Sunday, February 8, 2026
Sunday, February 8, 2026

Shimoga Bharat Scouts and Guides ಶಿಬಿರಗಳು ಮಕ್ಕಳ ನಡುವೆ ಉತ್ತಮ ಬಾಂಧವ್ಯ ರೂಪಿಸುತ್ತವೆ- ಶಕುಂತಲಾ ಚಂದ್ರಶೇಖರ್

Date:

Shimoga Bharat Scouts and Guides ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ ತರಲು ಶಿಬಿರಗಳು ಸಹಾಯಕ – ಶ್ರೀಮತಿ ಶಕುಂತಲಾ ಚಂದ್ರಶೇಖರ್ ಜಿಲ್ಲಾ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ

ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆ ಜಾವಳ್ಳಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವತಿಯಿಂದ ದಿ: 07-02-2026 ರಂದು ಒಂದು ದಿನದ ರಾತ್ರಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಣ್ಯರು ಬೇಡನ್ ಪೌಲ್ ರವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವವನ್ನು ಸೂಚಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಜಿಲ್ಲಾ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ ಇವರು ಮಾತನಾಡುತ್ತಾ ಶಿಬಿರವೆಂದರೆ ಎಲ್ಲರೂ ಒಟ್ಟಾಗಿ ಸೇರಿ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ತಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದು ಅವಕಾಶವಾಗಿದೆ. ಇಂತಹ ಶಿಬಿರಗಳು ಮಕ್ಕಳ ನಡುವೆ ಉತ್ತಮ ಬಾಂಧವ್ಯಗಳನ್ನು ಬೆಳೆಸುತ್ತವೆ. ಜೀವನ ಕಲೆ ಹಾಗೂ ಅನುಭವದ ಕಲಿಕೆಯನ್ನು ಉಂಟುಮಾಡುತ್ತವೆ. ಎಲ್ಲಾ ಮಕ್ಕಳು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಬೆಳೆಸುತ್ತವೆ. ಮಕ್ಕಳಿಗೆ ಪಠ್ಯಕ್ರಮದಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯವಾಗುತ್ತವೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ ತರಲು ಶಿಬಿರಗಳು ಸಹಾಯಕವಾಗಿವೆ. ಶಾಂತಿ ಮತ್ತು ಶಿಸ್ತನ್ನು ಮೂಡಿಸುವುದೇ ಈ ಸ್ಕೌಟ್ಸ್ ಅಂಡ್ ಗೈಡ್ಸ್ ನ ಉದ್ದೇಶವಾಗಿದೆ ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಶ್ರೀಯುತ ವೆಂಕಟಾಚಲ ಶಾಸ್ತ್ರಿ, ಜಿಲ್ಲಾ ಆಯುಕ್ತರು, ಕಬ್ಸ್ ವಿಭಾಗ ಇವರು ಮಾತನಾಡುತ್ತ ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ನಮ್ಮ ದೇಶದ ಧ್ಯೇಯಗಳಾದ ಸತ್ಯ, ಶಾಂತಿ, ಪ್ರೀತಿ, ಸ್ನೇಹ ಹಾಗೂ ಸೇವೆ ಇವುಗಳನ್ನು ಎತ್ತಿ ಹಿಡಿಯಬೇಕು. ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಒಳ್ಳೆಯ ನೆನಪುಗಳು ಇರುವಂತೆ ಮಾಡುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಚಾರ್ಯರಾದ ಶ್ರೀಯುತ ಶ್ರೀಕಾಂತ್ ಎಂ ಹೆಗಡೆ ಇವರು ಮಾತನಾಡುತ್ತಾ ಈಗಿನ ಮಕ್ಕಳಿಗೆ ಮನೆಯಲ್ಲಿ ಬೇರೆ ಬೇರೆಯವರ ಜೊತೆ ಹೆಚ್ಚಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಇಂತಹ ಶಿಬಿರಗಳ ಮೂಲಕ ಮಕ್ಕಳು ತಮ್ಮ ಗೆಳೆಯರ ಜೊತೆ, ಶಿಕ್ಷಕರ ಜೊತೆ ಬೆರೆತು ಉತ್ತಮವಾದ ಬಾಂಧವ್ಯವನ್ನು ಹೊಂದಲು ಇದು ಸೂಕ್ತ ವೇದಿಕೆಯಾಗಿದೆ. ಇಂತಹ ಶಿಬಿರಗಳಿಂದ ಜೀವನದಲ್ಲಿ ಮರೆಯಲಾಗದ ಅನುಭವಗಳು ದೊರೆಯುತ್ತವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Shimoga Bharat Scouts and Guides ಶ್ರೀಮತಿ ವಿದ್ಯಾ ಎಸ್. ಫ್ಲಾಕ್ ಲೀಡರ್, ಬುಲ್ ಬುಲ್ಸ್ ವಿಭಾಗ ಇವರು ಕಾರ್ಯಕ್ರಮದಲ್ಲಿ ನೆರೆದಿರುವವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀಯುತ ಎಚ್.ಎನ್. ಎಸ್. ರಾವ್ ಟ್ರಸ್ಟಿಗಳು ಮತ್ತು ಶೈಕ್ಷಣಿಕ ನಿರ್ದೇಶಕರು ಜ್ಞಾನದೀಪ ವಿದ್ಯಾ ಸಂಸ್ಥೆ, ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಹಿರಿಯ ಉಪ ಪ್ರಾಂಶುಪಾಲರಾದ ಡಾ. ರೆಜಿ ಜೋಸೆಫ್, ಉಪ ಪ್ರಾಂಶುಪಾಲರಾದ ಶ್ರೀಮತಿ ವಾಣಿ ಕೃಷ್ಣಪ್ರಸಾದ್, ಶ್ರೀಯುತ ಎಚ್. ಶಿವಶಂಕರಪ್ಪ ಜಿಲ್ಲಾ ತರಬೇತಿ ಆಯುಕ್ತರು ಸ್ಕೌಟ್ಸ್ ವಿಭಾಗ ಶಿವಮೊಗ್ಗ, ಶ್ರೀಯುತ ಜಿ ವಿಜಯಕುಮಾರ್ ಸಾರ್ವಜನಿಕ ಸಂಪರ್ಕ ಅಧಿಕಾರಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಜಿಲ್ಲಾ ಸಂಸ್ಥೆ ಶಿವಮೊಗ್ಗ, ಹಾಗೂ ಶಿಬಿರದ ನಾಯಕರು ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜೇಶ್ ಅವಲಕ್ಕಿ, ಇತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಕಾತ್ಯಾಯಿನಿ, ಶ್ರೀಮತಿ ಹೇಮಲತಾ, ಶ್ರೀ ಆಂಜನೇಯ ಹಾಗೂ ಶ್ರೀಮತಿ ಶಾಂತಮ್ಮ ರವರು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಜ್ಞಾನದೀಪ ಪೂರ್ವ ಪ್ರಾಥಮಿಕ ಶಾಖೆಗಳಾದ ಚನ್ನಗಿರಿ, ಭದ್ರಾವತಿ ಶಿವಮೊಗ್ಗ ಕೈಮರ ಹಾಗೂ ಗುರುಪುರದ ಶಾಲೆಗಳಲ್ಲಿನ 194 ಬನ್ನೀಸ್ ಮತ್ತು ಟ್ಯಾಮ್ ಟೋಲ, ಜ್ಞಾನದೀಪ ಶಾಲೆಯ 60 ಕಬ್ಸ್ ಮತ್ತು 40 ಬುಲ್ ಬುಲ್ಸ್, 48 ಸ್ಕೌಟ್ಸ್ ಮತ್ತು 58 ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಲಿಕಾ ಅನುಭವಗಳನ್ನು ಪಡೆದುಕೊಂಡರು.

