ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀನಾಗಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಹತ್ತನೇ ವರ್ಷದ ವರ್ಧಂತ್ಯುತ್ಸವ ಜ:27 ಹಾಗೂ ಜ:28ರಂದು ನಡೆಯಲಿದೆ.
ಜ:27ರ ಬೆಳಿಗ್ಗೆ 8 ಕ್ಕೆ ಶ್ರೀಕುಲದೇವತಾ ಪ್ರಾರ್ಥನೆ, ಸ್ವಸ್ತಿವಾಚನ, ಪುಣ್ಯಾಹವಾಚನ ಹಾಗೂ ಋತ್ವಿಗ್ವರ್ಣನೆ ಮತ್ತು ಷಣ್ನಾಳಿಕೇರ ಗಣಹೋಮ 11:30ಕ್ಕೆ ಪೂರ್ಣಾಹುತಿ ಮಂಗಳಾರತಿ , ಸಂಜೆ 6 ಕ್ಕೆ ಅಷ್ಟೋತ್ತರ ಶತಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ ಹಾಗೂ ಅಧಿವಾಸ ಹೋಮ, ಪುರ್ಣಾಹುತಿ ಇತ್ಯಾದಿ ಕಾರ್ಯಕ್ರಮಗಳು ಏರ್ಪಾಡಾಗಿದೆ.
ಜ: 28ರಂದು ಬೆಳಿಗ್ಗೆ 8:30ಕ್ಕೆ ಶ್ರೀಕುಲದೇವತಾ ಪ್ರಾರ್ಥನೆ, ಸ್ವಸ್ತಿವಾಚನ, ಪುಣ್ಯಾಹ, ಋತ್ವಿಗ್ವರ್ಣನೆ ಕಲಾತತ್ತ÷್ವ ಹೋಮ 108 ಕಲಶಾಭಿಷೇಕ ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ(ಅನ್ನ ಸಂತರ್ಪಣೆ) ನಡೆಯಲಿದೆ.
ಸಾರ್ವಜನಿಕರು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ 9071600152 ಮೊಬೈಲ್ ಸಂಖ್ಯೆಯಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀಗಣೇಶ ಭಟ್ಟರು ಅಥವಾ ಸಂಘದ ಕಾರ್ಯಾಧ್ಯಕ್ಷರಾದ ಎಂ.ಜಿ.ಕೇಶವಪ್ಪ-9916295438, ಕಾರ್ಯದರ್ಶಿ ಶಶಿಧರ ಎಂ.ಆರ್.-7019811715 ರನ್ನು ಸಂಪರ್ಕಿಸಬಹುದೆಂದು ಶ್ರೀನಾಗಚೌಡೇಶ್ವರಿ ಅಮ್ಮನವರ ಸೇವಾ ಸಮಿತಿ(ರಿ)ನ ಕೋರಲಾಗಿದೆ.
