Thursday, March 19, 2026
Thursday, March 19, 2026

Sharavati ಶರಾವತಿ ಪಂಪ್ಡ್ ಸ್ಟೊರೇಜ್ ಸಮಸ್ಯೆ: ಪರಿಸರ ಪ್ರಿಯರ ಆತಂಕಗಳಿಗೆ ಸ್ಪಂದಿಸಿದ ಕೇಂದ್ರ ತನಿಖಾ ತಂಡ.

Date:

Sharavati ದಿನಾಂಕ:27/12/2025ರಂದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಲು ಕೇಂದ್ರ ವನ್ಯಜೀವಿ ಮಂಡಳಿಯ ಸದಸ್ಯರಾದ ಡಾ:ಹರಿಶಂಕರ್ ಸಿಂಗ್ ಹಾಗೂ ಶ್ರೀ ರಮಣ್ ಸುಕುಮಾರ್ ಮತ್ತು ರಾಷ್ಟ್ರೀಯ ಹುಲಿ ಪ್ರಾಧಿಕಾರದ ಅಧಿಕಾರಿ ಶ್ರೀ ಶಿವಕುಮಾರ ಸಿ.ಎಂ. ಆಗಮಿಸಿದ್ದರು. ಈ ಸಮಯದಲ್ಲಿ ಸಾಗರದ ಪಿ.ಡಬ್ಲೂ.ಡಿ. ಐಬಿಯಲ್ಲಿ ಸಾರ್ವಜನಿಕರ ಅಹವಾಲನ್ನು ಕೇಳಲಾಯಿತು. ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ವತಿಯಿಂದ ಸಂಘಟನೆಯ ಸಂಚಾಲಕರು ಮತ್ತು ಜನಸಂಗ್ರಾಮ ಪರಿಷತ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಅಖಿಲೇಶ್ ಚಿಪ್ಪಳಿ ಇವರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಆಗುವ ಭಾದಕಗಳನ್ನು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿ ಮನವಿ ನೀಡಿದರು. ಶ್ರೀ ಮನೋಹರ್ ಕುಮಾರ್ ಸಿ.ಬಿ., ನಿವೃತ್ತ ನ್ಯಾಯಾದೀಶರು (ಬಾಲ ನ್ಯಾಯ ಮಂಡಳಿ ಮತ್ತು ಉಪನ್ಯಾಸಕರು ಶಿವಮೊಗ್ಗ) ಯೋಜನೆಯ ವಿರುದ್ಧ ತಮ್ಮ ಅಹವಾಲನ್ನು ಸಲ್ಲಿಸಿದರು ಸಭೆಯಲ್ಲಿ, ಸಾಗರದ ಶಾಸಕರು, ಶಂಕರ ಶರ್ಮಾ, ಉತ್ತರ ಕನ್ನಡ ಜಿಲ್ಲೆಯ ಚಂದ್ರಕಾಂತ್ ಕೊಚ್ರೇಕರ್, ಬಂಗಾರು ಮಕ್ಕಿಯ ವೀರಾಂಜನೆಯ ದೇವಸ್ಥಾನದ ಸಿ.ಇ.ಓ. ಅಜಿತ್ ಹೆಗಡೆ, ಶಿವಮೊಗ್ಗದ Sharavati ಫ್ರೋ: ಬಿ.ಎಂ.ಕುಮಾರಸ್ವಾಮಿ, ಡಾ:ಶ್ರೀಪತಿ, ಡಾ:ಗಿರೀಶ್ ಜನ್ನೆ, ಡಾ: ಸವಿನಯ ಮಾಲ್ವೆ, ಅನಂತ ಹೆಗಡೆ ಆಶೀಸರ, ವೆಂಕಟೇಶ್ , ರೈನ್ ಲ್ಯಾಂಡ್ ನ ಉದಯ ಸಾಗರ ಮತ್ತಿತರು ಇದ್ದರು.

ಇದಕ್ಕೂ ಮೊದಲು ಕೆಪಿಸಿಎಲ್ ತಮ್ಮ ಸುಳ್ಳಿನ ಕಂತೆಗಳ ಪಿಪಿಟಿ ಪ್ರದರ್ಶನ ಮಾಡಿದರು ಮತ್ತು ಕೇಂದ್ರ ತಂಡ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾದರು ಎಂದು ಮುಖತಃ ಹಾಜರಿದ್ದ ಪರಿಸರ ಚಿಂತಕ ಅಖಿಲೇಶ್ ಚಿಪ್ಪಳಿ
ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...