Friday, December 19, 2025
Friday, December 19, 2025

D. K. Shivakumar ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ತರ ವಾಸ್ತವ ಪರಿಸ್ಥಿತಿ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ

Date:

D. K. Shivakumar ಪ್ರತ್ಯೇಕವಾದ ಸಮಿತಿಯೊಂದನ್ನು ರಚಿಸಿ, ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ತರ ವಾಸ್ತವ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ಅವರಿಗೆ ಸಹಾಯಹಸ್ತ ಕಲ್ಪಿಸುವುದಾಗಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಹೇಳಿದರು.

ಕೃಷ್ಣ ಮೇಲ್ದಂಡೆ ಯೋಜನೆಯಡಿಯಲ್ಲಿ ವಸತಿ ಹಾಗೂ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪುನರ್ ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ನಿಯಮ 330ರ ಮೇರೆಗೆ ಸದಸ್ಯರಾದ ನಿರಾಣಿ ಹಣಮಂತಪ್ಪ ರುದ್ರಪ್ಪ ಹಾಗೂ ಪಿ.ಹೆಚ್. ಪೂಜಾರ್ ಅವರು ಪರಿಷತ್ತಿನಲ್ಲಿ ಗುರುವಾರ ಮಂಡಿಸಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರವು ಸಂತ್ರಸ್ಥರ ನೆರವಿಗೆ ಬದ್ಧವಾಗಿದೆ ಎಂದು ತಿಳಿಸಿದರು.

D. K. Shivakumar ಕೃಷ್ಣ ಮೇಲ್ದಂಡೆ ಯೋಜನೆಯ ಪ್ರದೇಶದ ಸಂತ್ರಸ್ತರಿಗೆ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ. ಇಲ್ಲಿವರೆಗೆ ಈ ಭಾಗದಲ್ಲಿ ಶೇ.50ರಷ್ಡು ಮಾತ್ರ ನೀರಾವರಿಯಾಗಿದ್ದು, ಇದುವರೆಗೆ ಪೂರ್ಣ ಪ್ರಮಾಣದಲ್ಲಿ ನೀರಾವರಿ ಆಗಿರುವುದಿಲ್ಲ. ಇದುವರೆಗೆ 146 ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿಗಳು ಸರಿಯಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಏನಾಗಿದೆ ಎಂದು ನೋಡಿಲ್ಲ. ಇನ್ನೂ 20 ವರ್ಷಗಳ ಕಳೆದರೆ ಅಲ್ಲಿನ ಜನ ಘೇರಾವು ಹಾಕುವ ಪರಿಸ್ಥಿತಿ ಬರಬಹುದು. ಆಣೆಕಟ್ಟು ವಿಸ್ತರಣೆಯಿಂದಾಗಿ ಬಾಧಿತವಾದ ಗ್ರಾಮಗಳಲ್ಲಿನ ಸಂತ್ರಸ್ಥರ ಪರಿಸ್ಥಿತಿ ಸರಿ ಇಲ್ಲ ಎಂದು ಸದಸ್ಯರಾದ ಪಿ ಎಚ್ ಪೂಜಾರ ಹಾಗೂ ನಿರಾಣಿ ಹಣಮಂತ ರುದ್ರಪ್ಪ ಅವರು ಸದನದಲ್ಲಿ ನೋವು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 20 ಮತ್ತು 21 ರಂದು ರೋಟರಿ ಡಿಸ್ಟ್ರಿಕ್ಟ್ ಮಲೆನಾಡು ಕ್ರೀಡೋತ್ಸವ

Rotary Club ಶಿವಮೊಗ್ಗ ನಗರವು ಬರುವ ಡಿಸೆಂಬರ್ 20 ಮತ್ತು 21...

Tiger and Lion Safari ಡಿ.23 ಮತ್ತು 30 ರ ಮಂಗಳವಾರದಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ವೀಕ್ಷಣೆಗೆ ಆಹ್ವಾನ

Tiger and Lion Safari ಕ್ರಿಸ್‌ಮಸ್ ರಜೆಯ ಹಿನ್ನಲೆಯಲ್ಲಿ ಸಾರ್ವಜನಿಕರು ಮೃಗಾಲಯ...

Karnataka State Road Safety Authority ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಅಂಗೀಕಾರ

Karnataka State Road Safety Authority ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ...