Shivaganga Yoga Center ಪ್ರತಿ ವರ್ಷ ಧನುರ್ಮಾಸ ಪೂಜೆಯ ವಿಷ್ಣುವಿನ ಆರಾಧನೆಗೆ ಶ್ರೇಷ್ಠವಾದ ಮಾಸ. ಮಾನಸಿಕ ನೆಮ್ಮದಿಗೆ ಪೂಜೆ ಪುನಸ್ಕಾರ ಅಗತ್ಯ ಎಂದು ಕೃಷಿ ಶಿವಮೊಗ್ಗ ನಗರದ ಶಿವಗಂಗಾ ಯೋಗ ಕೇಂದ್ರದ ಯೋಗ ಶಿಬಿರಾರ್ಥಿ ಬಿಂದು ವಿಜಯಕುಮಾರ್ ಹೇಳಿದರು.
ಕೃಷಿ ನಗರ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಧನುರ್ಮಾಸದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೂರ್ಯೋದಯಕ್ಕಿಂತ ಮುನ್ನ ಈ ಪವಿತ್ರವಾದ ಪೂಜೆಯನ್ನು ಮಾಡುವುದರಿಂದ ಇಷ್ಟಾರ್ಥಗಳು, ಸುಖ, ಸಮೃದ್ಧಿ.ಮುಕ್ತಿ ದೊರೆಯುತ್ತದೆ ಎಂದರು.
Shivaganga Yoga Center ಧನುರ್ಮಾಸ ಪೂಜೆಯ ಆಚರಣೆಯಿಂದ ಮನಕ್ಕೆ, ಮನೆತನಕ್ಕೆ ಒಳ್ಳೆಯದಾಗುವುದರ ಜೊತೆಗೆ ಈ ಪೂಜಾ ವಿಧಾನದಲ್ಲಿ ಪಾಲ್ಗೊಂಡವರಿಗೂ ಸಹ ಫಲಗಳು ಪ್ರಾಪ್ತಿಯಾಗುತ್ತದೆ ಎಂದ ಅವರು, ಪ್ರತಿದಿನ ಈ ಒಂದು ತಿಂಗಳ ಕಾಲ ಈ ಧನುರ್ಮಾಸದಲ್ಲಿ
ಕೃಷಿ ನಗರ ಹಾಗೂ ಬಸವೇಶ್ವರ ನಗರದ ನಿವಾಸಿಗಳು ಮಹಿಳಾ ಸಂಘದವರು ಮತ್ತು ಶಕ್ತಿ ಗಣಪತಿ ದೇವಸ್ಥಾನದ ಮಹಿಳಾ ಮಂಡಳಿಯವರು ಈ ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳು ತ್ತಿರುವುದು, ಜೊತೆಗೆ ಪ್ರತಿ ದಿನ ವಿಷ್ಣುವಿಗೆ ಪ್ರಿಯವಾದ.ಕಾರ ಪೊಂಗಲ್ ಸಿಹಿ ಪೊಂಗಲ್ ಪ್ರಸಾದ ಮಾಡಿ ಎಲ್ಲರಿಗೂ ವಿತರಣೆ ಮಾಡುತ್ತಿರುವುದು ಅನುಕರಣೀಯ ಎಂದರು.
ಕಾರ್ಯಕ್ರಮದಲ್ಲಿ ತೇಜಸ್ವಿನಿ, ವಾಣಿ, ಶೋಭಾ, ಕಲ್ಪನಾ, ಭುವನ, ದೀಪ, ಪೂರ್ಣಿಮಾ ಮತ್ತು ಮೀನ ಭಾಗವಹಿಸಿದ್ದರು.
