Monday, April 6, 2026
Monday, April 6, 2026

ಪ್ರಸ್ತುತ ಮುದ್ರಣ ಯಂತ್ರಗಳು ತಂತ್ರಜ್ಞಾನಕ್ಕನುಗುಣವಾಗಿ ರೂಪಾಂತರಗೊಂಡಿವೆ- ಎಂ.ಮಾಧವಾಚಾರ್

Date:

ಪ್ರಸ್ತುತ ಮುದ್ರಣ ಯಂತ್ರಗಳು ತಂತ್ರಜ್ಞಾನದ ಉನ್ನತೀಕರಣದೊಂದಿಗೆ ಲೇಟರ್ ಪ್ರೆಸ್, ಸಿಲೆಂಡರ್ ಮಿಷಿನ್, ಆಫ್‌ಸೆಟ್ ಮುದ್ರಣ, ಸ್ಕ್ರೀನ್‌ ಪ್ರಿಂಟಿಂಗ್ ಇತ್ಯಾದಿ ರೂಪಗಳಿಗೆ ರೂಪಾಂತರಗೊಂಡು ಇಂದಿನ ಡಿಟಿಟಲ್ ಯುಗಕ್ಕೆ ತೆರೆದುಕೊಂಡಿದೆ ಎಂದು ಶಿವಮೊಗ್ಗದ ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಎಂ.ಮಾಧವಾಚಾರ್ ಹೇಳಿದರು.

ರೋಟರಿ ಆರ್‌ಎಂಬಿ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮುದ್ರಣ ತಂತ್ರಜ್ಞಾನದ ಬಗ್ಗೆ ಮಾತನಾಡಿ, 6ನೇ ಶತಮಾನದಲ್ಲಿ ಪ್ರಥಮವಾಗಿ ಚೀನಾ ದೇಶದಲ್ಲಿ ಮರದ ಅಕ್ಷರಗಳನ್ನು ತಯಾರಿಸಿ ಮುದ್ರಿಸುವ ಮೂಲಕ ಆರಂಭಗೊಂಡಿತು. ನಂತರ 15ನೇ ಶತಮಾನದಲ್ಲಿ ಆವಿಷ್ಕಾರಗೊಂಡು ಜರ್ಮನಿಯ ಜೋಹಾನ್ಸ್ ಬರ್ಗ್ನಲ್ಲಿ, ಯೂರೋಪ್‌ನ ದೇಶಗಳಲ್ಲಿ ಮುದ್ರಣ ಕ್ರಾಂತಿಯಾಯಿತು ಎಂದು ತಿಳಿಸಿದರು.

ಸೀಸದ ಅಕ್ಷರಗಳನ್ನು ಎರಕ ಹೋಯ್ದು ತಯಾರಿಸಿ, ಯೋಹಾನ್ಸ್ ಗೂಟೆನ್ ಬರ್ಗ್ ಪ್ರಥಮ ಮುದ್ರಣ ಯಂತ್ರವನ್ನು ಬಳಸಿ, ಲೆಟರ್ ಪ್ರೆಸ್ ಮಾದರಿಯಲ್ಲಿ ಬೈಬಲ್ ಪುಸ್ತಕಗಳನ್ನು ಪ್ರಥಮ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಮುದ್ರಿಸಲಾಯಿತು ಎಂದರು.

