Thursday, March 19, 2026
Thursday, March 19, 2026

Guru Basava Mahaswamiji ಪರಮ ತಪಸ್ವಿ ಶ್ರೀ ಗುರುಬಸವ ಮಹಾಸ್ವಾಮೀಜಿ

Date:

Guru Basava Mahaswamiji ಸಕಲರಿಗೆ  ಲೇಸನೇ ಬಯಸುವ  ಆಕಾಂಕ್ಷಿಗಳಾದ ಹನ್ನೆರಡನೆಯ ಶತಮಾನದ ಶಿವಶರಣರು ಕಲ್ಯಾಣ ಕ್ರಾಂತಿಯ ನಂತರ ತಮ್ಮ ಅಮೂಲ್ಯ  ನುಡಿ ಸಂಪತ್ತಾದ  ವಚನಗಳ ಓಲೆ ಕಟ್ಟುಗಳನ್ನು ರಕ್ಷಿಸಲು ತಮ್ಮ ತಲೆಯ ಮೇಲೆ   ಹೊತ್ತುಕೊಂಡು  ಕರ್ನಾಟಕದ ನಾಲ್ಕು  ಮೂಲೆಗಳಿಗೆ ಗುಂಪು ಗುಂಪಾಗಿ ಹೊರಟರು. ಅಕ್ಕನಾಗಮ್ಮ ಮತ್ತು  ಚನ್ನ ಬಸವಣ್ಣನವರ ಜೊತೆಗೆ ಕೆಲ  ಶರಣ ಶರಣೆಯರು ಉಳವಿಯ ಕಡೆ  ಸಾಗಿದರೆ, ಮತ್ತೆ ಕೆಲವರು ಆಂಧ್ರ ನಾಡಿನ ಕಡೆ ಹೊರಟರು. ಇನ್ನು  ಕೆಲವರು ದಕ್ಷಿಣದ ಚಿಕ್ಕಮಗಳೂರು ಸಕಲೇಶಪುರದ ಕಡೆ ಸಾಗಿದರು. ಮತ್ತೆ ಕೆಲವರು  ತಮಿಳುನಾಡಿನ  ಗಡಿ ಭಾಗದ ಚಾಮರಾಜನಗರ ಮಲೆ ಮಹದೇಶ್ವರ ಬೆಟ್ಟನಾಡಿನ ಕಡೆಗೆ  ನಡೆದರು. 
ಈ ರೀತಿ ನಾಡಿನ ನಾನಾ ಕಡೆ ಚದುರಿ ಹೋದ ಶರಣರಲ್ಲಿ ಒಬ್ಬರಾದ ಗಂಗಾಧರಯ್ಯನವರು  ದಕ್ಷಿಣದ ಕಡೆ ಸಾಗಿ ಬಂದು ಈಗಿನ Guru Basava Mahaswamiji ಶಿವಮೊಗ್ಗ ನಗರಕ್ಕೆ ಸಮೀಪವಿರುವ  ಯಲವಟ್ಟಿ ಗ್ರಾಮದ ಪಕ್ಕದಲ್ಲಿರುವ ಹಸಿರು ಪರಿಸರದ ನಡುವೆ ತಲೆ ಎತ್ತಿ ನಿಂತಿರುವ ಚಿಕ್ಕ ಬೆಟ್ಟದ ಮೇಲೆ ಇದ್ದ ಗವಿಯೊಂದರಲ್ಲಿ ನೆಲೆ ನಿಂತು ಅನುಷ್ಠಾನ  ಮಾಡುತ್ತಿದ್ದರು. ಅವರು ಪೂಜೆಯನ್ನು  ಮಾಡುತ್ತಿದ್ದ ಸಮಯದಲ್ಲಿ  ಎರಡು   ಪುನುಗಿನ ಬೆಕ್ಕುಗಳು  ಆ ಬೆಟ್ಟದ  ಗವಿಯಲ್ಲಿ ದ್ದವು.  ಅವುಗಳಲ್ಲಿ  ಒಂದು ಗಂಟೆ ಬಾರಿಸುವ  ಮತ್ತೊಂದು ಜಾಗಟೆ ಸದ್ದು ಮಾಡುತ್ತಾ ಅಲ್ಲಿ  ಅನುಷ್ಠಾನ ಮಾಡುತ್ತಿದ್ದ ಗುರುಗಳು   ಮಮತೆ ಯಿಂದ ನೀಡುತ್ತಿದ್ದ  ಹಾಲಿನ  ಪ್ರಸಾದವನ್ನು  ಸೇವಿಸುತ್ತಿದ್ದವು ಎಂಬುದು ಅಲ್ಲಿಯ ಗ್ರಾಮದ ಹಿರಿಯರು  ತಲೆ ತಲಾಂತರದಿಂದ ಕೇಳಿ ಬಂದಿದ್ದ  ಕಥೆಯಾಗಿತ್ತು. ಆದುದರಿಂದ ಗುರುಗಳು ಇದ್ದ  ಮಠ ಕಲ್ಲಿನ ಗವಿಮಠವಾಗಿದ್ದುದು ಬೆಕ್ಕಿನಕಲ್ಮಠ ಎಂದು  ಹೆಸರಾಯಿತು.
ಇದು ಗ್ರಾಮದವರು ಹೇಳಿ ಕೇಳಿ ಬಂದ ಜನಜನಿತ ಕಥೆಯಾದರೆ, ಇತಿಹಾಸ ಸಂಶೋಧಕರು ಮತ್ತೊಂದು ರೀತಿಯಲ್ಲಿ  ತಿಳಿಸುತ್ತಾರೆ. ಬಹುಪೂರ್ವದಲ್ಲಿ ಬೌದ್ಧ ಭಿಕ್ಷುಗಳು ಇಲ್ಲಿ ಧ್ಯಾನ ಮಾಡುತ್ತಿದ್ದದ್ದು ಇದಾಗಿತ್ತು.  ಆ  ಬೌದ್ಧ ಭಿಕ್ಷುಗಳು ಇದ್ದ ಸ್ಥಳ  ಇದಾಗಿದ್ದು ಗ್ರಾಮಸ್ಥರ ಮಾತಿನಲ್ಲಿ ಭಿಕ್ಷುಗಳು ಇದ್ದ ಮಠ ಭಿಕ್ಷು ಬಿಕ್ಕು ಎಂದಾಗಿ ಕಡೆಗೆ …ಕಡೆಗೆ ಬಿಕ್ಕುಗಳ ಮಠ, ಬೆಕ್ಕಿನ ಕಲ್ಮಠ ಆಗಿ ಅಪಭ್ರಂಶವಾಗಿರಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...