JCI Shivamogga ಯುವ ಜನರು ಜೆಸಿಐ ಸಂಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಭರತ್ ಎನ್ ಆಚಾರ್ಯ ಹೇಳಿದರು.
ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಯುವ ಜನರಿಗೆ ಜೆಸಿಐ ಸಂಸ್ಥೆ ಅತ್ಯುತ್ತಮ ಸಂಸ್ಥೆಯಾಗಿದ್ದು, ಯುವ ನಾಯಕರನ್ನು ಸಮಾಜಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ವಲಯ 24ರ ಅಧ್ಯಕ್ಷ ಸಿ.ಎ.ಮಧುಸೂದನ್ ನಾವಡ ಮಾತನಾಡಿ, ಜೋನ್ 24ಕ್ಕೆ ಸುವರ್ಣ ಕಾಲ ಇದಾಗಿದ್ದು, ಕರ್ನಾಟಕದ ಭರತ್ ಎನ್.ಆಚಾರ್ಯ ಅವರು ನಮ್ಮ ರಾಷ್ಟ್ರೀಯ ನಾಯಕನಾಗಿದ್ದು, ಅನುಷ್ ಗೌಡ ಅವರು ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.
ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುವುದರ ಜೊತೆಗೆ ಸಂಸ್ಥೆಗೆ ಸಮರ್ಪಕವಾಗಿ ಸೇವೆ ಸಲ್ಲಿಸಲು ಅತ್ಯುತ್ತಮ ಅವಕಾಶವನ್ನು ನೀಡಿವೆ. ಯುವಜನತೆಯನ್ನು ತೊಡಗಿಸಿಕೊಳ್ಳುವ ಮೂಲಕ, ಅವರಿಗೆ ಜೀವನದಲ್ಲಿ ಬೆಳೆಯಲು ವಿವಿಧ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ದಿಕ್ಕಿನಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದು ನಮಗೆ ಅಪಾರ ಸಂತೋಷ ಹಾಗೂ ಗೌರವದ ವಿಷಯವಾಗಿದೆ ಎಂದು ತಿಳಿಸಿದರು.
ವಲಯ ಉಪಾಧ್ಯಕ್ಷ ಅಮೃತ್ ಸಿ ಮಾತನಾಡಿ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿ ಜೆಸಿಐ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
JCI Shivamogga ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ನೂತನ ಅಧ್ಯಕ್ಷೆ ಗಾನವಿ ಸುದರ್ಶನ್ ಅವರು ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೇಣಿಗೆ ನೀಡಿದರು. ಜೆಸಿ ಇಲ್ಲದ ಜಿಲ್ಲೆಗಳಲ್ಲಿ ಜೆಸಿ ಹುಟ್ಟು ಹಾಕುವ ಪ್ರಯತ್ನವನ್ನು ಮಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಜೆಸಿಐ ಚಿತ್ರದುರ್ಗ ಫೋರ್ಟ್ ಎನ್ನುವ ಹೊಸ ಘಟಕವನ್ನು ರಾಯಲ್ಸ್ ವತಿಯಿಂದ ನೀಡಲಾಯಿತು.
ತಾಯಿಮನೆ ಸುದರ್ಶನ್, ರಾಜೇಶ್ ಕೀಳಂಬಿ, ಉದಯ್ ಕಡಂಬ, ಚಂದ್ರಹಾಸ್ ಶೆಟ್ಟಿ, ಕಿರಣ್, ಅನುಷ್ ಗೌಡ, ಗೌರೀಶ್, ಸ್ಮಿತಾ ಮೋಹನ್, ತೇಜಸ್ವಿನಿ ಪ್ರಶಾಂತ್, ನಿರ್ಮಲ, ಶ್ವೇತ ಪ್ರಶಾಂತ್, ತುಷಾರ್, ಮೋಹನ್ ಕಲ್ಪತರು, ಶೋಭಾ ಸತೀಶ್, ಸುರೇಖಾ ಮುರಳಿಧರ್, ಪುಷ್ಪ ಶೆಟ್ಟಿ, ಪ್ರತಿಮಾ ಡಾಕಪ್ಪ, ಭಾರತಿ ರಾಮಕೃಷ್ಣ, ಲಿಂಗರಾಜ್ ನಾಯ್ಕ್, ಗಿರಿ ಮಲ್ಲಿಕಾ ಇತರರಿದ್ದ
