Shimoga News ಅಂದುಕೊಳ್ಳುವುದು ಸಂಕಲ್ಪವಾದರೆ ಅದರಂತೆ ಮಾಡುವುದು ಸಾಧನೆ, ಸಂಕಲ್ಪ ಮತ್ತು ಸಾಧನೆಗಳ ಉದ್ದೇಶ ಒಳ್ಳೆಯದಾಗಿದ್ದರೆ ಅದು ಸುಕೃತಿ ಎನಿಸಿಕೊಳ್ಳುತ್ತದೆ ಎಂದು ಹಿರಿಯಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಹೊನ್ನಾಳಿ ಚಂದ್ರಗಿರಿ ಪ್ರತಿಷ್ಠಾನದ ಸಹಯೋಗದೊಂದಿಗೆ ಹಿರೇಕಲ್ಮಠದಲ್ಲಿ ಏರ್ಪಾಡಾಗಿದ್ದ ದೇವಾಲಯ ಅರ್ಚಕರುಗಳ ಪ್ರಶಿಕ್ಷಣ ಶಿಬಿರದಲ್ಲಿ ಸಂಪ್ರದಾಯಗಳ ಕುರಿತಾಗಿ ಮಾತನಾಡುತ್ತಾ ಅಂದುಕೊಳ್ಳುವುದು ಅಂದುಕೊಂಡಂತೆ ಮಾಡುವುದು ಈ ಎರಡೂ ಸಾಮರ್ಥ್ಯ ಪ್ರಪಂಚದಲ್ಲಿ ಮಾನವ ಜೀವಿಗಳಿಗೆ ಮಾತ್ರವೇ ಇದ್ದು ಒಳ್ಳೆಯದನ್ನೇ ಅಂದುಕೊಳ್ಳಬೇಕು ಅದರಂತೆ ಒಳ್ಳೆಯದನ್ನೇ ಮಾಡಬೇಕು, ಅರ್ಚಕರುಗಳು ಸಹಾ ಭಕ್ತರ ಪರವಾಗಿ ಸದುದ್ದೇಶದ ಸಂಕಲ್ಪಗಳನ್ನು ಮಾಡಿ ಅದರಂತೆ ಪೂಜಾ ಕಾರ್ಯವನ್ನು ನೆರವೇರಿಸಬೇಕು. ಇದಕ್ಕೆಲ್ಲಾ ಯೋಗ್ಯವಾಗಿ ದೇವಸ್ಥಾನ ನಿರ್ಮಿಸುವಲ್ಲಿ ಬುದ್ಧಿ ಬೇಕು, ಅರ್ಚಕ ವೃತ್ತಿಯಲ್ಲಿ ಭಾವ ಬೇಕು, ಭಕ್ತರರಲ್ಲಿ ಭಕ್ತಿ ಬೇಕು, ಇದಕ್ಕೆ ಪೂರಕವಾಗಿ ಅನಾದಿಕಾಲದಿಂದಲೂ ಸನಾತನರು ಹೇಳಿರುವ ಸಂಪ್ರದಾಯಗಳಿದ್ದು ಇದರಲ್ಲಿ ಅನೇಕವು ವೈಜ್ಞಾನಿಕ ವೈಚಾರಿಕವಾಗಿಯೂ ಸಮರ್ಥನೀಯವಾಗಿದ್ದು ಅಂತವುಗಳನ್ನು ಪಾಲಿಸಿಕೊಂಡು ಬರಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.
Shimoga News ಹೊನ್ನಾಳಿ ತಾಲೂಕು ಹಾಗೂ ವಿವಿಧೆಡೆಗಳಿಂದ ಅನೇಕ ದೇವಾಲಯಗಳ ಅರ್ಚಕರುಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ಮನೋಹರ ಮಠದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
