರು.
ಶಿವರಾತ್ರಿ ಹಬ್ಬದಂದು ಎಲ್ಲರಿಗೂ ಸನ್ಮಂಗಳವನ್ನು ಕರುಣಿಸುವಂತೆ ಪರಮೇಶ್ವರನಲ್ಲಿ ಭಕ್ತಿಯಿಂದ
ಪ್ರಾರ್ಥನೆ ಮಾಡೋಣ.
Klive Special Article ಮಂಗಳಕರ ರಾತ್ರಿ…ಶಿವರಾತ್ರಿ ಲೇ: ಎನ್. ಜಯಭೀಮ ಜೊಯ್ಸ್. ಶಿವಮೊಗ್ಗ
Date:
