Dr. C.V. Rudraradhya ಶರಣು ವಿಶ್ವ ವಚನ ಫೌಂಡೇಶನ್, ಮೈಸೂರು, ಅಂತರಾಷ್ಟ್ರೀಯ ಸಂಸ್ಥೆ, ಹಲವು ವಿಧದ ಸಮಾಜ ಸೇವೆಯಲ್ಲಿ ನಿರತವಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಸಾರ್ಥಕ ಕಾರ್ಯ ಮಾಡುತ್ತಿದೆ.
ಯೋಗಾಚಾರ್ಯ ಡಾ. ಸಿ.ವಿ. ರುದ್ರಾರಾಧ್ಯ , ಸಂಸ್ಥಾಪಕ ಕಾರ್ಯಾಧ್ಯಕ್ಷರು, ಶ್ರೀ ಶಿವಗಂಗಾ ಯೋಗ ಕೇಂದ್ರ ಶಿವಮೊಗ್ಗ ಇವರು ಯೋಗ ಕ್ಷೇತ್ರಕ್ಕೆ ತಮ್ಮ ಬದುಕನ್ನೇ ಅರ್ಪಿಸಿಕೊಂಡು ಸಾಧನೆಯ ಹಿಂದೆ ಇರುವ ತ್ಯಾಗ ಪರಿಶ್ರಮ ನಿಷ್ಠೆ ಮತ್ತು ಸಮಾಜಕ್ಕೆ ಆದರ್ಶವಾಗಿರುವ ಇವರ ಸೇವೆಯನ್ನು ಗುರುತಿಸಿ ಮೈಸೂರಿನಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಶರಣು ವಿಶ್ವ ವಚನ ಫೌಂಡೇಶನ್ ಅಂತರಾಷ್ಟ್ರೀಯ ಸಂಸ್ಥೆ ತನ್ನ ಹನ್ನೊಂದನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಇವರ ಸಹಯೋಗದಲ್ಲಿ ಡಿಸೆಂಬರ್ 28ರಂದು ಮೈಸೂರಿನ ಕನ್ನಡ ಸಾಹಿತ್ಯ ಭವನದಲ್ಲಿ ಪೂಜ್ಯರು ಮತ್ತು ಗಣ್ಯರ ಸಮ್ಮುಖದಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಕಲ್ಯಾಣಿ ಪ್ರಶಸ್ತಿ 2025 ಶರಣು ವಿಶ್ವ ವಚನ ಫೌಂಡೇಶನ್, ಮೈಸೂರು ಇವರು ಪ್ರಧಾನ ಮಾಡಿದರು.
Dr. C.V. Rudraradhya ಈ ಸಂದರ್ಭದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ವಿಶ್ವಸ್ಥ ಸಮಿತಿ ಅಧ್ಯಕ್ಷರಾದ ಶ್ರೀಯುತರಾದ ಎಸ್ ರುದ್ರೇಗೌಡರು ಮತ್ತು ಸದಸ್ಯರಾದ ಬಿ.ಸಿ ನಂಜುಂಡ ಶೆಟ್ಟರು, ಹೊಸ ತೋಟ ಸೂರ್ಯನಾರಾಯಣ, ಧನಂಜಯ ಸರ್ಜಿ ಕಲಗೋಡು ರತ್ನಾಕರ್, ಹಾಲಪ್ಪನವರು, ಬಿ.ವೈ. ಅರುಣದೇವಿ, ಎಸ್ ಎಸ್ ಜ್ಯೋತಿ ಪ್ರಕಾಶ್, ಚಂದ್ರಶೇಖರ್ ಪೋಷಕ ಸಮಿತಿ ಸದಸ್ಯರು ಮತ್ತು ಶಿಷ್ಯ ವೃಂದದವರು ಅಭಿನಂದಿಸಿದ್ದಾರೆ