ಶಾಲೆಯ ಸ್ಕೌಟ್ ಮಾಸ್ಟರ್ ಶ್ರೀ ಶ್ರೀಕಾಂತ್ ಗೋಸಾವಿಯವರು ನಿರೂಪಿಸಿ, ಕಬ್ ಮಾಸ್ಟರ್ ದಿನೇಶ್ ಸಿಂಗ್ ವಂದಿಸಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಜೈಲಿನಿಂದ ಬಿಡುಗಡೆಯಾದ ರೌಡಿ ಶೀಟರ್ ಕಾಲಿಗೆ ಗುಂಡು

Breaking News ಶಿವಮೊಗ್ಗಜಿಲ್ಲೆಯ ಭದ್ರಾವತಿ ತಾಲೂಕಿನ ಶಿವಾನಿ ಕ್ರಾಸ್ ಬಳಿ ರೌಡಿ...

Shimoga News ಯಶಸ್ವಿ ಅಂಡಮಾನ್ ಪ್ರವಾಸ ಪೂರೈಸಿದ ಪ್ರವಾಸಿಗರ ” ಸ್ನೇಹ ಮಿಲನ” ಕಾರ್ಯಕ್ರಮ

Shimoga News ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ,ಯೂತ್...

Siddaramaiah ಎಂಎಸ್ಐಎಲ್ ವತಿಯಿಂದ ಚಿಟ್ಸ್ ಮತ್ತು ಸಾಫ್ಟ್ ವೇರ್ ,ಮೊಬೈಲ್ ಆ್ಯಪ್ ಬಿಡುಗಡೆ.

Siddaramaiah ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್...