Shimoga News ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ,ಯೂತ್ ಹಾಸ್ಟೆಲ್ಸ್ ವತಿಯಿಂದ ಅಂಡಮಾನ್ ಪ್ರವಾಸ ಸಂಪನ್ನಗೊಂಡಿತು.
ಶಿವಮೊಗ್ಗ ತಲುಪಿದ ನಂತರ
ಸಹ ಪ್ರವಾಸಿಗರೆಲ್ಲರೂ ಫೆ.7 ರಂದು ಸಂಜೆ
ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ‘ಸ್ನೇಹಮಿಲನ’ದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗದ ಓಂಗಣೇಶ್ ಟ್ರ್ಯಾಕ್ಟರ್ಸ್ ನ ಮಾಲೀಕರು ಉದ್ಯಮಿ ಶ್ರೀ ಭಾಸ್ಕರ್ .ಜಿ. ಕಾಮತ್ ಅವರ ಉಲ್ಲಾಸಮಯ ಭಾಗಿತ್ವದಲ್ಲಿ ಈ ಸ್ನೇಹ ಮಿಲನ ಅತ್ಯಂತ ಹರ್ಷದಾಯಕವಾಗಿ ಜರುಗಿತು.
Shimoga News ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಉಪಸ್ಥಿತರಿದ್ದರು. ಪ್ರವಾಸಿಗರ ಪರವಾಗಿ ಗುಂಪಿನ ಹಿರಿಯ ಉಪೇಂದ್ರ ಮತ್ತು ಊಟ ತಿಂಡಿ ‘ಮೆನು’ ಗೈಡ್ ಆಗಿದ್ದ ಸ್ಮಿತಾ ಮೂರ್ತಿ ಅವರು ತಮ್ಮ ಅನುಭವ ಹಂಚಿಕೊಂಡರು.
ಪ್ರವಾಸ ತಂಡ ಮುನ್ನಡೆಸಿದ ಉತ್ಸಾಹಿ,ವೇದಿಕೆ ಸಹಕಾರ್ಯದರ್ಶಿ ಅರಿಶಿಣಗೆರೆ ನಾಡಿಗ್ ವಿಜಯೇಂದ್ರ ರಾವ್ ಚೇತೋಹಾರಿ ನಿರೂಪಕರಾಗಿದ್ದರು. ಸಹಪ್ರವಾಸಿಗರ ಆಮೋದ ಪ್ರಮೋದಗಳಿಗೆ ಮಿಲನ ಸಾಕ್ಷಿಯಾಯಿತು.
ಮರೆಲಾಗದ ದಿನ…ಸ್ನೇಹಮಿಲನ.
Shimoga News ಯಶಸ್ವಿ ಅಂಡಮಾನ್ ಪ್ರವಾಸ ಪೂರೈಸಿದ ಪ್ರವಾಸಿಗರ ” ಸ್ನೇಹ ಮಿಲನ” ಕಾರ್ಯಕ್ರಮ
Date:
