Bannanje 90- Vishwa Namana ನಾಡು ಕಂಡ ಶ್ರೇಷ್ಠ ವಿದ್ವಾಂಸ , ಅಪ್ರತಿಮ ಉಪನ್ಯಾಸಕಾರ , ಕವಿ, ಪತ್ರಕರ್ತ , ವಿದ್ಯಾ ವಾಚಸ್ಪತಿ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರ ಬಹುಮುಖಿ ವ್ಯಕ್ತಿತ್ವವನ್ನು ಸ್ಮರಿಸುವ ಬನ್ನಂಜೆ 90 ವಿಶ್ವನಮನ” ಶಿವಮೊಗ್ಗದಲ್ಲಿ ಬರುವ ಭಾನುವಾರ (04/01/2026) ಸಂಜೆ 4ರಿಂದ ರಾತ್ರಿ 9ರ ವರೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರಿನ ಬನ್ನಂಜೆ ಪ್ರತಿಷ್ಠಾನ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಶಿವಮೊಗ್ಗದ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ , ಬನ್ನಂಜೆ ಅಭಿಮಾನಿ ಬಳಗ , ನವ್ಯಶ್ರೀ ಈಶ್ವರ ವನ ಚಾರಿಟಬಲ್ ಟ್ರಸ್ಟ್ ಹಾಗು ಅನೇಕ ಸಮಾನ ಮನಸ್ಕ ಸಂಸ್ಥೆಗಳ ಸಹಯೋಗವಿದೆ
Bannanje 90- Vishwa Namana ಸಾಂಸ್ಕೃತಿಕ ಲೋಕದ ಅನೇಕ ಪ್ರಮುಖರು ಈ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ .
ಬನ್ನಿ, ಕೊಂಚ ಹೊತ್ತು ಬನ್ನಂಜೆಯವರ ವಾಜ್ಮಯ ಪ್ರಪಂಚದಲ್ಲಿ ವಿಹರಿಸೋಣ… ಕಾರ್ಯಕ್ರಮದ ನಂತರ ಸಹಭೋಜನ ಮಾಡೋಣ
