Shimoga News ಶಿವಮೊಗ್ಗ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಮಾಲ್ಗಳು ಮತ್ತು ಶೋರೂಂಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು 100ಕ್ಕೆ 60 ಭಾಗ ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆಯಲ್ಲಿ ನಡೆದ 2026-27ನೇ ಸಾಲಿನ ಆಯ-ವ್ಯಯ ಒಂದನೇ ಪೂರ್ವ ಭಾವಿ ಸಭೆಯಲ್ಲಿ ಕರುನಾಡು ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.
Shimoga News ನಗರದ ಖಾಸಗಿ ಆಸ್ಪತ್ರೆಗಳಲ್ಲಿ, ವಾಹನ ಪಾರ್ಕಿಂಗ್ ಆಸ್ಪತ್ರೆಯ ಜಾಗದಲ್ಲಿಯೇ ನಿರ್ಮಿಸಿಕೊಳ್ಳಲು ಮತ್ತು ನಗರದಲ್ಲಿ ಅಳವಡಿಸುವ ಪ್ಲೆಕ್ಸ್ ಮತ್ತು ಬ್ಯಾನರ್ಗಳನ್ನು 3 ದಿವಸಗಳ ಅವಧಿ ಮೀರದಂತೆ ಕ್ರಮ ಕೈಗೊಳ್ಳಬೇಕು. ನಗರದ ಮುಖ್ಯ ರಸ್ತೆಗಳ ಯುಟರ್ನ್, ಎಡ ಮತ್ತು ಬಲಭಾಗದಲ್ಲಿ ಯಾವುದೇ ಪ್ಲೆಕ್ಸಿಗಳನ್ನಾಗಲೀ ಮತ್ತು ಜಾಹಿರಾತು ಫಲಕಗಳನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕು ಮತ್ತು ಮಹಾನಗರಪಾಲಿಕೆಯಲ್ಲಿ ಖಾತೆ ಬದಲಾವಣೆಯ ನೂರಾರು ಅರ್ಜಿಗಳು ಮತ್ತು ಇ ಸ್ವತ್ತು ಮಾಡಿಸಿಕೊಳ್ಳಲು ನೂರಾರು ಅರ್ಜಿಗಳನ್ನು ವಿಲೇ ಇಟ್ಟಿರುವುದನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಮೂರ್ತಿ ಎಸ್.ಪಿ., ಪ್ರಧಾನ ಕಾರ್ಯದರ್ಶಿ ಮೂರ್ತಿ ಸಿ, ಪದಾಧಿಕಾರಿಗಳಾದ ಅರುಣ್, ನಿರಂಜನ್, ಶ್ರೀನಿವಾಸ ಶಿವಣ್ಣ ಇತರರಿದ್ದರು.
