Thursday, March 19, 2026
Thursday, March 19, 2026

Shimoga News ಅರ್ಚಕ ವೃತ್ತಿಯಲ್ಲಿ ಭಾವ ಬೇಕು.ಭಕ್ತರಲ್ಲಿ ಭಕ್ತಿ ಬೇಕು- ಡಾ.ಹೆಚ್.ಬಿ.ಮಂಜುನಾಥ್.

Date:

Shimoga News ಅಂದುಕೊಳ್ಳುವುದು ಸಂಕಲ್ಪವಾದರೆ ಅದರಂತೆ ಮಾಡುವುದು ಸಾಧನೆ, ಸಂಕಲ್ಪ ಮತ್ತು ಸಾಧನೆಗಳ ಉದ್ದೇಶ ಒಳ್ಳೆಯದಾಗಿದ್ದರೆ ಅದು ಸುಕೃತಿ ಎನಿಸಿಕೊಳ್ಳುತ್ತದೆ ಎಂದು ಹಿರಿಯಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಹೊನ್ನಾಳಿ ಚಂದ್ರಗಿರಿ ಪ್ರತಿಷ್ಠಾನದ ಸಹಯೋಗದೊಂದಿಗೆ ಹಿರೇಕಲ್ಮಠದಲ್ಲಿ ಏರ್ಪಾಡಾಗಿದ್ದ ದೇವಾಲಯ ಅರ್ಚಕರುಗಳ ಪ್ರಶಿಕ್ಷಣ ಶಿಬಿರದಲ್ಲಿ ಸಂಪ್ರದಾಯಗಳ ಕುರಿತಾಗಿ ಮಾತನಾಡುತ್ತಾ ಅಂದುಕೊಳ್ಳುವುದು ಅಂದುಕೊಂಡಂತೆ ಮಾಡುವುದು ಈ ಎರಡೂ ಸಾಮರ್ಥ್ಯ ಪ್ರಪಂಚದಲ್ಲಿ ಮಾನವ ಜೀವಿಗಳಿಗೆ ಮಾತ್ರವೇ ಇದ್ದು ಒಳ್ಳೆಯದನ್ನೇ ಅಂದುಕೊಳ್ಳಬೇಕು ಅದರಂತೆ ಒಳ್ಳೆಯದನ್ನೇ ಮಾಡಬೇಕು, ಅರ್ಚಕರುಗಳು ಸಹಾ ಭಕ್ತರ ಪರವಾಗಿ ಸದುದ್ದೇಶದ ಸಂಕಲ್ಪಗಳನ್ನು ಮಾಡಿ ಅದರಂತೆ ಪೂಜಾ ಕಾರ್ಯವನ್ನು ನೆರವೇರಿಸಬೇಕು. ಇದಕ್ಕೆಲ್ಲಾ ಯೋಗ್ಯವಾಗಿ ದೇವಸ್ಥಾನ ನಿರ್ಮಿಸುವಲ್ಲಿ ಬುದ್ಧಿ ಬೇಕು, ಅರ್ಚಕ ವೃತ್ತಿಯಲ್ಲಿ ಭಾವ ಬೇಕು, ಭಕ್ತರರಲ್ಲಿ ಭಕ್ತಿ ಬೇಕು, ಇದಕ್ಕೆ ಪೂರಕವಾಗಿ ಅನಾದಿಕಾಲದಿಂದಲೂ ಸನಾತನರು ಹೇಳಿರುವ ಸಂಪ್ರದಾಯಗಳಿದ್ದು ಇದರಲ್ಲಿ ಅನೇಕವು ವೈಜ್ಞಾನಿಕ ವೈಚಾರಿಕವಾಗಿಯೂ ಸಮರ್ಥನೀಯವಾಗಿದ್ದು ಅಂತವುಗಳನ್ನು ಪಾಲಿಸಿಕೊಂಡು ಬರಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

Shimoga News ಹೊನ್ನಾಳಿ ತಾಲೂಕು ಹಾಗೂ ವಿವಿಧೆಡೆಗಳಿಂದ ಅನೇಕ ದೇವಾಲಯಗಳ ಅರ್ಚಕರುಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ಮನೋಹರ ಮಠದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...