Shimoga News ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ, ಮಹಾನಗರ ಪಾಲಿಕೆಯ ಆವರಣದಲ್ಲಿ 208 ನೇ ವರ್ಷದ ಭೀಮ ಕೋರೆಗಾವ್ ವಿಜಯೋತ್ಸವನ್ನು “ದಲಿತರ ಸಾಮಾಜಿಕ ಸಮಾನತೆ ದಿನ”ವನ್ನಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮೈಸೂರು ವಿಭಾಗೀಯ ಸಂಚಾಲಕರಾದ ಟಿ.ಹೆಚ್. ಹಾಲೇಶಪ್ಪನವರು ಮಾನ, ಅಭಿಮಾನ, ಸ್ವಾಭಿಮಾನ ಇರದ ಜೀವನ ಅನರ್ಥ. ಡಾ. ಬಿಆರ್ ಅಂಬೇಡ್ಕರ್ ಅವರ ಜಾಗೃತಿ ಹೋರಾಟ ನಮಗೆ ಬೆಳಕಾಗಲಿ ಎಂದು ತಿಳಿಸಿದರು. ಗೌತಮ ಬುದ್ಧರ ಪಂಚಶೀಲ ತತ್ವಗಳು, ಅಷ್ಟಾಂಗ ಮಾರ್ಗಗಳು ನಮ್ಮೆಲ್ಲರ ಬದುಕನ್ನು ಉಜ್ವಲ ಗೊಳಿಸಲು ಹಾಗೂ ಸ್ವಾಭಿಮಾನದ ಭಾರತ ರಾಷ್ಟ್ರ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನವೇ ಈ ದೇಶದ ಧರ್ಮ ಗ್ರಂಥ ತಿಳಿಸಿದರು.
Shimoga News ಪರಮಪೂಜ್ಯ ಮ. ನಿ. ಪ್ರ. ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಚಿತ್ರರಗಿ ಶ್ರೀ ವಿಜಯಮಾಂತೇಶ್ವರ ಸಿದ್ದಯ್ಯನ ಕೋಟೆ ಶಾಖಾ ಮಠ, ಮೊಳಕಾಲ್ಮೂರು, ಚಿತ್ರದುರ್ಗ ಜಿಲ್ಲೆ ಇವರು ಸಾನಿಧ್ಯ ವಹಿಸಿದ್ದರು.
ವಿಜಯೋತ್ಸವದ ಸಮಾರಂಭದಲ್ಲಿ ಚಲವಾದಿ ಮಹಾಸಭಾ ಹಿರಿಯರಾದ ಸಾವಕ್ಕನವರು, ಕದಸಂಸ ಅಂಬೇಡ್ಕರ್ ವಾದ ಜಿಲ್ಲಾ ಹಾಗೂ ತಾಲೂಕು ಮುಖಂಡರಾದ ಶೇಷಪ್ಪ ಹುಣಸೊಡು, ಎಂ ಆರ್ ಶಿವಕುಮಾರ್ ಆಸ್ತಿ, ಹಕ್ಕಿ ಪಿಕ್ಕಿ ಸಮುದಾಯದ ಜಗ್ಗು, ಆನಂದಪ್ಪ.ಎ.ಡಿ, ಸೂಗೂರು ಪರಮೇಶ್, ರಂಗಸ್ವಾಮಿ.ಎಲ್, ಕಲ್ಲಿಹಾಳ್ ಹನುಮಂತಪ್ಪ ಮಹಿಳಾ ಮುಖಂಡ ಶ್ರೀಮತಿ ಮೀನೂ, ಮತ್ತಿತರು ಭಾಗವಹಿಸಿದ್ದರು.
Shimoga News ಮಾನ,ಅಭಿಮಾನ,ಸ್ವಾಭಿಮಾನ ಇರದ ಜೀವನ ವ್ಯರ್ಥ- ಟಿ.ಹೆಚ್.ಹಾಲೇಶಪ್ಪ.
Date:
