ತುಮಕೂರು ದಿಬ್ಬೂರು ರಸ್ತೆ ವಾಸಿ ಶೇಖರಪ್ಪ ಎಂಬುವವರ ಮಗ ರಾಜು ಎಂಬ 37 ವರ್ಷ ವ್ಯಕ್ತಿ ಡಿ. 09 ರಂದು ಕುಂಸಿ ಆಸ್ಪತ್ರೆಗೆ ಎದೆಯುರಿ ಎಂದು ಸ್ವಯಂ ದಾಖಲಾಗಿದ್ದು, ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಡಿ.12 ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತೆಗೆ ಅಂಬುಲೆನ್ಸ್ ಮೂಲಕ ಕಳುಹಿಸಿದ್ದು, ಮಾರ್ಗ ಮಧ್ಯೆ ಮೃತ ಪಟ್ಟಿರುತ್ತಾರೆ.
ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಈ ವ್ಯಕ್ತಿಯು 5.8 ಅಡಿ ಎತ್ತರ, ದೃಢಕಾಯ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಮೈಮೇಲೆ ಮೆರೂನ್ ಕಲರ್ ಶರ್ಟ್, ಕ್ರೀಮ್ ಕಲರ್ ಪ್ಯಾಂಟ್ ಧರಿಸಿರುತ್ತಾನೆ.
ಈ ಮೃತನ ವಾರಸುದಾರರ ಬಗ್ಗೆ ಸುಳಿವು ದೊರೆತಲ್ಲಿ ಕುಂಸಿ ಪೊಲೀಸ್ ಠಾಣೆ ದೂ.ಸಂ.: 9480803351/ 08182-261412/ 261413 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ತಿಳಿಸಿದೆ.
