Rotary Club Shivamogga ನಮ್ಮ ದೇಶದಲ್ಲಿ ರಸ್ತೆ ಅಫಘಾತದಲ್ಲಿ ಹೆಚ್ಚಾಗಿದ್ದು, ಅಪಘಾತದಲ್ಲಿ ಮರಣ ಹೊಂದಿರುವವರ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
ಹೃದಯಾಘಾತಜಲ್ಲಿ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಜಾಗೃತಿ ಅವಶ್ಯಕ ಎಂದು ರೋಟರಿ ಕ್ಲಬ್ ಜ್ಯೂಬಿಲಿಯ ಡಾ.ವಿ.ಎಲ್. ಎಸ್. ಕುಮಾರ್ ತಿಳಿಸಿದರು.
ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ, ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿದ ಮಾತನಾಡಿದರು.
ರೋಟರಿ ಕ್ಲಬ್ ಹುಟ್ಟಿದ ಮಗುವಿಗೆ ಫಲ್ಸ್ ಪೋಲಿಯೋ ನೀಡುತ್ತದೆ. ವಿದ್ಯಾಭ್ಯಾಸಕ್ಕೆ ಶಾಲೆ ನಡೆಸುತ್ತಿದೆ. ಆರೋಗ್ಯಕ್ಕೆ ಜಿಮ್ ಇದೆ. ರಕ್ತದ ಅವಶ್ಯಕತೆಗೆ ಬ್ಲಡ್ ಬ್ಯಾಂಕ್ ಇದೆ. ಇದರೊಂದಿಗೆ ಚಿತಾಗಾರ ನಡೆಸುತ್ತಿದೆ. ಹೀಗೆ ರೋಟರಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿ ಕೊಂಡಿದೆ ಎಂದರು.
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ನಮ್ಮದು. ಆದ್ದರಿಂದ ಎಲ್ಲದರಲ್ಲಿಯೂ ಜಾಗ್ರತೆ ವಹಿಸಬೇಕಾಗಿದೆ. ಎಲ್ಲಾ ಕಡೆ ಹೆಚ್ಚು ಆಸ್ವತ್ರೆ ಇವೆ. ಕಾರಣ ಆರೋಗ್ಯ. ದೈಹಿಕ, ಮಾನಸಿಕ, ಸಾಮಾಜಿಕ, ಔದ್ಯೋಗಿಕ, ಕೌಟುಂಬಿಕ, ವೈಯಕ್ತಿಕ ಹೀಗೆ ಹಲವಾರು ಕಾರಣದಿಂದ ಅನಾರೋಗ್ಯ ಉಂಟಾಗುತ್ತಿದೆ.ಉತ್ತಮ ಆರೋಗ್ಯಕ್ಕೆ 8 ಗಂಟೆ ನಿದ್ದೆ, ಕುಟುಂಬದೊಂದಿಗೆ ಸಮಯ ಕಳೆಯಬೇಕು. ದುರಭ್ಯಾಸ ಬಿಟ್ಟು , ಯೋಗ-ದ್ಯಾನ, ಶುದ್ದ ಗಾಳಿ ಅವಶ್ಯಕ. ಗಂಗಾಸ್ಥಾನ ತುಂಗಾಪಾನ ಎನ್ನುತ್ತಿದ್ದರು, ಇಂದು ಚರಂಡಿ ನೀರಿಗಿಂತ ಕೆಟ್ಟದಾಗಿ ತುಂಗಾ ಬದಲಾಗಿದೆ ಎಂದು ಹೇಳಿದರು.
Rotary Club Shivamogga ಪ್ಲಾಸ್ಟಿಕ್ ಉಪಯೋಗದಿಂದ ಕ್ಯಾನ್ಸರ್ ಅತ್ಯಧಿಕವಾಗಿ ಹರಡುತ್ತಿದೆ. ಪ್ರತಿ ದಿನ ಹತ್ತು ಜನರು ಕ್ಯಾನ್ಸರ್ ಆಸ್ಪತ್ರೆಗೆ ಬರುತ್ತಿದ್ದಾರಂತೆ.
ಹೃದಯಾಘಾತ ಆದಾಗ ಏನು ಮಾಡಬೇಕೆಂದು ತಿಳಿದುಕೊಳ್ಳಿ, ಹೃದಯ ದಿಂದ ಮೆದುಳಿಗೆ ಆಮ್ಲಜನಕ ಇಲ್ಲದೆ ಏಳು ನಿಮಿಷ ಇರಬಲ್ಲದು. ಹೃದಯಾಘಾತ ಆದ ತಕ್ಷಣ ಪ್ರಥಮ ಚಿಕಿತ್ಸೆ ಅಗತ್ಯ, ಉಸಿರಾಟ ಪುನ: ಚಾಲನೆಗೆ ತರಬೇಕು. ಹೊಟ್ಟೆ ಎರಿಳಿತ ನೋಡಿ, ಕುತ್ತಿಗೆ ಸಮೀಪ ಎರಡು ಬೆರಳು ಇಟ್ಟು ನೋಡಬಹುದು ಹತ್ತು ಸೆಕೆಂಡ್ ನಲ್ಲಿ ಪರೀಕ್ಷಿಸಿ, ಸಿಪಿಆರ್ ಎಲ್ಲರೂ ಅರಿತುಕೊಳ್ಳಿ, ಇದರಿಂದ ಪ್ರಾಣ ಉಳಿಸಬಹುದು. ಮುವತ್ತು ನಿಮಿಷ ಬಂಗಾರದ ಸಮಯ ತಕ್ಷಣ ಆಸ್ವತ್ರೆಗೆ ಸೇರಿಸಬೇಕು. ಹೃದಾಘಾ ತವಾದವರಿಗೆ “ಮಲಗಿಸ ಬೇಡಿ, ನೀರು ಕುಡಿಸಬೇಡಿ” ಕುರ್ಚಿಮೇಲೆ ಕುಳ್ಳರಿಸಿ, ಎತ್ತುಕೊಂಡು ಹೋಗಿ, ನಡೆಯಲು ಬಿಡಬಾರದು ಎಂದು ತಿಳಿ ಹೇಳಿದರು.
ಹೃದಯಾಘಾತವಾದವರಿಗೆ ಹೇಳ ಬೇಡಿ, ಕೆಮ್ಮಲು ಹೇಳಿ, ಆಸ್ವತ್ರೆಗೆ ಹೋಗುವವರೆಗೆ, ದೀರ್ಘಶ್ವಾಸ ತೆಗೆದು ಕೊಳ್ಳಲು ತಿಳಿಸಬೇಕು. ಅಸ್ಪ್ರೀನ್ ಮಾತ್ರೆ ಜಗಿಯಲು ಕೊಡಬೇಕು.ಸ್ಟ್ರೋಕ್ ಸಹ ಹೆಚ್ಚಾಗುತ್ತದೆ, ಮಾತನಾಡುವಾಗ ಮುಖ ಒಂದು ಕಡೆ ಸೇರುವುದು, ಮಾತನಾಡಲು ತೊಂದರೆ ಯಾದರೆ, ಮೂರು ಗಂಟೆಯೊಳಗೆ ಆಸ್ಪತ್ರೆಗೆ ಹೋಗಬೇಕು. ಪಿಡ್ಸ್ ಬಂದಾಗ ಎರಡು ನಿಮಿಷ ಮಾತ್ರ ಮೈಕೈ ಅಲುಗಾಡಿಸುತ್ತಾರೆ, ಸುತ್ತಲೂ ಯಾವುದೇ ಅಡೆತಡೆ ಬರದಂತೆ ನೋಡಿ ಕೊಳ್ಳಬೇಕು. ನೊರೆ ಒಳಗೆ ಹೊಗದಂತೆ, ಮಗ್ಗಲು ಮಾಡಿ ಮಲಗಿಸಿ, ಒರೆಸಬೇಕು . ಬಾಯಿಗೆ ಏನನ್ನು ಕೊಡಬಾರದು ಎಂದು ತಿಳಿಸಿದರು.
ಬಿ.ಎಸ್.ಅಶ್ವಥ್ ಅಧ್ಯಕ್ಷತೆ ವಹಿಸಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ರೇವಣ ಸಿದ್ದಪ್ಪ ವಂದಿಸಿದರು.
