Karnataka Ex-Servicemen Association ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ವಾರ್ಷಿಕ ಮಹಾಸಭೆ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಸಲಾಯಿತು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಪತ್ನಿಯರನ್ನು (ವೀರನಾರಿಯರು) ಗೌರವಿಸಲಾಯಿತು.
ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ನೆರವು ಮತ್ತು ಆರ್ಥಿಕ ಭದ್ರತೆ ನೀಡಲು ನಿರ್ಣಯಿಸಲಾಯಿತು.
ಮಾಜಿ ಸೈನಿಕರ ಪೋಷಕರನ್ನು ಹಾಗೂ ಸಂಘದ ಹಿರಿಯ ಮಾಜಿ ಸೈನಿಕರನ್ನು ಅವರ ಅಮೂಲ್ಯ ಸೇವೆಗಾಗಿ ಸನ್ಮಾನಿಸಲಾಯಿತು.
ಎಸ್ಎಸ್ಎಲ್ಸಿ (10th) ಮತ್ತು ಪಿಯುಸಿ (PUC) ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಾಜಿ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಪ್ರತಿಯೊಬ್ಬ ಮಾಜಿ ಸೈನಿಕನಿಗೂ ಆರೋಗ್ಯ ಮತ್ತು ಸಾಮಾಜಿಕ ಸೌಲಭ್ಯಗಳು ತಲುಪುವಂತೆ ಸಂಘವು ಬೆಂಬಲ ನೀಡಲಿದೆ ಎಂದು ಘೋಷಿಸಲಾಯಿತು.
Karnataka Ex-Servicemen Association 2024-25ನೇ ಸಾಲಿನ ಆಯವ್ಯಯ ಮತ್ತು ಆಡಿಟ್ ವರದಿಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಮಧ್ಯಾಹ್ನದ ಭೋಸಭೆಯ ಕಾರ್ಯಕಲಾಪಗಳು ಮುಗಿದ ನಂತರ, ಬಂದಿದ್ದ ಎಲ್ಲಾ ಸದಸ್ಯರಿಗೂ, ಸನ್ಮಾನಿತರಿಗೂ ಹಾಗೂ ಅತಿಥಿಗಳಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸೌಹಾರ್ದಯುತ ಭೋಜನದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