ಪ್ರಸ್ತುತ ಮುದ್ರಣ ಯಂತ್ರಗಳು ತಂತ್ರಜ್ಞಾನದ ಉನ್ನತೀಕರಣದೊಂದಿಗೆ ಸಾಗುತ್ತಿದೆ. ಇಂದಿನ ವೇಗದ ಯುಗಕ್ಕೆ ಅನುಗುಣವಾಗಿ ಡಿಜಿಟಲ್ ಪ್ರಿಂಟ್, ಆಫ್‌ಸೆಟ್ ಪ್ರಿಂಟಿಂಗ್, ಫ್ಲೆಕ್ಸ್ ಪ್ರಿಂಟ್, ಯುವಿ ಹಾಗೂ ಸ್ಪಾಟ್ ಯೂವಿ, ಲಿಕ್ವಿಡ್ ಯು.ವಿ., ಗೋಲ್ಡ್ ಫಾಯಿಲ್, ಎಂಬೋಜಿಂಗ್ ಮುದ್ರಣವಾಗಿ ಆವಿಷ್ಕಾರಗೊಂಡಿದೆ. ಇಂದಿನ ಆಧುನಿಕ ವೆಬ್ ಆಫ್‌ಸೆಟ್ ಯಂತ್ರಗಳನ್ನು ಬಳಸಿ ದಿನಪತ್ರಿಕೆಗಳು ಗಂಟೆಗೆ 40 ರಿಂದ 60 ಸಾವಿರದವರೆಗೂ ವೇಗವಾಗಿ ಬಹುವರ್ಣದಲ್ಲಿ ಮುದ್ರಣಗೊಳ್ಳುತ್ತಿವೆ ಎಂದು ತಿಳಿಸಿದರು.

ಶಿವಮೊಗ್ಗ ನಗರದಲ್ಲಿ 130 ವರ್ಷದ ಹಿಂದೆಯೇ ಮುದ್ರಣಾಲಯ ಇದ್ದ ದಾಖಲೆಗಳು ನಮ್ಮಲ್ಲಿ ಇವೆ. ಇಂದಿನ ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಮುದ್ರಣ ಸಾಮಗ್ರಿಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್ ಎಂ ಬಿ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಇಂದು ಮುದ್ರಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಮುದ್ರಣದ ಅವಶ್ಯಕತೆ ತುಂಬಾ ಇದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬದಲಾದ ಹಾಗೆ ಸಾಕಷ್ಟು ಹೊಸ ಆವಿಷ್ಕಾರಗಳು ಮೂಡಿಬಂದಿವೆ. ಆದ್ದರಿಂದ ಕಾಲ ಕಾಲಕ್ಕೆ ತಕ್ಕಂತೆ ನಾವು ಸಹ ಬದಲಾವಣೆಯಾಗಬೇಕು ಎಂದರು.

ಆರ್ ಎಂ ಬಿ ಕಾರ್ಯದರ್ಶಿ ಎಸ್.ಪಿ.ಶಂಕರ್, ಖಜಾಂಚಿ ಕಿಶೋರ್ ಕುಮಾರ್, ಜಿ.ವಿಜಯ ಕುಮಾರ್, ಗೋವರ್ಧನ್ ಪಿ.ಬಿ. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Babu Jagjivanram ಬಾಬು ಜಗಜೀವನ ರಾಂ,ಶೋಷಿತ ವರ್ಗದ ದಾರಿದೀಪ- ಎಸ್.ಎನ್.ಚನ್ನಬಸಪ್ಪ

Babu Jagjivanram ಬಾಬು ಜಗಜೀವನ್ ರಾಮ್ ರವರು ಶೋಷಿತ ವರ್ಗದವರ ದಾರಿದೀಪವಾಗಿದ್ದು, ಸಮಾಜದ...

MESCOM ಏಪ್ರಿಲ್ 7. ಶಿವಮೊಗ್ಗ ನಗರ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM  ಶಿವಮೊಗ್ಗ ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ-3 ಗುಡ್‌ಲಕ್ ಸರ್ಕಲ್ ಹತ್ತಿರ,...

Shivamogga Police ನಿದಿಗೆ ಚಾನಲ್ ನಲ್ಲಿ ಗಂಡಸಿನ ಶವಪತ್ತೆ.ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ಪ್ರಕಟಣೆ.

Shivamogga Police ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿದಿಗೆ ಚಾನಲ್‌ನಲ್ಲಿ ಗಂಡಸಿನ...