Breaking News ಚಿತ್ರದುರ್ಗ ಜಿಲ್ಲೆಯ ಗೋರ್ಲರ್ಡ್ಕು ಕ್ರಾಸ್ ಬಳಿ ಬಸ್ ಲಾರಿ ಅಪಘಾತ ಸಂಭವಿಸಿದೆ.
ಮುಂಜಾನೆ 2-05 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಿದ್ದೆಗಣ್ಣಿನಲ್ಲಿದ್ದ ಲಾರಿ ಡ್ರೈವರ್ ಎದುರು ಬರುತ್ತಿದಗದ ಸೀಬರ್ಡ್ ಹೆಸರಿನ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದರ ಪರಿಣಾಮ
ಬಸ್ ನ ಡಿಸೆಲ್ ಟ್ಯಾಂಕ್ ಸ್ಫೋಟಿಸಿ ಭುಗಿಲ್ಲನೆ ಬೆಂಕಿ ಹೊತ್ತಿಕೊಂಡಿದೆ.
ಬಸ್ಸಿಗೆ ಒಂದೇ ಹೊರಬಾಗಿಲು ಇದ್ದ ಕಾರಣ ಸ್ಥಳಲ್ಲೆ ಒಂಭತ್ತು ಮಂದಿ ಪ್ರಯಾಣಿಕರು ಧಿಗ್ಗನೆ ಎದ್ದ ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಲಾರದೇ ಸುಟ್ಟು ಕರಕಲಾಗಿದ್ದಾರೆ. ದೇಹಗಳು
ಗುರುತೇ ಸಿಗದಂತಾಗಿದೆ
ಎಂದು ಸ್ಥಳೀಯ ಪರಿಹಾರ ಕ್ರಮ ಕೈಗೊಂಡಿರುವ ಅಧಿಕಾರಿಗಳು ಹೇಳಿದ್ದಾರೆ.
Breaking News ಚಿತ್ರದುರ್ಗದ ಗೊರ್ಲಡ್ಕು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಗಾಯಾಳುಗಳಿಗೆ 50,000 ರೂ. ನೆರವು ನೀಡಲಾಗುವುದು ಎಂದು ಪ್ರಧಾನಿ ಸಚಿವಾಲಯ ಪ್ರಕಟಿಸಿದೆ. .
