Monday, February 2, 2026
Monday, February 2, 2026

Akhila Bharatiya Sahitya Parishath ಪರಿಸರ ರಕ್ಷಣೆ ಕುರಿತ ಕವಿತೆ ರಚಿಸಲು ಕವಿಗಳಿಗೆ ಅಭಾಸಾಪ ಆಹ್ವಾನ

Date:

Akhila Bharatiya Sahitya Parishath ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಶಾಖೆಯ ವತಿಯಿಂದ ಜನವರಿ ೧೦ರ ಶನಿವಾರ ಸಂಜೆ ೫.೩೦ ಗಂಟೆಗೆ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ವಿನೋಬಾ ನಗರದ ವಿಕಾಸ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ನಡೆಯಲಿದೆ.
ಈ ಬಾರಿ ಕವಿಗೋಷ್ಠಿಗೆ “ಪರಿಸರ ರಕ್ಷಣೆ” ವಿಷಯವನ್ನು ನಿಗದಿಪಡಿಸಲಾಗಿದ್ದು, ಕವಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಕವಿತೆಗಳನ್ನು ರಚಿಸಿ ಪ್ರಸ್ತುತಪಡಿಸಲು ಕೋರಲಾಗಿದೆ. ಪರಿಷತ್ತಿನ ಕವಿತಾ ರಚನಾ ಕಮ್ಮಟದಲ್ಲಿ ಛಂದೋಬದ್ಧ ರಚನೆಗಳ ಕುರಿತು ತರಬೇತಿ ಪಡೆದ ಕವಿಗಳು ಛಂದೋಬದ್ಧ ಕವಿತೆಗಳೊಂದಿಗೆ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಇತರೆ ಕವಿಗಳು ತಮ್ಮದೇ ಶೈಲಿಯ ಕವಿತೆಗಳನ್ನು ವಾಚಿಸಬಹುದಾಗಿದೆ.
ಕವಿಗೋಷ್ಠಿಯನ್ನು ಖ್ಯಾತ ವೈದ್ಯಕೀಯ ಲೇಖಕ ಹಾಗೂ ಹಿರಿಯ ಕುಟುಂಬ ಸಲಹಾ ವೈದ್ಯರಾದ ಡಾ. ಕೃಷ್ಣ ಎಸ್. ಭಟ್ ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಶಿವಮೊಗ್ಗ ಶಾಖೆಯ ಅಧ್ಯಕ್ಷ ಡಾ. ಸುಧೀಂದ್ರ ವಹಿಸಲಿದ್ದಾರೆ.
Akhila Bharatiya Sahitya Parishath ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತರಾದ ಕವಿಗಳು ಸುರೇಶ್ ಭಟ್ ಅವರನ್ನು ಮೊಬೈಲ್ ಸಂಖ್ಯೆ ೯೪೪೮೩ ೦೩೭೪೦ರಲ್ಲಿ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ. ಸಾಹಿತ್ಯಾಸಕ್ತರಿಗೆ ಕಾರ್ಯಕ್ರಮಕ್ಕೆ ಆದರದ ಸ್ವಾಗತವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...