ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಶಿವಮೊಗ್ಗ ಗಣರಾಜ್ಯೋತ್ಸವದ ಅಂಗವಾಗಿ ಪೌರಕಾರ್ಮಿಕರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಖೆಯ ವ್ಯವಸ್ಥಾಪಕರಾದ ಶ್ರೀಯುತ ಗಣಪತಿ ಷಣೆ ರವರು ಹಾಗೂ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಶಿವಮೊಗ್ಗ ನಗರದ ನಗರಸಭೆಯ ಸುಮಾರು ಹತ್ತು ಜನ ಪೌರ ಕಾರ್ಮಿಕರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ ಹಾಗೂ ಆಭರಣ ಜ್ಯುವೆಲರ್ಸ್ ಸಂಸ್ಥೆಯ ಮುಮೆಂಟೊ ಕೊಡುವುದರ ಮೂಲಕ ಮತ್ತು ಬಂದ ಎಲ್ಲಾ ಪೌರಕಾರ್ಮಿಕರಿಗೆ ಗಿಫ್ಟ್ ವೋಚರ್ ಗಳನ್ನು ಕೊಡುವುದರ ಮೂಲಕ ಸನ್ಮಾನಿಸಲಾಯಿತು. ಹಾಗೂ ಶಾಖೆಯ ವ್ಯವಸ್ಥಾಪಕರು ಮಾತನಾಡಿ ಪ್ರತಿದಿನ ನಾವು ನಿದ್ದೆಯಿಂದ ಹೇಳುವ ಮುನ್ನವೇ ನಗರದ ರಸ್ತೆಯನ್ನು ಬಡಾವಣೆಗಳನ್ನು ಸ್ವಚ್ಛಗೊಳಿಸಿ ನಮ್ಮ ಆರೋಗ್ಯವನ್ನು ಕಾಪಾಡುವ ಮಹಾನ್ ವ್ಯಕ್ತಿಗಳೇ ಈ ಪೌರ ಕಾರ್ಮಿಕರು ಇವರು ಕೇವಲ ಸ್ವಚ್ಛತಾ ಕಾರ್ಮಿಕರಲ್ಲ.ಇವರು ಸಮಾಜದ ನಿಜವಾದ ಆರೋಗ್ಯ ಕಾವಲುಗಾರರು ಅಥವಾ ‘ವೈದ್ಯರು’ ಎಂದರೆ ತಪ್ಪಾಗಲಾರದು. ಎಂದು ಹೇಳುತ್ತಾ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಗಣರಾಜ್ಯೋತ್ಸವದ ಅಂಗವಾಗಿ ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಪೌರಕಾರ್ಮಿಕರಿಗೆ ಸನ್ಮಾನ
Date:
