Araga Jnanendra ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರ ಹಾವಳಿ ಮತ್ತು ಡ್ರಗ್ಸ್ ಜಾಲದ ಬಗ್ಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಜನರು ಬದುಕು ಕಟ್ಟಿಕೊಳ್ಳುವುವುದು ಕಷ್ಟ ಎಂಬಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ. ಮೂರು ಜನ ರಿಕ್ಷಾ ಚಾಲಕರು ಮಾತನಾಡುತ್ತಾರೆ, ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಯುವಕರು ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚೆನ್ನಾಗಿ ಬದುಕು ಕಟ್ಟಿಕೊಂಡಿದ್ದೇವೆ ಎಂದು ಹೇಳುತ್ತಾ ಬಾಂಗ್ಲಾದ ಯುವಕರನ್ನು ಇಲ್ಲಿಗೆ ಬನ್ನಿ ಎಂದು ಕರೆಯುತ್ತಿದ್ಧಾರೆ. ಅವರು ಇಲ್ಲಿಂದಲೇ ತಮ್ಮ ದೇಶದ ಇತರರನ್ನು ಬೆಂಗಳೂರಿಗೆ ಬರುವಂತೆ ಪ್ರೇರೇಪಿಸುತ್ತಿದ್ದಾರೆ. ಇದು ರಾಜ್ಯದ ಭದ್ರತೆಗೆ ದೊಡ್ಡ ಅಪಾಯ. ಇವೆರಲ್ಲಾ ಬರೀ ಆಟೋ ಓಡಿಸಿಕೊಂಡಿದ್ದಾರಾ? ಅಥವಾ ಬೇರೆನೋ ಮಾಡುತ್ತಿದ್ಧಾರಾ? ಇವರನ್ನ ಒಳಕ್ಕೆ ಸರಿಸಿಕೊಂಡು ಗತಿಯೇನು? ಇದೇನು ಧರ್ಮಛತ್ರವಾ? ಬೆಂಗಳೂರು ಜನರ ಗತಿಯೇನು? ಈ ವಿಚಾರ ಕೇಳಿ ಆಶ್ಚರ್ಯವಾಯ್ತು. ಈ ಬಗ್ಗೆ ಪೊಲೀಸರು ಅವರನ್ನ Araga Jnanendra ಅರೆಸ್ಟ್ ಮಾಡಬೇಕು. ಹೀಗೆ ಅಕ್ರಮವಾಗಿ ನೆಲೆಸಿರುವ ಇವರಿಗೆ ಇಲ್ಲಿ ನೆಲೆ ಒದಗಿಸಿದವರು ಯಾರು? ಇವರಿಗೆ ಬೇಕಾದ ದಾಖಲೆಗಳನ್ನು ಸೃಷ್ಟಿಸಿಕೊಟ್ಟವರು ಯಾರು? ಎಂಬ ಬಗ್ಗೆ ಪೊಲೀಸರು ತಕ್ಷಣ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್ ಸೀಜ್ ಆಗಿತ್ತು, ಈಗ ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕವನ್ನು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡಿರುವುದು ರಾಜ್ಯ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ. ಮಹಾರಾಷ್ಟ್ರ ಪೊಲೀಸರು ಬಂದು ಹಿಡಿಯುತ್ತಾರೆ ಅಂತ ಹೇಳಿದರೆ, ನಮ್ಮ ಪೊಲೀಸರಿಗೆ ಇದ್ಯಾಕೆ ಗೊತ್ತಾಗುತ್ತಿಲ್ಲ. ಗೊತ್ತಾಗುತ್ತೆ, ಆದರೆ ಇಲ್ಲಿ ಕೆಲವರ ಇನ್ವಾಲ್ಮೆಂಟ್ ಇದೆ. ಭಷ್ಟ್ರಚಾರದ ಮೂಲಕ ಟ್ರಾನ್ಸಫರ್ ಆಗಿರುವುದರ ಫಲ ಇದಾಗಿದೆ ಎಂದ ಸಚಿವರು ಈ ವಿಚಾರ ಗೃಹ ಇಲಾಖೆಗೆ ಅವಮಾನದ ಸಂಗತಿ ಎಂದರು. ಇದು ಸರ್ಕಾರದ ವೀಕ್ ಪಾಯಿಂಟ್, ಸರ್ಕಾರದ ದರಿದ್ರತನ. ಈ ನಿಟ್ಟಿನಲ್ಲಿ ನಮ್ ಇಲಾಖೆಯ ಪೊಲೀಸರನ್ನೆ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
