Karnataka Sangha Shivamogga ದಿನಾಂಕ 27ನೇ ಡಿಸೆಂಬರ್ 2025ರ ಶುಕ್ರವಾರ ಸಂಜೆ 5:30ಕ್ಕೆ ಹಸೂಡಿ ವೆಂಕಟ ಶಾಸ್ತ್ರೀ ಸಾಹಿತ್ಯ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ಡಾ. ಶಿವಮೊಗ್ಗ ಸುಬ್ಬಣ್ಣ ಅವರ ಸಹೋದರರು ಮತ್ತು ಸಹೋದರಿ ಸ್ಥಾಪಿಸಿರುವ ದಿ|| ರಂಗನಾಯಕಮ್ಮ ಗಣೇಶರಾವ್ ದತ್ತಿನಿಧಿ ಪ್ರಾಯೋಜಿತ ದಿ. 29-11-2025ರಂದು ನಡೆದ ಕನ್ನಡ ಭಾವಗೀತೆ ಗಾಯನ ಸ್ಪರ್ಧೆ ವಿಜೇತರಿಗೆ ‘ಬಹುಮಾನ ವಿತರಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಶ್ರೀ ಪಂಚಮ ಹಳಿಬಂಡಿ, ಪ್ರಸಿದ್ಧ ಗಾಯಕರು, ಬೆಂಗಳೂರು ಇವರು ಭಾಗವಹಿಸಲಿದ್ದು, ಬಹುಮಾನ ವಿತರಣೆಯ ನಂತರ ‘ಭಾವ ಸಂಧ್ಯಾ’ ಆಯ್ದ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
