Chamber of commerce Shivamogga ದೇಶ ಪ್ರಗತಿ ಸಾಧಿಸುವಲ್ಲಿ ಹಣಕಾಸು ಸಂಸ್ಥೆಗಳ ಪಾತ್ರ ಅಪಾರ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಸಿ ಎಸ್ ಬಿ ಬ್ಯಾಂಕ್ ಶಿವಮೊಗ್ಗ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರದಲ್ಲಿ ಮಾತನಾಡಿ, ಹಣಕಾಸು ಸಂಸ್ಥೆಗಳು ಜನರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ಪ್ರೋತ್ಸಾಹಿಸಬೇಕು. ಜನರ ಜೀವನಕ್ಕೆ ಅನುಕೂಲವಾಗುವ ಯೋಜನೆಯನ್ನು ಒದಗಿಸಬೇಕು ಎಂದು ತಿಳಿಸಿದರು.
ಉದ್ಯಮಿ ಈಶ್ವರ್ ಸರ್ಜಿ ಮಾತನಾಡಿ, ಜಿಲ್ಲೆಗೆ ಹೊಸ ಬ್ಯಾಂಕ್ ಸಂಸ್ಥೆಗಳು ಬರುತ್ತಿರುವುದು ಸ್ವಾಗತಾರ್ಹ. ನಗರದಲ್ಲಿ ಹೆಚ್ಚಿನ ಅವಕಾಶಗಳು ಇರುವುದನ್ನು ಖಚಿತಪಡಿಸುತ್ತವೆ ಎಂದರು.
ಕೇರಳ ಸಮಾಜಂ ಅಧ್ಯಕ್ಷ ಕೆ.ರವೀಂದ್ರ ಮಾತನಾಡಿ, ಜನರಿಗೆ ಉತ್ತಮ ರೀತಿಯಲ್ಲಿ ಹಣಕಾಸು ಸೇವೆಗಳನ್ನು ಒದಗಿಸುವುದರಿಂದ ಬ್ಯಾಂಕ್ ಪ್ರಗತಿ ಸಾಧಿಸುವ ಜತೆಯಲ್ಲಿ ಜನರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಗೋಕುಲಂ ಚಿಟ್ಸ್ ಮತ್ತು ಫೈನಾನ್ಸ್ ಎಜಿಎಂ ಎನ್.ರಾಗೇಶ್ ಮಾತನಾಡಿ, ಐವತ್ತು ವರ್ಷದಿಂದ ಸಿ ಎಸ್ ಬಿ ಬ್ಯಾಂಕ್ ನೊಂದಿಗೆ ವ್ಯವಹಾರ ಚಟುವಟಿಕೆ ನಡೆಸುತ್ತಿದ್ದು, ಒಳ್ಳೆಯ ಸೇವೆ ನೀಡುತ್ತಿದೆ ಎಂದು ತಿಳಿಸಿದರು.
Chamber of commerce Shivamogga ಸಿ ಎಸ್ ಬಿ ಬ್ಯಾಂಕ್ ಜೋನಲ್ ಹೆಡ್ ಜೈನಿತ್ ಶರ್ಮ ಮಾತನಾಡಿ, 105 ವರ್ಷದಿಂದ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ 60ನೇ ಶಾಖೆ ಆರಂಭಗೊಂಡಿದೆ ಎಂದರು.
ಬಿ.ಎಸ್.ಜಗನ್ನಾಥ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕ್ಲಸ್ಟರ್ ಹೆಡ್ ಕೆ.ಪುರುಷೋತ್ತಮ್, ಯಶವಂತ್ ಮತ್ತಿತರರು ಇದ್ದರು.
