Friday, March 20, 2026
Friday, March 20, 2026

Department of Social Welfare ಕುಷ್ಟರೋಗ ತಾರತಮ್ಯ ಬೇಡ-ಸೂಕ್ತ ಚಿಕಿತ್ಸೆಯಿಂದ ಪೂರ್ಣ ಗುಣ ಸಾಧ್ಯ : ಡಾ.ನಟರಾಜ್

Date:

Department of Social Welfare ಬಡವ, ಶ್ರೀಮಂತ, ಗಂಡು, ಹೆಣ್ಣು ಎಂಬ ಬೇಧವಿಲ್ಲದೆ ಯಾರಲ್ಲಿ ಬೇಕಾದರೂ ಕುಷ್ಟರೋಗ ಬರಬಹುದಾಗಿದ್ದು ರೋಗಲಕ್ಷಣಗಳು ಕಂಡು ಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ಡಿಹೆಚ್‌ಓ ಡಾ.ನಟರಾಜ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೋಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳ ಸಹಯೋಗದೊಂದಿಗೆ ಆರ್.ಎಮ್.ಎಲ್ ನಗರದ ಕನಕ ವಿದ್ಯಾ ಸಂಸ್ಥೆಯ ಮುಂಭಾಗದಿಂದ ಏರ್ಪಡಿಸಲಾಗಿದ್ದ ಕುಷ್ಠರೋಗ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕುಷ್ಟರೋಗಕ್ಕೆ ಬಹುವಿಧ ಔಷಧ(ಎಂಡಿಟಿ) ಚಿಕಿತ್ಸೆಯು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಹಾಗೂ ಸಹಾಯಕ ಔಷಧಿಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಕುಷ್ಟರೋಗದಿಂದ ಅಂಗವೈಕಲ್ಯಕ್ಕೆ ಒಳಗಾದವರಿಗೆ ರಿ-ಕನ್ಸ÷್ಟçಕ್ಟಿವ್ ಶಸ್ತçಚಿಕಿತ್ಸೆಯನ್ನು ಆಯ್ದ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಲಾಗುವುದು.
ಮಚ್ಚೆಗಳನ್ನು ಗುಪ್ತವಾಗಿರಸದೇ ವೈದ್ಯರಲ್ಲಿ ತೋರಿಸಿಕೊಂಡು, ಪ್ರಾರಂಭಿಕ ಹಂತದಲ್ಲಿಯೇ ತೋರಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ಅಂಗವೈಕಲ್ಯ ತಡೆಯಬಹುದಾಗಿದ್ದು, ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ರೋಗಮುಕ್ತರಾಗಬೇಕೆಂದು ಹಾಗೂ ರೋಗ ಕಳಂಕವೆAದು ಭಾವಿಸಬಾರದು. ಮೌಢ್ಯತೆಯಿಂದ ಹೊರಬರಬೇಕೆಂದು ಕರೆ ನೀಡಿದರು.
ಡಿಎಲ್‌ಓ ಡಾ.ಕಿರಣ್ ಮಾತನಾಡಿ, ಸುಮಾರು 80 ರಿಂದ 90 ವರ್ಷಗಳ ಹಿಂದೆ ಕುಷ್ಟರೋಗಕ್ಕೆ ಯಾವುದೇ ಔಷಧಿಗಳಿರಲಿಲ್ಲ. ಆಗ ಜನರ ಮನಸ್ಸಿನಲ್ಲಿ ಈ ರೋಗದ ಕುರಿತು ದೊಡ್ಡ ಮೌಢ್ಯತೆ ಇತ್ತು. ಇದು ಹಿಂದಿನ ಜನ್ಮದ ಪಾಪವೆಂದು ಪರಿಗಣಿಸಿದ್ದರು. ಅಂದಿನ ದಿನಮಾನದಲ್ಲಿ ಮಹಾತ್ಮಾ ಗಾಂಧೀಜಿಯವರು ತಮ್ಮ ಸಾಬರಮತಿ ಆಶ್ರಮದಲ್ಲಿ ಈ ರೋಗಿಗಳಿಗೆ ಆರೈಕೆ ಮಾಡಿ ಚಿಕಿತ್ಸೆ ಕೊಡಿಸಿ ಗುಣಮುಖರಾಗಿಸುತ್ತಿದ್ದರು. ಇದರ ಸ್ಮರಣಾರ್ಥ ಜ.30 ಗಾಂಧೀಜಿಯವರು ಹುತಾತ್ಮರಾದ ದಿನವನ್ನು ಸರ್ಕಾರವು ಕುಷ್ಟರೋಗ ನಿರ್ಮೂಲನೆ ದಿನವನ್ನಾಗಿ ಆಚರಿಸುತ್ತಿದೆ ಎಂದರು.
ಜ.30 ರಿಂದ ಫೆ.13 ರವರೆಗೆ 15 ದಿನಗಳ ಕಾಲ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನ ಮಾಡಲಾಗುತ್ತಿದೆ. ಕುಷ್ಟರೋಗವು ಮೈಕ್ರೋಬ್ಯಾಕ್ಟೀರಿಯಂ ಲೆಪ್ರೆ ಎಂಬ ಸೂಕ್ಷಾö್ಮಣುವಿನಿಂದ ಬರುವ ಕಾಯಿಲೆಯಾಗಿದ್ದು ನಿಧಾನವಾಗಿ ಸೋಂಕು ಹರಡುತ್ತದೆ. ಪ್ರಾಥಮಿಕವಾಗಿ ಚರ್ಮ, ನರಗಳ ಮೇಲೆ ಪರಿಣಾಮ ಬೀರುತದೆ. ರೋಗ ಇರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ರೋಗ ಹರಡುತ್ತದೆ. ಈ ರೋಗ ವಂಶಪಾರAರ‍್ಯವಲ್ಲ. ಕುಷ್ಟ ರೋಗದ ಬಗ್ಗೆ ಯಾವುದೇ ಬೇಧ, ತಾರತಮ್ಯ ಬೇಡ.
ಚರ್ಮದ ಮೇಲೆ ತಿಳಿಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣದ ಸ್ಪರ್ಷಜ್ಞಾನವಿಲ್ಲದ ಮಚ್ಚೆಗಳು, ಹುಬ್ಬು ಕಣ್ಣರೆಪ್ಪೆ ನಷ್ಟ, ಕೈ ಅಥವಾ ಕಾಲಿನ ಸ್ಪರ್ಶಜ್ಞಾನ ಕಡಿಮೆಯಾಗುವುದು, ಕೈ ಬೆರಳುಗಳು, ಪಾದಗಳಲ್ಲಿ ನಿಶ್ಯಕ್ತಿ ರೋಗ ಲಕ್ಷಣಗಳಾಗಿವೆ. ರೋಗ ತೀವ್ರತೆ ಮೇಲೆ ಪಿಬಿ ಮತ್ತು ಎಂಬಿ ಎಂದು ವರ್ಗೀಕರಿಸಲಾಗಿದ್ದು, ಪಿಬಿ ಗೆ 6 ತಿಂಗಳ ಕಾಲ ಉಚಿತ ಬಹುಔಷಧಿ ಚಿಕಿತ್ಸೆ, ಎಂಬಿ ಗೆ 12 ತಿಂಗಳ ಕಾಲ ಔಷಧಿ ನೀಡಲಾಗುತ್ತದೆ. ಸೂಕ್ತ ಚಿಕಿತ್ಸೆಯಿಂದ ಈ ರೋಗವನ್ನು ಸಂಪೂರ್ಣವಾಗಿ ಗುಣ ಹೊಂದಬಹುದು.
ಜಿಲ್ಲೆಯಲ್ಲಿ ಈ ಸಾಲಿನ ಏಪ್ರಿಲ್‌ನಿಂದ ಇಲ್ಲಿಯವರೆಗೆ 41 ಕುಷ್ಟರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನಿಡಲಾಗುತ್ತಿದೆ. 2025-26 ನೇ ಸಾಲಿಗೆ 28 ಜನರು ಗುಣಮುಖರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕುಷ್ಟರೋಗದಿಂದ ಸಂಪೂರ್ಣರಾಗಿ ಗುಣಮುಖರಾದ ಶಿವಪ್ಪ, ಲಕ್ಷ್ಮಣ ಇಕ್ಬಾಲ್ ಮತ್ತು ಮೊಹಮ್ಮದ್ ಜಮೀರ್‌ರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿದ್ದು, ಈ ವೇಳೆ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇವರು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರಲ್ಲಿ ಜಾಗೃತಿ ಮೂಡಿಸಿದರು.
Department of Social Welfare ಜಾಥಾವು ಆರ್‌ಎಂಎಲ್ ನಗರದ ಕನಕ ವಿದ್ಯಾಸಂಸ್ಥೆಯಿಂದ ಪ್ರಾರಂಭಗೊಂಡು ಆರ್.ಎಂ.ಎಲ್ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಗಿಬಂದು ಸೀಗೆಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ, ಊರುಗಡೂರು ಪಿಹೆಚ್‌ಸಿ ವೈದ್ಯಾಧಿಕಾರಿ ಡಾ. ಕಾಂಚನ, ಮಾಜಿ ಪಾಲಿಕೆ ಸದಸ್ಯರಾದ ರಾಜು, ಸ್ಥಳೀಯ ಮುಖಂಡರಾದ ಪ್ರಸನ್ನಕುಮಾರ್, ಮೂರ್ತಿ, ನೇತಾಜಿ, ಪೂಜಾ ಚಾರಿಟಬಲ್ ಟ್ರಸ್ಟ್, ಅಂಬೇಡ್ಕರ್ ಜಾನಪದ ಕಲಾ ತಂಡ, ನೇಸರ ಕಲಾ ತಂಡ, ಸಿಮ್ಸ್ ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...