24 ಗಂಟೆಗಳ ಗಮಕ ವಾಚನ ಮಾಡುವ ಮೂಲಕ ವಿಶ್ವ ದಾಖಲೆಗೆ ಶಿವಮೊಗ್ಗ ಸಮೀಪದ ಹೊಸಹಳ್ಳಿಯು ಯುವ ಗಮಕಿ , ಪದ್ಮಶ್ರೀ ಗಮಕ ಗಂಧರ್ವ ಹೆಚ್.ಆರ್. ಕೇಶವಮೂರ್ತಿರವರ ಶಿಷ್ಯಪ್ರಸಾದ್ ಭಾರದ್ವಾಜ್ ಮುಂದಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜ. 24 ರ ಮಧ್ಯಾಹ್ನ 3:30ಕ್ಕೆ ಕಾರ್ಯಕ್ರಮ ರವೀಂದ್ರನಗರ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಉದ್ಘಾಟನೆಯಾಗಲಿದೆ. ಸಂಸದ ಬಿ. ವೈ. ರಾಘವೇಂದ್ರ ಉದ್ಘಾಟನೆ ನಡೆಸುವರು. ಮುಖ್ಯ ಅತಿಥಿಗಳಾಗಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತೆ, , ಕರ್ನಾಟಕ ಗಮಕಕಲಾ ಪರಿಷತ್ ಮಾಜಿ ಅಧ್ಯಕ್ಷೆ ಬೆಂಗಳೂರು, ಗಂಗಮ್ಮ ಕೇಶವಮೂರ್ತಿ, ಬೆಂಗಳೂರು ಮತ್ತು ಕನ್ನಡ ಸಂಸ್ಕೃತಿ ಇಲಾಖೆ, ಶಿವಮೊಗ್ಗದ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ,
ಅಧ್ಯಕ್ಷತೆಯನ್ನು ಗಮಕ ಕಲಾ ಪರಿಷತ್, ಹೊಸಹಳ್ಳಿ ಇದರ ಅಧ್ಯಕ್ಷ ಹೆಚ್. ಎಸ್. ಸತ್ಯನಾರಾಯಣ ವಹಿಸುವರೆಂದರು.
24 ಗಂಟೆಗಳ ಗಮಕ ವಾಚನ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಾಗುವುದು ಸಂಜೆ 5 ಕ್ಕೆ ಗಮಕ ವಾಚನ ಆರಂಭವಾಗುವುದು. ಸಮಾರೋಪ ಸಮಾರಂಭ ಜನವರಿ 25 ಭಾನುವಾರ ಸಂಜೆ : 7-30ಕ್ಕೆ ನಡೆಯಲಿದೆ
ಅಧ್ಯಕ್ಷತೆಯನ್ನು ಸುಬ್ರಮಣ್ಯ ಶಾಸ್ತ್ರೀ, ಶಿವಮೊಗ್ಗ ಅಧ್ಯಕ್ಷರು, ಕರ್ನಾಟಕ ಗಮಕ ಕಲಾ ಪರಿಷತ್ (ರಿ.), ಬೆಂಗಳೂರು ಜಿಲ್ಲಾ ಶಾಖೆ, ಶಿವಮೊಗ್ಗ, ಮುಖ್ಯ ಅತಿಥಿಗಳಾಗಿ : ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಶಾಸಕರು, ಶಿವಮೊಗ್ಗ
ಹೆಚ್.ಎಸ್. ಗೋಪಾಲ, * ಹಿರಿಯ ವ್ಯಾಖ್ಯಾನಗಾರರು ಆಗಮಿಸುವರೆಂದರು.
ಅಹೋರಾತ್ರಿ ಗಮಕ ವಾಚನದ ಮೂಲಕ ವಿಶ್ವ ದಾಖಲೆಗೆ ಸಿದ್ಧರಾದ ಪ್ರಸಾದ್ ಭಾರದ್ವಾಜ್
Date:
