Thursday, March 19, 2026
Thursday, March 19, 2026

Vaikuntha Ekadashi ಮುಕ್ಕೋಟಿ ಏಕಾದಶಿ…ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ

Date:

Vaikuntha Ekadashi ಇಂದು ವೈಕುಂಠ ಏಕಾದಶಿ.ಇದನ್ನು ಮುಕ್ಕೋಟಿ ಏಕಾದಶಿಯೆಂದೂ ಕರೆಯುತ್ತಾರೆ.ಅಲ್ಲದೇ ಈ ಏಕಾದಶಿಯನ್ನು ಪುತ್ರದಾಏಕಾದಶೀ ಎಂದೂ ಕರೆಯುತ್ತಾರೆ.
ಚಿತ್ತಶುದ್ಧಿ,ಭಾವಶುದ್ಧಿ ಆಧ್ಯಾತ್ಮದ ಹಾದಿಯ
ಮೊದಲ ಹೆಜ್ಜೆ.ಆ ಭಗವಂತನ ಅನುಗ್ರಹ ಪಡೆಯಲು ಏಕಾದಶಿ ಉಪವಾಸ ಸುಲಭದಮಾರ್ಗ ಎಂದು ನಮ್ಮ ಹಿರಿಯರು ಗುರುತಿಸಿದ್ದಾರೆ.ಉಪವಾಸದಿಂದ ಆ ಭಗವಂತನ ಆರಾಧನೆಮಾಡಬೇಕು,ನಮ್ಮೊಳಗೆ ಸಂವಾದ ನಡೆದು ವಿಚಾರಗಳು ಮಥನಗೊಳ್ಳಲು ಅವಕಾಶ ಕೊಡುವ ಮೌನದ ಆಚರಣೆಯಿಂದ ಮನಸ್ಸು ಮೃದುವಾಗಿ ಒಳ ಹೊರಗೆ ತುಂಬಿಕೊಂಡಿರುವ “ನಾರಾಯಣ”ನನ್ನು ಅನುಭವಿಸಲು ಇದು ಸಾಧನ.
ಏಕಾದಶ ಅಂದರೆ11 ಎಂದರ್ಥ.ಪ್ರತಿ ಮಾಸದಲ್ಲಿ (ತಿಂಗಳು) ಎರಡು ಏಕಾದಶಿಗಳು ಬರುತ್ತವೆ.
ಆದರೆ ಪುಷ್ಯ ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯು ವೈಕುಂಠ ಏಕಾದಶಿ ಎಂದೇ
ಪ್ರಸಿದ್ಧಿ ಪಡೆದಿದೆ.
ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ
Vaikuntha Ekadashi ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂದು ಪ್ರತೀತಿ ಇದೆ.
ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠದ್ವಾರ ರೂಪಿಸಿಭಕ್ತರಿಗೆಪ್ರವೇಶಕಲ್ಪಿಸಿರುತ್ತಾರೆ. ವೈಕುಂಠ ಏಕಾದಶಿ ಒಂದೇ ಅಲ್ಲ,ಎಲ್ಲ ಏಕಾದಶಿಗಳೂ ಉಪವಾಸ ವ್ರತಕ್ಕೆ ಶ್ರೇಷ್ಠವಾದವು. ಆದರೆ ವೈಕುಂಠ ಏಕಾದಶಿಯಂದುಉಪವಾಸಮಾಡಿದ ಫಲ ನೂರ್ಮಡಿ ಯಾಗಿರುತ್ತದೆ.ಅಂದುನಿಟ್ಟುಪವಾಸವೇ
ಶ್ರೇಷ್ಠವಾದುದು.ಹಸಿವಾದತಕ್ಷಣಉಣ್ಣುವುದನ್ನು,ಅನ್ನಿಸಿದ ತಕ್ಷಣ ಮಾತಾಡುವುದನ್ನು ಕಲಿತ ಮನಸ್ಸು ಮತ್ತು ದೇಹಗಳು ಒಂದು ದಿನದ ಮಟ್ಟಿಗಾದರೂ ದೇವರ ಸ್ಮರಣೆ ಮಾಡುತ್ತಾ, ಭಗವಂತನ ಚಿಂತನೆಯಲ್ಲಿ ತೊಡಗಬೇಕುಎನ್ನುವುದೇನಮ್ಮಹಿರಿಯರುಹಾಕಿಕೊಟ್ಟ
ಏಕಾದಶಿಯ ಮಹತ್ವ.
ವೈಕುಂಠಏಕಾದಶಿಯಯದಿನವಾದಇಂದುಆಭಗವಂತನು(ಶ್ರೀಹರಿ)ಎಲ್ಲರಿಗೂಸನ್ಮಂಗಳವನ್ನುದಯಪಾಲಿಸಲಿ ಎಂತ ಪ್ರಾರ್ಥಿಸೋಣ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...