Monday, February 2, 2026
Monday, February 2, 2026

B.Y. Raghavendra ಕಾಯಕವೇ ಶ್ರೇಷ್ಠ, ಮನುಷ್ಯತ್ವ ಬೋಧಿಸುವುದೇ ನಿಜವಾದ ಧರ್ಮ- ಬಿ.ವೈ.ರಾಘವೇಂದ್ರ

Date:

B.Y. Raghavendra ಕಾಯಕವೇ ಎಲ್ಲಕ್ಕಿಂತ ಶ್ರೇಷ್ಟ. ಮನುಷ್ಯತ್ವ ಬೋಧಿಸುವುದೇ ನಿಜವಾದ ಧರ್ಮ ಎಂದು ನಂಬಿ ಅದನ್ನೇ ಪ್ರತಿಪಾತಿಸುತ್ತಿದ್ದ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರು ನಮ್ಮೆಲ್ಲರಿಗೂ ಆದರ್ಶ ಪುರುಷರು ಎಂದು ಸಂಸದರಾದ ಬಿ.ವೈ.ರಾಘವೇಂದ್ರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಸಿದ್ದರಾಮೇಶ್ವರರು ನೇರ ಮತ್ತು ನಿಷ್ಟುರ ನುಡಿಯ ದಾರ್ಶಜನಿಕರು. ಬಸವಾದಿ ಶರಣರೊಂದಿಗೆ ಸಮ ಸಮಾಜದ ನಿರ್ಮಾಣದಲ್ಲಿ ತೊಡಗಿದ್ದವರು. 12 ನೇ ಶತಮಾನದಲ್ಲೇ ನೂರಾರು ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ನೀರಾವರಿ ಕ್ರಾಂತಿಗೆ ನಾಂದಿ ಹಾಡಿದವರು. ಕುಡಿಯುವ ನೀರಿನ ಯೋಜನೆಗಳಿಗೆ ಇವರೇ ಪ್ರೇರಕ ಶಕ್ತಿ .
ಇವರು ದೂರದೃಷ್ಟಿವುಳ್ಳ ಕಾರ್ಯಕ್ರಮ ನೀಡುತ್ತಿದ್ದರು. ಹಾಗೂ ಜನ ಸೇವೆಯ ಮೂಲಕ ಶಿವಾರಾಧನೆ ಮಾಡುತ್ತಿದ್ದರು. ಇಂತಹ ದಾರ್ಶನಿಕರ ಜೀವನ ಮೌಲ್ಯಗಳನ್ನು ನಾವು ಅಳವಡಿಸಿಕೊಂಡಲ್ಲಿ ಈ ಸಮಾಜಕ್ಕೆ, ನಮ್ಮ ಜೀವನಕ್ಕೆ ನಾವು ನ್ಯಾಯ ಒದಗಿಸಬಹುದು.
ಮೂಢನಂಬಿಕೆ, ಅಸಮಾನತೆ, ತಾರತಮ್ಯ ತಿರಸ್ಕರಿಸಿದ್ದ ಅವರು ಮನುಷ್ಯತ್ವವೇ ಮುಖ್ಯವೆಂದು ಮನುಕುಲದ ಏಳ್ಗೆಗಾಗಿ ದುಡಿದರು. ಇಂತಹ ಮಹಾನ್ ಪುರುಷರ ಮೌಲ್ಯಗಳು, ತತ್ವಗಳು ಯುವ ಪೀಳಿಗೆಗೆ ಎಂದಿಗೂ ಮಾದರಿಯಾಗಿವೆ ಎಂದ ಅವರು ಶ್ರೀ ಸಿದ್ದರಾಮೇಶ್ವರರಂತೆ ಅವರ ಸಮಾಜ ಕೂಡ ಶ್ರೇಷ್ಠವಾಗಿದೆ ಎಂದರು.
B.Y. Raghavendra ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ ಉಪನ್ಯಾಸ ನೀಡಿ ಮಾತನಾಡಿ, ಯಾವುದೇ ಮಹಾನ್‌ಪುರುಷರ, ದಾರ್ಶನಿಕರ ಜಯಂತಿಗಳು ಆತ್ಮಾವಲೋಕನಕ್ಕೆ ಒಂದು ವೇದಿಕೆಯಾಗಿ, ಅವರ ಜೀವನ ಚರಿತ್ರೆ, ಮೌಲ್ಯಗಳು, ತತ್ವಗಳನ್ನು ಅರಿತು ಅವುಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವ ಪ್ರಯತ್ನಗಳಾಗಬೇಕೇ ವಿನಃ ಕೇವಲ ಸಭೆ ಸಭಾರಂಭಗಳಿಗೆ ಸೀಮಿತವಾಗಬಾರದು ಎಂದರು.
ಶ್ರೀ ಸಿದ್ದರಾಮೇಶ್ವರರು ಕಾಯಕಯೋಗಿಗಳು. ಕಾಯಕವೇ ಸರ್ವಶ್ರೇಷ್ಟವೆಂದು ಅದನ್ನೇ ನಂಬಿ ನಡೆದವರು. 12 ನೇ ಶತಮಾನದಲ್ಲಿಯೇ ಯಾವುದೇ ಆಧುನಿಕ ಇಂಜಿನಿಯರಿAಗ್ ವ್ಯವಸ್ಥೆ ಇಲ್ಲದ ಕಾಲದಲ್ಲಿ ಜನ-ಜಾನುವಾರುಗಳಿಗೆ ಅತ್ಯುತ್ತಮವಾದ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದರು. ಸಮ ಸಮಾಜದ ನಿರ್ಮಾಣಕ್ಕಾಗಿ ಬಸವಾದಿ ಶರಣರೊಂದಿಗೆ ಹೋರಾಡಿದ್ದರು. ಅತ್ಯುತ್ನತ ಉನ್ನತ ಸ್ಥಾನವಾದ ಅನುಭವ ಮಂಟಪದ 3 ನೇ ಪೀಠಾಧ್ಯಕ್ಷರಾಗಿದ್ದರು.
12 ನೇ ಶತಮಾನದ ವಚನ ಚಳವಳಿಯನ್ನು ನಾವ್ಯಾರೂ ಮರೆಯಲಿಕ್ಕೆ ಸಾಧ್ಯವಿಲ್ಲ. ಅಂತಹ ಚಳವಳಿಯಲ್ಲಿ ಇವರು ಮುಂಚೂಣಿಯಲ್ಲಿದ್ದು, ಬಸವಣ್ಣನವರ ಸಮ ಸಮಾಜ ನಿರ್ಮಾಣ ಪರಿಕಲ್ಪನೆಯಿಂದ ಪ್ರೇರೇಪಣೆಗೊಂಡು ಅದೇ ಮಾರ್ಗದಲ್ಲಿ ನಡೆದವರು.
ಶ್ರಮ ಸಂಸ್ಕೃತಿಯಲ್ಲಿ ನಂಬಿಕೆ ಇರಿಸಿದ್ದ ಇವರು ಮೂರ್ತಿ ಪೂಜೆಗಿಂತ ಕಾಯಕವೇ ಶ್ರೇಷ್ಟವೆಂದು ನಡೆದವರು. ಮನುಕುಲದ ಏಳ್ಗೆಯೇ ಮುಖ್ಯ ಎಂದು ನಂಬಿದವರು. ನಾವು ಕೂಡ ಇಂತಹ ದಾರ್ಶನಿಕರ ದೇವಾಲಯ ನಿರ್ಮಿಸಿ ಇವರ ಮೂರ್ತಿ ಪೂಜೆ ಮಾಡುವುದಕ್ಕಿಂತ ಇವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ನಡೆಯಬೇಕು. ಶೋಷಿತ ಸಮಾಜಗಳ ಸಂಘಟಕರಾದ ಇವರು ಸಂಘಟನೆಯ ಪ್ರತಿಪಾದಕರಾಗಿದ್ದು, ನಾವೆಲ್ಲ ಸಂಘಟಿತರಾಗಬೇಕು ಹಾಗೂ ಇವರ ಆದರ್ಶಗಳ ಅಡಿಯಲ್ಲಿ ನಾವು ಸಮಾಜ ಕಟ್ಟಬೇಕು.
ಕೇವಲ ಮೂರ್ತಿ ಪೂಜೆ ಮಾಡಿದರೆ ಸಮಾಜ ಎಚ್ಚರಗೊಳ್ಳಲು ಸಾಧ್ಯವಿಲ್ಲ. ವಚನಕಾರರ ಅನುಯಾಯಿಗಳಾದ ನಮ್ಮ ಸಮಾಜ ಆಚರಣೆಗಳಿಗೆ ಬಲಿಯಾಗುತ್ತಿದ್ದೇವೆ. ಆಚರಣೆಗಳಿಗಿಂತ ತಿಳುವಳಿಕೆಯ ಜ್ಞಾನದ ಕಡೆ ನಡೆಯಬೇಕಿದೆ ಎಂದ ಅವರು ಶ್ರೀ ಸಿದ್ದರಾಮೇಶ್ವರ ಬಾಲ್ಯ ಸೇರಿದಂತೆ ಜೀವನ ಚರಿತ್ರೆ ಕುರಿತು ವಿವರಿಸಿದರು.
ಶ್ರೀ ಸಿದ್ದರಾಮೇಶ್ವರರು ಅಧಿಕಾರದ ಆಸೆ ತಿರಸ್ಕರಿಸಿ, ಬಸವಣ್ಣನವರ ಸಂಪರ್ಕ ಬೆಳೆಸಿ ವಚನ ಚಳವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತಿ ವ್ಯವಸ್ಥೆ ವಿರುದ್ದ ಹೋರಾಡುತ್ತಾರೆ.
ಕಲ್ಲು, ಮಣ್ಣು, ನೀರಿನ ಮೂಲಕ ದೊಡ್ಡ ದೊಡ್ಡ ಕಟ್ಟಡಗಳು, ಅರಮನೆ, ಅಣೆಕಟ್ಟು ಇತರೆ ಕಟ್ಟುವ ಸಂಸ್ಕೃತಿಯ ಪ್ರತೀಕವಾದ ನಮ್ಮ ಸಮಾಜ ಕೀಳರಿಮೆ ಬಿಟ್ಟು ಉನ್ನತ ಸ್ಥಾನದಲ್ಲಿದ್ದೇವೆ ಎಂದು ಹೆಮ್ಮೆ ಪಡಬೇಕು. ಸಂಘಟಿತರಾಗಬೇಕು. ನಮ್ಮ ಸಮಾಜಕ್ಕಾಗಿ ನಾವು ಕೊಡುಗೆಗಳನ್ನು ನೀಡಬೇಕು. ಕುಲಗುರುಗಳ ಮಹತ್ವ ತಿಳಿದು ಎಚ್ಚರಗೊಳ್ಳಬೇಕು. ಅವರ ವಚನಗಳ ಸಾರವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ಅವರ ಆದರ್ಶಗಳನ್ನು ಪಾಲಿಸಿದರೆ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದರು.
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ, ರಾಜ್ಯ ಜವಳಿ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳ) ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ ಮಾತನಾಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಸಿ ಎಸ್, ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎನ್ ರವಿಕುಮಾರ್, ತಾಲ್ಲೂಕು ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಟಿ.ಜಗದೀಶ್, ಸಮಾಜದ ಮುಖಂಡರು, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಮೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ರ‍್ದೇಶಕ ಉಮೇಶ್ ಹೆಚ್, ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...